ಬೆಂಗಳೂರು: ಕಾಂಗ್ರೆಸ್ ಸರ್ಕಾರದಿಂದ ( Congress Government ) ಘೋಷಣೆ ಮಾಡಿದ್ದಂತ ಮೂರು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಇನ್ನೂ ಎರಡು ಮಾತ್ರ ಬಾಕಿ ಇದ್ದಾವೆ. ಅವುಗಳನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯನ್ನು ( Karnataka Cabinet Meeting ) ಜುಲೈ.13ಕ್ಕೆ ನಿಗದಿ ಮಾಡಲಾಗಿದೆ.
ಈ ಬಗ್ಗೆ ಸಚಿವ ಸಂಪುಟದ ಸರ್ಕಾರದ ಜಂಟಿ ಕಾರ್ಯದರ್ಶಿ ಆರ್ ಚಂದ್ರಶೇಖರ್ ಮಾಹಿತಿ ನೀಡಿದ್ದು ದಿನಾಂಕ 13-07-2023ರ ಗುರುವಾರ ಸಂಜೆ 6 ಗಂಟೆಗೆ ಸಚಿವ ಸಂಪುಟದ 2023ನೇ ಸಾಲಿನ 4ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗೆ ಎಂದು ತಿಳಿಸಿದ್ದಾರೆ.
https://bcsuddi.com/%e0%b2%86%e0%b2%82%e0%b2%a7%e0%b3%8d%e0%b2%b0%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6-%e0%b2%95%e0%b2%be%e0%b2%b2%e0%b3%81%e0%b2%b5%e0%b3%86%e0%b2%97%e0%b3%86-%e0%b2%89%e0%b2%b0/
ಜುಲೈ.13ರಂದು ನಡೆಯಲಿರುವಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅನುಮೋದನೆ ನೀಡಲಿದ್ದಾರೆ. ಬಾಕಿ ಎರಡು ಗ್ಯಾರಂಟಿ ಸೇರಿದಂತೆ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ಕೂಡ ನೀಡಲಿದ್ದಾರೆ. ಆ ಬಗ್ಗೆ ಜುಲೈ.13ರವರೆಗೆ ಕಾದು ನೋಡಬೇಕಿದೆ.