LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಈಜಿಪ್ಟ್ ಸಮುದ್ರದಲ್ಲಿ ದೈತ್ಯ ಶಾರ್ಕ್ ದಾಳಿಗೆ ಬಲಿಯಾದ ಯುವಕ

ಸಮುದ್ರದಲ್ಲಿ ಈಜಾಡುವುದು, ಆಟವಾಡುವುದು ರೋಮಾಂಚನಕಾರಿಯಾಗಿದೆ. ಆದರೆ ಇದು ಕೆಲವೊಮ್ಮೆ ಅಪಾಯಕಾರಿಯೂ ಆಗಿರಬಹುದು. ಸಮುದ್ರದಲ್ಲಿ ಕಂಡುಬರುವ ಅಪಾಯಕಾರಿ ಜೀವಿಗಳು ಕೆಲವೊಮ್ಮೆ ಜನರ ಜೀವವನ್ನೇ ತೆಗೆದುಬಿಡುತ್ತದೆ. ಇದೇ ರೀತಿಯ ಪ್ರಕರಣವೊಂದು ಇತ್ತೀಚಿಗೆ ಈಜಿಪ್ಟ್ ನಲ್ಲಿ ನಡೆದಿದೆ. ಈ ಘಟನೆಯ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಈಜಿಪ್ಟ್‌ನ ಹುರ್ಘಡಾದ ಸಮುದ್ರದಲ್ಲಿ ಯುವಕನೊಬ್ಬ ಈಜಾಡುತ್ತಿರುವ ವೇಳೆ ದೈತ್ಯ ಶಾರ್ಕ್ ಆತನ ಮೇಲೆ ದಾಳಿ ಮಾಡಿದೆ. ಆತನ ರಕ್ಷಣೆಗೆಂದು ಬೋಟ್ ಮೂಲಕ ರಕ್ಷಣಾಗಾರರು ಹೋಗುವಷ್ಟರಲ್ಲಿ ಶಾರ್ಕ್ ಆತನ ಪ್ರಾಣವನ್ನೇ ತೆಗೆದುಬಿಟ್ಟಿತ್ತು. 23 ವರ್ಷ ವಯಸ್ಸಿನ ವ್ಲಾದಿಮಿರ್ ಪೊಪೊವ್ ಶಾರ್ಕ್ ದಾಳಿಗೆ ಬಲಿಯಾದ ಯುವಕ. ಈ ಭೀಕರ ದಾಳಿಯನ್ನು ಆ ವ್ಯಕ್ತಿಯ ತಂದೆ ಕಣ್ಣಾರೆ ಕಂಡಿದ್ದಾರೆ. ನಾವು ವಿಶ್ರಾಂತಿ ಪಡೆಯಲೆಂದು ಬೀಚ್​​ಗೆ ಹೋಗಿದ್ದೆವು. ನನ್ನ ಮಗನ ಮೇಲೆ ಶಾರ್ಕ್ ಮೀನು ದಾಳಿ ಮಾಡಿತು. ಇದೆಲ್ಲಾ ಕೇವಲ ಸೆಕೆಂಡುಗಳಲ್ಲಿ ಸಂಭವಿಸಿತು, ನಮ್ಮ ಕೈಯಲ್ಲಿ ಆತನ ಪ್ರಾಣ ರಕ್ಷಣೆ ಮಾಡಲಾಗಿಲ್ಲ ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಸಮುದ್ರದ ಮಧ್ಯೆ ವ್ಯಕ್ತಿಯು ಈಜಾಡುತ್ತಿದ್ದಾಗ ಶಾರ್ಕ್ ಆತನ ಮೇಲೆ ಹಠಾತ್ತನೆ ದಾಳಿ ಮಾಡುತ್ತದೆ. ತಕ್ಷಣ ಆತ ಜೀವವನ್ನು ಉಳಿಸಲು ಸಹಾಯ ಕೇಳುತ್ತಾನೆ, ಹೇಗಾದರೂ ಈಜಿಕೊಂಡು ದಡ ಸೇರಬೇಕು ಎಂದುಕೊಳ್ಳುತ್ತಾನೆ. ಆದರೆ ಬಲಶಾಲಿ ಶಾರ್ಕ್ ಅಷ್ಟರಲ್ಲಿ ಆತನನ್ನು ಎಳೆದು ತಿಂದೇ ಬಿಡುತ್ತದೆ. ಆ ವ್ಯಕ್ತಿಯ ರಕ್ಷಣೆಗೆಂದು ಬೋಟ್ ನಲ್ಲಿ ರಕ್ಷಣಾಗಾರರು ಹೋಗುವಷ್ಟರಲ್ಲಿ ಶಾರ್ಕ್ ಆ ಮನುಷ್ಯನ ಪ್ರಾಣವನ್ನೇ ತೆಗೆದುಬಿಟ್ಟಿತ್ತು. ಅಲ್ಲೇ ಅಕ್ಕಪಕ್ಕದಲ್ಲಿ ನಿಂತಿದ್ದ ಜನರು ಈ ಭಯಾನಕ ದೃಶ್ಯವನ್ನು ವೀಕ್ಷಿಸುತ್ತಾ ಚೀರಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೌರಕಾರ್ಮಿಕರಿಗೆ ಸಿಹಿ ಸುದ್ದಿ .!ವಾರಕ್ಕೊಮ್ಮೆ ಸಿಇಒ ತಾಲ್ಲೂಕು-ಗ್ರಾಪಂ ಕಚೇರಿಗೆ ಕಡ್ಡಾಯ ಭೇಟಿ.!ಹತ್ತುದಿನದಲ್ಲಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಎಷ್ಟು ಕೋಟಿ ಹಣ ಬಂತು.?ರೈತರು, ಬಾಳೆ ಬೆಳೆಗಾರರು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಇರುವವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ2024 ಜನವರಿ ಸಿಂಹ ರಾಶಿಯವರಿಗೆ ಅದೃಷ್ಟ ಖುಲಾಯಿಸುತ್ತದೆ ಹಣಕಾಸಿನ ವಿಚಾರದಲ್ಲಿ ಚಮತ್ಕಾರವೇ ನಡೆಯುತ್ತದೆ!----ಸಿದ್ಧರಾಮೇಶ್ವರ ಅವರ ವಚನ …!ಪಾಕಿಸ್ತಾನದ 'ಭಯೋತ್ಪಾದನೆ' ಆಟಕ್ಕೆ ಭಾರತ ಅವಕಾಶ ನೀಡುವುದಿಲ್ಲ’- ಎಸ್.ಜೈಶಂಕರ್ರಾಮಮಂದಿರ ಉದ್ಘಾಟನೆಗೆ ಕೇಂದ್ರ ಸರ್ಕಾರ ರಜೆ ಘೋಷಿಸಲಿ - ಸಿಎಂ ಸಿದ್ದರಾಮಯ್ಯಹಸಮಣೆ ಏರಲು ಸಜ್ಜಾದ 'ಗಿಲ್ಲಿ’ ನಟಿ ರಾಕುಲ್​ ಪ್ರೀತ್​ ಸಿಂಗ್ದೇಶದಲ್ಲಿ 573 ಹೊಸ ಕೋವಿಡ್- 19 ಪ್ರಕರಣ ಪತ್ತೆ; ರಾಜ್ಯದಲ್ಲಿ ಒಂದು ಸಾವು