LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗ್ರಾಹಕನಿಗೆ 50 ಪೈಸೆ ಹಿಂತಿರುಗಿಸದ ಅಂಚೆ ಇಲಾಖೆಗೆ 15 ಸಾವಿರ ರೂ. ದಂಡ..!

ಚೆನ್ನೈ : 50 ಪೈಸೆ ನಾಣ್ಯವು ಈಗಲೂ ಕಾನೂನಾತ್ಮಕವಾಗಿ ಚಲಾವಣೆಯಲ್ಲಿದೆಯಾದರೂ, ಅದರಿಂದ ಈಗ ಒಂದು ಚಾಕಲೇಟ್ ಕೂಡಾ ಖರೀದಿಸಲು ಸಾಧ್ಯವಿಲ್ಲ. ಆದರೆ ಅಂಚೆ ಇಲಾಖೆಯು ತನಗೆ 50 ಪೈಸೆಯನ್ನು ಹಿಂತಿರುಗಿಸದೆ ಇದ್ದುದಕ್ಕಾಗಿ ಮೊಕದ್ದಮೆ ಹೂಡಿದ್ದ ದೂರುದಾರನಿಗೆ, ಹಿಂತಿರುಗಿಸ ಬೇಕಾಗಿದ್ದ 50 ಪೈಸೆಯನ್ನು, 15 ಸಾವಿರ ದಂಡದೊಂದಿಗೆ ಪಾವತಿಸುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು, ಸ್ಥಳೀಯ ಅಂಚೆ ಕಚೇರಿಗೆ ಆದೇಶಿಸಿದೆ.


2023ರ ಡಿಸೆಂರ್ 3ರಂದು, ಚೆನ್ನೈನ ಗೆರುಗಂಬಾಕ್ಕಂ ನಿವಾಸಿ ಮಾನಶಾ ಎಂಬವರು, ರಿಜಿಸ್ಟರ್ಡ್ ಪತ್ರವೊಂದನ್ನು ಕಳುಹಿಸಲು ಪೊಲಿಚಲೂರ್ ಅಂಚೆ ಕಚೇರಿಗೆ ಆಗಮಿಸಿದ್ದರು. ರಿಜಿಸ್ಟರ್ಡ್ ಪತ್ರ ರವಾನೆಗೆ 29.50 ರೂ. ಶುಲ್ಕವಿದ್ದು, ಅವರು ಕೌಂಟರ್‌ನಲ್ಲಿ 30 ರೂ. ಪಾವತಿಸಿದ್ದರು.


ತನಗೆ 50 ರೂ. ಚಿಲ್ಲರೆಯನ್ನು ಪಾವತಿಸುವಂತೆ ಮಾನಶಾ ಕೇಳಿದಾಗ, ಕಂಪ್ಯೂಟರ್ ವ್ಯವಸ್ಥೆಯು ಆ ಮೊತ್ತವನ್ನು 30 ರೂ.ಗೆ ಸರಿಹೊಂದಿಸಿತೆಂದು ಕಚೇರಿಯ ಸಿಬ್ಬಂದಿ ತಿಳಿಸಿದರು. ಆಗ ಯುಪಿಐ ಮೂಲಕ 50 ಪೈಸೆ ಪಾವತಿಸುವಂತೆ ಮಾನಶಾ ಹೇಳಿದರು. ಆದರೆ ಅಂಚೆಕಚೇರಿಯು ತಾಂತ್ರಿಕ ಕಾರಣ ನೀಡಿ, ಚಿಲ್ಲರೆ ಹಣ ಪಾವತಿಸಲು ನಿರಾಕರಿಸಿತ್ತು.


ಈ ಬಗ್ಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮಾನಶಾ ಅವರು ದೂರು ನೀಡಿದ್ದರು. ದೈನಂದಿನ ಹಣಕಾಸು ವಹಿವಾಟುಗಳಲ್ಲಿ ಚಿಲ್ಲರೆ ಹಣವನ್ನು ‘ರೌಂಡ್ ಆಫ್’ ಮಾಡುವ ಅಂಚೆಕಚೇರಿಯ ಪರಿಪಾಠದಿಂದಾಗಿ ಗಣನೀಯ ಮೊತ್ತದ ಹಣ ಸೋರಿಕೆಯಾಗುತ್ತಿದೆ. ಇದು ಕಪ್ಪುಹಣ ಸಂಗ್ರಹಕ್ಕೆ ಕಾರಣವಾಗುತ್ತದೆ ಹಾಗೂ ಭಾರತದ ಸರಕಾರದ ಜಿಎಸ್‌ಟಿ ಆದಾಯಕ್ಕೆ ನಷ್ಟವಾಗುತ್ತಿದೆ ಎಂದು ಅವರು ಆಪಾದಿಸಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಹೆಂಡತಿ ಮಾತು ಕೇಳದೇ ಏರ್ ಇಂಡಿಯಾ ಹತ್ತಿದ್ರೆ ನಾನೇ ಇರ್ತಿರ್ಲಿಲ್ಲ'- ಡಾ.ಉಮಂಗ್ ಪಟೇಲ್ಇಂದಿನಿಂದ ರಾಜ್ಯದಲ್ಲಿ ಓಲಾ, ಉಬರ್‌, ರ‍್ಯಾಪಿಡೊ ಬೈಕ್‌ ಟ್ಯಾಕ್ಸಿ ಸಿಗಲ್ಲಏರ್ ಇಂಡಿಯಾ ಅಪಘಾತದ ವಿವರಗಳನ್ನು ವಿಶ್ಲೇಷಿಸಲು ಅಹಮದಾಬಾದ್‌’ಗೆ ಬಂದಿಳಿದ ಬೋಯಿಂಗ್ ತಜ್ಞರುಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ- ತುರ್ತು ಭೂಸ್ಪರ್ಶಹಾಸನದ ಮೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ! ಹೈ ಅಲರ್ಟ್ಇರಾನ್‌-ಇಸ್ರೇಲ್‌ ಸಂಘರ್ಷ - ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಮೃತ್ಯುಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಅಸ್ವಸ್ಥ : ಆಸ್ಪತ್ರೆಗೆ ದಾಖಲುಮಾಟ ಮಂತ್ರ ತೆಗೆಯಬೇಕಾದರೆ ಬೆತ್ತಲಾಗಬೇಕು ಎಂದು ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌, ಅರ್ಚಕ ಸೆರೆಪತನಗೊಂಡ ವಿಮಾನದ ಎರಡನೇ ಬ್ಲ್ಯಾಕ್ ಬಾಕ್ಸ್ ಪತ್ತೆ..!!ಮಳೆಯ ಹಿನ್ನೆಲೆ ದ. ಕ ಜಿಲ್ಲೆಯ ಎಲ್ಲಾ ಶಾಲಾ ಹಾಗೂ ಪ. ಪೂ ಕಾಲೇಜುಗಳಿಗೆ ಇಂದು(ಜೂ. 16) ರಜೆ ಘೋಷಣೆ