LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಉಡುಪಿ: ಗಂಡನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪತ್ನಿ, ಮರಣೋತ್ತರ ವರದಿ, ಕೊಲೆಗೆ ಮತ್ತೊಂದು ಟ್ವಿಸ್ಟ್..!

ಉಡುಪಿ ಜಿಲ್ಲೆಯಲ್ಲಿ ಬಿಚ್ಚಿ ಬೀಳಿಸಿದ್ದ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ್ದು ವರದಿಯಲ್ಲಿ ಉಸಿರುಗಟ್ಟಿ ಸಾವನಪ್ಪಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಉಸಿರುಗಟ್ಟಿ ಸಾವು ಸಂಭವಿಸಿರುವುದು, ಮುಖದಲ್ಲಿ ಗಾಯದ ಗುರುತು ಮೂಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿದೆ. ಪೊಲೀಸ್ ತನಿಖೆ ಮತ್ತಷ್ಟು ತಿರುಗುಗೊಂಡಿದೆ ಮೊಬೈಲ್ ಸಂಭಾಷಣೆ, ಕರೆ ಮಾಡಿದ ವಿವರ, ನೆಟ್ವರ್ಕ್ ಮಾಹಿತಿ, ಸಿಸಿಟಿವಿ ಬಗ್ಗೆ ಪೊಲೀಸರಿಂದ ತನಿಖೆ ವೇಗ ಪಡೆದುಕೊಂಡಿದೆ. ಕೊಲೆ ಸಂಶಯದಿಂದ ಆರಂಭದಲ್ಲೇ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಉಸಿರುಗಟ್ಟಿ ಸಾಯಿಸಿರುವುದು ಪೋಸ್ಟ್ಮಾರ್ಟಮ್ ರಿಪೋರ್ಟ್ ನಲ್ಲಿ ಸಾಬೀತಾಗಿದೆ. ಕೊಲೆಯಾಗಿ 6ನೇ ದಿನ ಮೂಳೆ ಸಂಗ್ರಹಿಸಿರುವ ಪೊಲೀಸರು ವಿಷ ಬಳಕೆಯ ರಾಸಾಯನಿಕ ಅಂಶಗಳ ಬಗ್ಗೆ ಕಾದು ನೋಡಬೇಕಾಗಿದೆ.

ಮೃತ ಬಾಲಕೃಷ್ಣ ಪೂಜಾರಿಯ ಸಹೋದರ ಪ್ರಕಾಶ್ “ಸ್ಲೋ ಪಾಯ್ಸನ್ ಕೊಟ್ಟರೂ ಆಸ್ಪತ್ರೆಗಳಿಗೆ ಯಾಕೆ ಗೊತ್ತಾಗಿಲ್ಲ?” ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಮಣಿಪಾಲ, ಕೆಎಂಸಿ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ಯಾವ ಆಸ್ಪತ್ರೆಯಲ್ಲೂ ಸ್ಲೋ ಪಾಯಿಸನ್ ಕೊಟ್ಟ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾಗಿ ಆಸ್ಪತ್ರೆಗಳನ್ನು ಕೂಡ ಆರೋಪಿ ಸ್ಥಾನದಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಮಾ ಸಹೋದರ ಸಂದೀಪ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಪ್ರತಿಮಾಳ ಕೃತ್ಯ ಬಯಲಿಗೆ ತಂದವನೇ ಸಂದೀಪ್. ವಾಯ್ಸ್ ರೆಕಾರ್ಡ್ ಮಾಡುವ ಮೂಲಕ ಸಂಚು ಬಯಲು ಮಾಡಿದ್ದು, ಈಗ “ನನಗೂ ಸಹೋದರಿ ಸ್ಲೋ ಪಾಯಿಸನ್ ಹಾಕಿರಬಹುದು” ಎಂದು ಹೇಳಿಕೆ ನೀಡಿದ್ದಾನೆ.

“ನನಗೆ ನರಗಳ ನೋವು ಕಾಣಿಸುತ್ತಿದೆ. ಸಹೋದರಿಯ ಅಕ್ರಮ ಸಂಬಂಧಕ್ಕೆ ನಾನು ಅಡ್ಡಿಯಾಗಿದ್ದೆ. ನಾನು ಕೂಡ ಹೆಲ್ತ್ ಚೆಕ್ ಅಪ್ ಮಾಡಿಸಿಕೊಳ್ಳಬೇಕು. ಎರಡು ಬಾರಿ ಆಕೆಯ ಮನೆಯಲ್ಲಿ ಊಟ ಮಾಡಿದ್ದೆ. ಆಕೆ ನನಗೂ ವಿಷ ಹಾಕಿರಬಹುದು ಎಂಬ ಸಂಶಯವಿದೆ.ಪ್ರತಿಮಾಗೆ ಹಾಗು ದಿಲೀಪ್ ಇಬ್ಬರಿಗೂ ಕಠಿಣ ಶಿಕ್ಷೆ ಆಗಬೇಕು” ಎಂದು ಹೇಳಿದ್ದಾರೆ.

ದಿಲೀಪ್ ಹೆಗ್ಡೆ ಜೊತೆಗಿನ ಒಡನಾಟ ಬಯಲಾದ ಬಳಿಕ ಮಾತುಕತೆ ವೇಳೆ ದಿಲೀಪ್ ತಂದೆ ಕೂಡ ಬಂದಿದ್ದು, ‘ಇನ್ನು ಮುಂದೆ ನನ್ನ ಮಗ ಆಕೆಯ ಜೊತೆ ಕಾಣಿಸಿಕೊಳ್ಳಲ್ಲ’ ಎಂದಿದ್ದರು. ಆದರೂ ಇಬ್ಬರ ನಡುವೆ ಒಡನಾಟ ನಿಲ್ಲದೆ ಮಾತುಕತೆ ನಡೆದ ಸಿಸಿಟಿವಿ ಫುಟೇಜ್ ಅಜೆಕಾರ ಠಾಣೆಯಲ್ಲಿ ಭದ್ರವಾಗಿದೆ. ಎಲ್ಲಾ ಸಾಕ್ಷಿಗಳ ಪರಿಗಣಿಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು” ಎಂದು ಸಂದೀಪ್ ಹೇಳಿಕೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರುದ್ರ ಭೂಮಿ ಸಂರಕ್ಷಣೆ: ಜನ ಪ್ರತಿನಿಧಿಯ ಮೊದಲ ಕೆಲಸ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ.!ಒಳಮೀಸಲಾತಿ:  ಸಚಿವ ಸಂಪುಟ ಉಪ ಸಮಿತಿಯ ರಚನೆಗೆ ನಮ್ಮ ಬೆಂಬಲವಿಲ್ಲ.!ನಾಗಮೋಹನದಾಸರವರ ಜನಗಣತಿ ಲೋಪ ಸರಿಪಡಿಸಿ: ಶ್ರೀ ಇಮ್ಮಡಿಸಿದ್ಧರಾಮೇಶ್ವರ ಸ್ವಾಮೀಜಿ.!ನಟ ದರ್ಶನ್- ಪವಿತ್ರಾ ಗೌಡ ಸೇರಿ 7 ಜನ ಆರೋಪಿಗಳಿಗೆ ಜೈಲು.!ಶಾಲಾ ಶಿಕ್ಷಕರಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಪದೋನ್ನತಿ.!ಇಂದಿನಿಂದ ಭಾರೀ ಮಳೆ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್.!ಜರ್ಮನಿಯಲ್ಲಿ ಕೈತುಂಬ ಸಂಬಳ ನೀಡುವ ಎಂಎನ್‌ಸಿ ಕಂಪನಿ ಬಿಟ್ಟು . ಐಪಿಎಸ್‌ ಅಧಿಕಾರಿ ಆದ ಕತೆ.!ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್​ಐಆರ್ .!ಗ್ರಾಮ ಪಂಚಾಯಿತಿ ನೌಕರರಿಗೆ ಗುಡ್ ನ್ಯೂಸ್.!ಭೂ ಪರಿವರ್ತನೆಯಿಂದ ವಿನಾಯಿತಿ ಎಷ್ಟು ಎಕೆರೆಗೆ ಇಲ್ಲಿದೆ ಮಾಹಿತಿ.!