LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಟೈಟಾನಿಕ್ ಹಡಗಿನ ಅವಶೇಷ: ಜಲಂತರ್ಗಾಮಿ ಸ್ಪೋಟದಿಂದ ಐವರು ಜಲಸಮಾಧಿ

ವಾಷಿಂಗ್ಟನ್: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ಪ್ರವಾಸಿಗರು ಜಲಸಮಾಧಿಯಾಗಿರುವ ಬಗ್ಗೆ ಓಷನ್ ಗೇಟ್ ಸಂಸ್ಥೆ ಖಚಿತ ಪಡಿಸಿದೆ.

ಸಾಹಸಯಾತ್ರೆಯ ಅಂಗವಾಗಿ ಬ್ರಿಟನ್​ನ ಶ್ರೀಮಂತ ಉದ್ಯಮಿ ಹಮೀಶ್ ಹಾರ್ಡಿಂಗ್, ಸ್ಟೋಕ್ಟನ್ ರಶ್, ಫ್ರಾನ್ಸ್‌ನ ನಿವೃತ್ತ ನೌಕಾಪಡೆ ಅಧಿಕಾರಿ ಪೌಲ್‌ ಹೆನ್ರಿ ನಾರ್ಗೊಲೆಟ್‌, ಪಾಕಿಸ್ತಾನದ ಉದ್ಯಮಿ ಶಹಜಾದ್ ದಾವೂದ್ ಹಾಗೂ ಅವರ ಪುತ್ರ ಸುಲೇಮಾನ್, ಓಷನ್‌ ಗೇಟ್‌ ಕಂಪನಿಯ ಸಿಇಒ ಸ್ಟಾಕ್‌ಟನ್‌ ರಶ್‌ ಮೃತಪಟ್ಟಿದ್ದಾರೆ.

92 ಗಂಟೆಗಳ ಕಾಲ ಆಗುವಷ್ಟಿದ್ದ ಆಮ್ಲಜನಕವೂ ಬುಧವಾರ ರಾತ್ರಿ 7.30ರ ವೇಳೆಗೆ ಮುಗಿದಿದೆ. ಅಮೆರಿಕ ನೌಕಾಪಡೆಯ ಸಿಬ್ಬಂದಿಗೆ ನಾಪತ್ತೆಯಾಗಿರುವ ಟೈಟಾನಿಕ್ ಜಲಾಂತರ್ಗಾಮಿಯ ಅವಶೇಷಗಳು ಕಾಣಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಅವಶೇಷಗಳು ಟೈಟಾನಿಕ್‌ ನಿಂದ 1,600 ಅಡಿಗಳು (488 ಮೀಟರ್) ಅಡಿಯಲ್ಲಿ ಕಂಡುಬಂದಿವೆ ಎನ್ನಲಾಗಿದೆ.

ರೊಬೊಟಿಕ್ ಡೈವಿಂಗ್ ವಾಹನವು ಸಮುದ್ರತಳದಲ್ಲಿ ಶಿಲಾಖಂಡರಾಶಿಗಳ ಜಾಗದಲ್ಲಿ ಹಡಗಿನ ಐದು ಪ್ರಮುಖ ತುಣುಕುಗಳನ್ನು ಗುರುತಿಸಿದೆ. ಅಪಾರವಾದ ನೀರಿನ ಒತ್ತಡದಿಂದ , ಶಾರ್ಕ್ ಕಚ್ಚಿ ಅಥವಾ ಯಾವುದೋ ತಾಂತ್ರಿಕ ದೋಷದಿಂದ ಉಂಟಾದ ಸ್ಫೋಟದಲ್ಲಿ ಸಬ್ ಮೇರಿನಲ್ಲಿದ್ದವರು ಕ್ಷಣ ಮಾತ್ರದಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೂರ್ಣ ತನಿಖೆಯನ್ನು ಕೈಗೊಳ್ಳಲು ಅವಶೇಷಗಳನ್ನು ಮರುಪಡೆಯಬೇಕಾಗಿದೆ ಆದರೆ ಆಗಲು ನಿಖರ ಕಾರಣವನ್ನು ಗುರುತಿಸಲು ಕಷ್ಟವಾಗಬಹುದು ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಇಂಜಿನಿಯರಿಂಗ್ ಪ್ರೊಫೆಸರ್ ರೋಡ್ರಿಕ್ ಸ್ಮಿತ್ ಹೇಳಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ಯಾಸ್ ಬಳಕೆದಾರರೆ ಹಾಗಾದ್ರೆ,  ಆಧಾರ ಬಯೋಮೆಟ್ರಿಕ್: ಯಾವುದೇ ಗಡವು ಇಲ್ಲಹುದ್ದೆಗಳ ಆಯ್ಕೆ ಪಟ್ಟಿಗೆ ಆಕ್ಷೇಪಣೆg ಆಹ್ವಾನHDK, ಯತ್ನಾಳ್, ಅಶ್ವತ್ಥ ನಾರಾಯಣಗೆ ಬಿಗ್ ಶಾಕ್!ತೆಲುಗುವಿನ ಮೆಗಾ ಸ್ಟಾರ್ ಚಿರಂಜೀವಿ ಮತ್ತೆ ಕನ್ನಡದಲ್ಲಿ ನಟಿಸುತ್ತಾರ.? ಯಾರ ಜೊತೆ.?--ಅಂಬಿಗರ ಚೌಡಯ್ಯಅವರ ವಚನ …!ನಟಿ ಜಾಕ್‌ಲೀನ್ ಫೆರ್ನಾಂಡಿಸ್ ಗೆ ಜೈಲಿನಿಂದಲೇ ಧಮಕಿ ಹಾಕಿದ ವಂಚಕ ಸುಕೇಶ್ !ರಾಜ್ಯದಲ್ಲಿ ಕೋವಿಡ್‌ಗೆ 7 ಬಲಿ, ಸೋಂಕಿತರಿಗೆ 7 ದಿನ ಹೋಂ ಐಸೋಲೇಷನ್ ಕಡ್ಡಾಯ : ದಿನೇಶ್ ಗುಂಡೂರಾವ್ಹಾವೇರಿ : ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ: 45 ವಿದ್ಯಾರ್ಥಿಗಳಿಗೆ ಗಾಯ, 4 ಗಂಭೀರ..!ರಾಮಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಅಯೋಧ್ಯೆಯಲ್ಲಿ ಸ್ಮಾರಕ : ಯೋಗಿ ಆದಿತ್ಯನಾಥ್ ಘೋಷಣೆಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ; ಓರ್ವ ಸಜೀವ ದಹನ