LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ತೆಳ್ಳಗೆ, ಬೆಳ್ಳಗೆ ಇರೋ ಬ್ಯೂಟಿಗೆ ಮದ್ವೆಯಾಗೋಕೆ ದಪ್ಪ ಹೊಟ್ಟೆಯ ಹುಡುಗನೇ ಬೇಕಂತೆ!

ಹಿಂದೆಲ್ಲಾ ಮನೆಯವರು ನೋಡಿದವರ ಜೊತೆ ಹುಡುಗ-ಹುಡುಗಿಗೆ ಮದುವೆ ನಡೆದು ಹೋಗುತ್ತಿತ್ತು. ಆದ್ರೆ ಈಗ ಎಲ್ಲಾ ಯುವಕ, ಯುವತಿಯರು ತಮ್ಮ ಸಂಗಾತಿ ಹೀಗೆಯೇ ಇರಬೇಕೆಂಬ ಕನಸನ್ನು ಹೊಂದಿರುತ್ತಾರೆ. ತೆಳ್ಳಗೆ, ಬೆಳ್ಳಗೆ, ಸುಂದರ ಮತ್ತು ಫಿಟ್ ಆಗಿರಬೇಕ ಬಯಕೆ ಹೆಚ್ಚಿನವರಿಗಿರುತ್ತದೆ. ಹುಡುಗಿಯರಾದರೆ ಹುಡುಗನಿಗೆ ಸಿಕ್ಸ್ ಪ್ಯಾಕ್ ಇರಬೇಕು, ಹೈಟ್ ಇರಬೇಕು ಎಂಬ ಡಿಮ್ಯಾಂಡ್ ಮುಂದಿಟ್ಟರೆ, ಕೆಲ ಹುಡುಗರು, ಹುಡುಗಿ ಸ್ಲಿಮ್ ಇರಬೇಕು, ಹೇರ್ಸ್‌ ಚೆನ್ನಾಗಿರಬೇಕು ಎಂದು ಬೇಡಿಕೆಯಿಡುತ್ತಾರೆ. ಆದ್ರೆ ಇಲ್ಲೊಬ್ಬ ಹುಡುಗಿ ಮಾತ್ರ ಇದೆಲ್ಲಕ್ಕಿಂತ ವಿಭಿನ್ನವಾಗಿ ನಂಗೆ ಮದುವೆಯಾಗೋಕೆ ದಪ್ಪ ಹೊಟ್ಟೆಯ ಹುಡುಗನೇ ಬೇಕು ಅಂತಿದ್ದಾಳೆ. ಹೌದು, ಕೇಳೋಕೆ ವಿಚಿತ್ರ ಅನಿಸಿದರೂ ಇದು ನಿಜ. ಬಳಕುವ ಬಳ್ಳಿಯಂತಿರುವ ಈಕೆಯ ಹೆಸರು ಹಸೀನಾ ಮದೀನಾ ಮಮದಲೀವಾ. ಕಜಕಿಸ್ತಾನ್‌ ಮೂಲದವಳಾದ ಹಸೀನಾ ಸಂಗಾತಿಯ ಹುಡುಕಾಟದಲ್ಲಿದ್ದಾಳೆ. ಈಕೆ ತಾನು ಮದುವೆಯಾಗೋದು ದೊಡ್ಡ ಹೊಟ್ಟೆಯ ಹುಡುಗನನ್ನೇ ಎಂದು ಪಟ್ಟು ಹಿಡಿದು ಕುಳಿತಿದ್ದಾಳೆ. ಕಜಕಿಸ್ತಾನದ ಈ ಸುಂದರಿಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆಕೆ ಒಪ್ಪಿದರೆ ಮದುವೆಯಾಗಲು ಜನರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ, ಈ ಚೆಲುವೆ ನಿಜವಾದ ಪ್ರೇಮ ಸಂಗಾತಿಯನ್ನು ಹುಡುಕುತ್ತಿದ್ದಾಳೆ. ಅವಳು ಫಿಟ್ ಮತ್ತು ಒರಟಾದ ನೋಟವನ್ನು ಹೊಂದಿರುವ ಮನುಷ್ಯನನ್ನು ಬಯಸುವುದಿಲ್ಲ, ಬದಲಿಗೆ ದಪ್ಪ ಹೊಟ್ಟೆಯ ಗಂಡನನ್ನು ಹುಡುಕುತ್ತಿದ್ದಾಳೆ. ಇದನ್ನು ತಿಳಿದರೆ ನೀವು ಶಾಕ್ ಆಗಬಹುದು ಆದರೆ ಇದು ಸತ್ಯ. ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ವಿಭಿನ್ನ ದೇಹ ಆಕಾರವಿದೆ. ಕೆಲವರು ಸ್ಥೂಲಕಾಯರು ಮತ್ತು ಕೆಲವರು ತೆಳ್ಳಗಿರುತ್ತಾರೆ. ಕೆಲವರು ಕುಳ್ಳಗಿದ್ದರೆ, ಕೆಲವರು ಎತ್ತರವಾಗಿರುತ್ತಾರೆ. ಇತ್ತೀಚೆಗಂತೂ ವರ ಕಪ್ಪಗಿದ್ದಾನೆ, ಕುಳ್ಳಗಿದ್ದಾನೆ ಎಂಬ ಕಾರಣಕ್ಕೆ ಮದುವೆ ನಿಲ್ಲಿಸಿದ ಪ್ರಕರಣಗಳನ್ನು ಕೇಳಿದ್ದೇವೆ. ಹೀಗಿರುವಾಗ ಹಸೀನಾಳ ವಿಚಿತ್ರ ಡಿಮ್ಯಾಂಡ್ ಎಲ್ಲರ ಹುಬ್ಬೇರುವಂತೆ ಮಾಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಷರತ್ತು ಉಲ್ಲಂಘನೆ - ಭಾರತದ 71 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್ಕರ್ನಾಟಕದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭಶಬರಿಮಲೆ ಮಕರವಿಳಕ್ಕು ಉತ್ಸವ – ಮೊದಲ ದಿನವೇ ಭಕ್ತರ ಸಾಗರಸುಮ್ಮನೆ ICU ಗೆ ದಾಖಲು ಮಾಡುವ ಹಾಗಿಲ್ಲ….ಮೊದಲ ಬಾರಿಗೆ ಕೇಂದ್ರ ಸರಕಾರದಿಂದ ನಿಯಮಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಸಾರ್ವತ್ರಿಕ ರಜೆ ಘೋಷಣೆಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ..!ರಾಜ್ಯದ ಪ್ರತಿ ಮನೆಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ: ಶರಣ್ ಪಂಪ್‌ವೆಲ್ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ - ನಾಲ್ಕು ಮಂದಿ ಮೃತ್ಯುಏರ್ ಗನ್, ಚಾಕು ಹಿಡಿದು ಪ್ರಾರ್ಥಮಿಕ ಶಾಲಾ ಮಕ್ಕಳ ಹೊಡೆದಾಟಕ್ಕೆ ಶಿಕ್ಷಕ ವರ್ಗ ತಲ್ಲಣ..!ಜನವರಿ ತಿಂಗಳಂತ್ಯಕ್ಕೆ ಬೆಂಗಳೂರಿನಲ್ಲಿ ಬ್ರಹತ್ಉದ್ಯೋಗ ಮೇಳ - ಮುಖ್ಯಮಂತ್ರಿ ಸಿದ್ದರಾಮಯ್ಯಹೊಸ ವರ್ಷಕ್ಕೆ ಎಣ್ಣೆ ಖರೀದಿ ನೆಪದಲ್ಲಿ ಸಾವಿರಾರು ಮೌಲ್ಯದ ಬಿಯರ್ ಕದ್ದು ಪರಾರಿ..!!