LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಯಾಕೆ ಬರುತ್ತದೆ ಗೊತ್ತಾ? – ಇಲ್ಲಿದೆ ಅಪರೂಪದ ಮಾಹಿತಿ..

ಆಹಾರ ಪ್ರಿಯರ ನೆಚ್ಚಿನ ತರಕಾರಿ ಈರುಳ್ಳಿ. ಈ ಒಂದು ತರಕಾರಿ ಎಲ್ಲಾ ಅಡುಗೆಗೆ ಅತ್ಯಗತ್ಯ ಎನಿಸಿಕೊಂಡಿದೆ. ರುಚಿಯ ಜೊತೆಗೆ ಪೋಷಕಾಂಶಗಳಿಂದ ಸಮೃದ್ದವಾಗಿರುವ ಈರುಳ್ಳಿಯನ್ನು (Onion) ಹಸಿಯಾಗಿಯೂ, ಬೇಯಿಸಿಯೂ ಅಡುಗೆಗಳಲ್ಲಿ ಬಳಸಲಾಗುತ್ತದೆ.

ಪ್ರತ್ಯೇಕತೆ


ಈರುಳ್ಳಿ ಹಚ್ಚುವಾಗ ಕಣ್ಣಿನಲ್ಲಿ ನೀರು (Tears) ಬರುವುದು ಇದನ್ನು ಇತರ ತರಕಾರಿಗಳಿಂದ ಭಿನ್ನವಾಗಿ ಇರುವಂತೆ ಮಾಡುವ ಅಂಶ. ಬೇರೆ ಯಾವ ತರಕಾರಿ ಕತ್ತರಿಸುವಾಗಲೂ ಈ ಅನುಭವವಾಗುವುದಿಲ್ಲ. ಅದಕ್ಕೆ ಕಾರಣವೇನು ಎನ್ನುವುದರ ವಿವರ ಇಲ್ಲಿದೆ.

ಕಣ್ಣೀರು ಏಕೆ ಬರುತ್ತದೆ?


ಈರುಳ್ಳಿಯನ್ನು ತುಂಡು ಮಾಡುವಾಗ ಅದರ ಸೆಲ್ ಗ್ಯಾಸೊಂದನ್ನು ಬಿಡುಗಡೆ ಮಾಡುತ್ತದೆ. ಪ್ರೊಪನೆಥಿಯೋಲ್ – ಎಸ್ – ಓಕ್ಸೈಡ್ (Propanethial-S-Oxide) ಹೆಸರಿನ ಈ ಗ್ಯಾಸ್ ನಮ್ಮ ಕಣ್ಣಿನ ಸಂಪರ್ಕಕ್ಕೆ ಬಂದು ರಾಸಾಯನಿಕ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ಸಲ್ಫೂರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಆಗ ಕಣ್ಣು ಉರಿಯಲು ಆರಂಭವಾಗುತ್ತದೆ ಮತ್ತು ಈ ಆ್ಯಸಿಡ್ ಅನ್ನು ಹೊರ ಹಾಕಲು ಕಣ್ಣು ಹೆಚ್ಚಿನ ನೀರನ್ನು ಬಿಡುಗಡೆ ಮಾಡುತ್ತದೆ. ಅದು ಕಣ್ಣೀರಿನ ರೂಪದಲ್ಲಿ ಹೊರ ಬರುತ್ತದೆ.

ನಿಯಂತ್ರಣ ಹೇಗೆ?


ಈರುಳ್ಳಿ ತುಂಡರಿಸುವಾಗ ಕಂಡು ಬರುವ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಿದೆ. ಒಂದು ಸಣ್ಣ ತುಂಡು ಈರುಳ್ಳಿಯನ್ನು ಆರಂಭದಲ್ಲಿ ಕಿವಿ ಮೇಲಿಟ್ಟು ಬಳಿಕ ಕತ್ತರಿಸಲು ಆರಂಭಿಸಬೇಕು ಎಂದು ಕೆಲವರು ಸಲಹೆ ನೀಡುತ್ತಾರೆ. ಚ್ಯೂಯಿಂಗ್ ಗಮ್ ಅಗೆಯುತ್ತಾ ಈರುಳ್ಳಿ ತುಂಡರಿಸಿದರೆ ಕಣ್ಣೀರು ಬರುವುದಿಲ್ಲ ಎಂದು ಇನ್ನು ಕೆಲವರು ಹೇಳುತ್ತಾರೆ.

 

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾರಕ್ಕೊಮ್ಮೆ ಸಿಇಒ ತಾಲ್ಲೂಕು-ಗ್ರಾಪಂ ಕಚೇರಿಗೆ ಕಡ್ಡಾಯ ಭೇಟಿ.!ಹತ್ತುದಿನದಲ್ಲಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಎಷ್ಟು ಕೋಟಿ ಹಣ ಬಂತು.?ರೈತರು, ಬಾಳೆ ಬೆಳೆಗಾರರು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಇರುವವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ2024 ಜನವರಿ ಸಿಂಹ ರಾಶಿಯವರಿಗೆ ಅದೃಷ್ಟ ಖುಲಾಯಿಸುತ್ತದೆ ಹಣಕಾಸಿನ ವಿಚಾರದಲ್ಲಿ ಚಮತ್ಕಾರವೇ ನಡೆಯುತ್ತದೆ!----ಸಿದ್ಧರಾಮೇಶ್ವರ ಅವರ ವಚನ …!ಪಾಕಿಸ್ತಾನದ 'ಭಯೋತ್ಪಾದನೆ' ಆಟಕ್ಕೆ ಭಾರತ ಅವಕಾಶ ನೀಡುವುದಿಲ್ಲ’- ಎಸ್.ಜೈಶಂಕರ್ರಾಮಮಂದಿರ ಉದ್ಘಾಟನೆಗೆ ಕೇಂದ್ರ ಸರ್ಕಾರ ರಜೆ ಘೋಷಿಸಲಿ - ಸಿಎಂ ಸಿದ್ದರಾಮಯ್ಯಹಸಮಣೆ ಏರಲು ಸಜ್ಜಾದ 'ಗಿಲ್ಲಿ’ ನಟಿ ರಾಕುಲ್​ ಪ್ರೀತ್​ ಸಿಂಗ್ದೇಶದಲ್ಲಿ 573 ಹೊಸ ಕೋವಿಡ್- 19 ಪ್ರಕರಣ ಪತ್ತೆ; ರಾಜ್ಯದಲ್ಲಿ ಒಂದು ಸಾವು'ಸಿಎಂ ಸಿದ್ದರಾಮಯ್ಯರು ರಾಮನ ಆದರ್ಶ, ಜನಾನುರಾಗ ಪಡೆಯಲಿ' - ಸುಬುಧೇಂದ್ರ ತೀರ್ಥರು