LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದೇಶದ ಕೃಷಿಕರಿಗೆ ಶಾಕಿಂಗ್ ನ್ಯೂಸ್!! – ರಸಗೊಬ್ಬರ ಮೇಲಿನ ರಿಯಾಯಿತಿ ರದ್ದು ಪಡಿಸಿದ ರಷ್ಯಾ : ಭಾರತದಲ್ಲಿ ದರ ಏರಿಕೆ ಆತಂಕ

ಭಾರತದಲ್ಲಿ ರಸಗೊಬ್ಬರದ ದರ ಏರಿಕೆಯಾಗಲಿದೆಯೇ? ಹೀಗೊಂದು ಆತಂಕ ರೈತರಲ್ಲಿ ಕಾಡುತ್ತಿದೆ. ಯಾಕೆಂದರೆ ರಷ್ಯಾದ ರಸಗೊಬ್ಬರ ಕಂಪೆನಿಗಳು ಇದುವರೆಗೆ ಭಾರತಕ್ಕೆ ನಿಡುತ್ತಿದ್ದ ರಿಯಾಯಿತಿಯನ್ನು ರದ್ದುಪಡಿಸಿವೆ. ಇದು ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರಷ್ಯಾದ ಕಂಪೆನಿಗಳು ಡೈ ಅಮೋನಿಯಂ ಪಾಸ್ಪೇಟ್ (ಡಿಎಪಿ) ಸೇರಿ ವಿವಿಧ ರಸಗೊಬ್ಬರಗಳಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಹಿಂಪಡೆದಿವೆ. ಇದರಿಂದ ಭಾರತಕ್ಕೆ ಆಮದು ವೆಚ್ಚ ಅಧಿಕವಾಗಲಿದೆ.

ಸದ್ಯ ಭಾರತದಲ್ಲಿ ಯೂರಿಯಾ ಪ್ರತಿ ಚೀಲಕ್ಕೆ 266 ರೂ., ಡಿಎಪಿ 1,350 ರೂ. ಮತ್ತು ಪೊಟ್ಯಾಶಿಯಂ 1,700 ರೂ. ಸರಕಾರಿ ಸಬ್ಸಿಡಿ ಸಹಿತ ಮಾರಾಟವಾಗುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತ ರಷ್ಯಾದಿಂದ ಆಮದು ಮಾಡಿಕೊಂಡ ರಸಗೊಬ್ಬರ ಪ್ರಮಾಣದಲ್ಲಿ ಶೇ. 246ರಷ್ಟು ಹೆಚ್ಚಳವಾಗಿತ್ತು.

ರಷ್ಯಾದ ಕಂಪೆನಿಗಳು ಡಿಎಪಿ, ಯೂರಿಯಾ ಮತ್ತು ಎನ್‍ಪಿಕೆ ಗೊಬ್ಬರಗಳಿಗೆ ಭಾರೀ ರಿಯಾಯಿತಿ ಘೋಷಿಸಿ ಭಾರತಕ್ಕೆ ಮಾರಾಟ ಮಾಡುತ್ತಿದ್ದವು. ಆ ಮೂಲಕ ಚೀನಾ, ಈಜಿಪ್ಟ್, ಜೋರ್ಡಾನ್ ಮತ್ತು ಯುಎಇ ಗೊಬ್ಬರ ಕಂಪೆನಿಗಳನ್ನು ಮೀರಿ ರಷ್ಯಾ ಪಾರಮ್ಯ ಮೆರೆದುಕೊಂಡಿತ್ತು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
5 ರೂ ನಾಣ್ಯ ಅದರಿಂದ ಲಕ್ಷಗಟ್ಟಲೆ ಆದಾಯ..!ನಿಮ್ಮಲ್ಲೂ ಇದೆಯೇ ಈ ನಾಣ್ಯ?ಕೇಜ್ರಿವಾಲ್ ಬಂಧನದ ಸುಳುವು ಕೊಟ್ಟ ಎಎಪಿ ನಾಯಕರುಕರ್ನಾಟಕದಲ್ಲಿ 260 ಕೋವಿಡ್ ಪ್ರಕರಣ ದೃಢ - ಓರ್ವ ಮೃತ್ಯುಸ್ತ್ರೀ ಶಾಪ ಯಾವ ರೂಪದಲ್ಲಿ ಅಂಟಿಕೊಳ್ಳುತ್ತದೆ ಸ್ತ್ರೀ ಶಾಪದಿಂದ ಆಗುವಂತಹ ಸಮಸ್ಯೆಗಳನ್ನು ತಿಳಿದುಕೊಳ್ಳಿ ಸ್ತ್ರೀ ಶಾಪಕ್ಕೆ ಒಳಗಾದರೆ ನರಕ ಯಾಚನೆ ಖಂಡಿತ!ಹಸಿ ಕೊಬ್ಬರಿ ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೊಂದು ಲಾಭವ?ಜನವರಿ 13ರಂದು ಕೆ-ಸೆಟ್ ಪರೀಕ್ಷೆ .!ಕಾಲುಂಗುರಕ್ಕೆ ಮುಕ್ತಿ.!ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಖುಷಿ ಸುದ್ದಿ.!ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್‌!ಶುಲ್ಕ ಹೆಚ್ಚಳ ಇಷ್ಟು.!ರೈಲ್ವೆ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ.!ಗಿಗ್ ಕಾರ್ಮಿಕರ ವಿಮಾ ಯೋಜನೆ: ನೋಂದಾಯಿಸಲು ಸೂಚನೆ