LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನ.18 ರಂದು ಕೃಷಿ ಉಪಕರಣಗಳ ಬಹಿರಂಗ ಹರಾಜು





ಬಳ್ಳಾರಿ,ನ.14

ಜಿಲ್ಲೆಯ ಹಗರಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿರುವ ಅನುಪಯುಕ್ತ ವಸ್ತುಗಳಾದ ಕೃಷಿ ಉಪಕರಣಗಳನ್ನು ನ.18 ರಂದು ಬೆಳಿಗ್ಗೆ 10 ಗಂಟೆಗೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಅವರು ತಿಳಿಸಿದ್ದಾರೆ.

ಆಸಕ್ತಿವುಳ್ಳವರು ಅನುಪಯುಕ್ತ ವಸ್ತುಗಳ ಬಗ್ಗೆ ಕಚೆೆರಿಯ ಕಾರ್ಯನಿರ್ವಹಿಸುವ ಯಾವುದೇ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ ಹೊರತು ಪಡಿಸಿ) ಬೆಳಿಗ್ಗೆ 09 ಗಂಟೆಯಿ0ದ ಸಂಜೆ 05 ಗಂಟೆಯೊಳಗೆ ಖುದ್ದಾಗಿ ಬಂದು ಪರಿಶೀಲಿಸಿಕೊಳ್ಳಬಹುದು.

*ಷರತ್ತು:*

ಅನುಪಯುಕ್ತ ವಸ್ತುಗಳನ್ನು ಹರಾಜಿನ ಕೊನೆಯ ಸಮಯದವರೆಗೂ ಕಚೇರಿ ವೇಳೆಯಲ್ಲಿ ಪರಿಶೀಲಿಸಿಕೊಳ್ಳಬಹುದು. ಅನುಪಯುಕ್ತ ವಸ್ತುಗಳನ್ನು ನೋಡಲು ಸಾಕಷ್ಟು ಕಾಲಾವಧಿ ನೋಡಿರುವುದರಿಂದ ಹರಾಜಿನ ಬಗ್ಗೆ ಹರಾಜು ಮುಗಿದ ಬಳಿಕ ಬರುವ ಯಾವುದೇ ಆಕ್ಷೇಪಣೆಗಳನ್ನು ಅಂಗೀಕರಿಸುವುದಿಲ್ಲ.

ಹರಾಜಿನಲ್ಲಿ ಭಾಗವಹಿಸುವವರು ಹರಾಜಿಗೆ ಮುಂಚೆ ಅನುಪಯುಕ್ತ ವಸ್ತುಗಳಿಗೆ ಠೇವಣಿ ಹಣ 10 ಸಾವಿರ ರೂಗಳು ಪ್ರತ್ಯೇಕವಾಗಿ ಕಚೇರಿಗೆ ಸಂದಾಯ ಮಾಡಿ ಹರಾಜಿನಲ್ಲಿ ಭಾಗವಹಿಸಬೇಕು. ಹರಾಜು ಮುಗಿದ ಬಳಿಕ ಹÀಣವನ್ನು ಹಿಂತಿರುಗಿಸಲಾಗುವುದು. ಹೆಚ್ಚಿನ ಬಿಡ್ ಮಾಡಿದ ಸವಾಲುದಾರರು ಸವಾಲು ನಿಂತಲ್ಲಿ ಕೂಡಲೇ ಪೂರ್ಣ ಹಣವನ್ನು ಸಂದಾಯ ಮಾಡಿ ಅಧೀಕೃತ ಸ್ವೀಕೃತಿ ಪತ್ರ ಪಡೆಯ ತಕ್ಕದ್ದು, ಇಲ್ಲದಿದ್ದಲ್ಲಿ ಅವರು ಕಟ್ಟಿರುವ ಠೇವಣಿ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.

ಹಣವನ್ನು ಹಣಕಾಸು ನಿಯಂತ್ರಾಧಿಕಾರಿಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಇವರಿಗೆ ಸಂದಾಯ ಮಾಡಲಾಗುವುದು. ಹರಾಜಿನಲ್ಲಿ ಅನುಪಯುಕ್ತ ವಸ್ತುಗಳು ಒಂದು ವೇಳೆ ಸರಿಯಾದ ಬೆಲೆಗೆ ಹೋಗದಿದ್ದಲ್ಲಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹರಾಜನ್ನು ರದ್ದುಪಡಿಸುವ ಹಕ್ಕನ್ನು ಹೊಂದಿರುತ್ತದೆ.

ಯಶಸ್ವಿ ಬಿಡ್‌ದಾರನು ಪೂರ್ಣ ಹಣ ಸಂದಾಯ ಮಾಡಿ ಸ್ವೀಕೃತ ಪತ್ರ ಪಡೆದ ಸಮಯದಿಂದಲೇ ಅನುಪಯುಕ್ತ ವಸ್ತುಗಳ ಮೇಲೆ ಹಕ್ಕುವುಳ್ಳವನಾಗಿ ಅದರ ರಕ್ಷಣೆ, ನಿರ್ವಹಣೆ, ಸಾಗಾಣಿಕೆ ಇತ್ಯಾದಿ ಎಲ್ಲಾ ಸ್ವಯಂ ಆಗಿ ನೋಡಿಕೊಳ್ಳತಕ್ಕದ್ದು. ಹರಾಜು ಪ್ರಾರಂಭವಾದ ನಂತರ ಬಂದವರಿಗೆ ಹರಾಜಿನಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ. ಮೇಲೆ ತಿಳಿಸಿದ ಅನುಪಯುಕ್ತ ವಸ್ತುಗಳನ್ನು ನ.18 ರೊಳಗೆ ಪಡೆಯತಕ್ಕದ್ದು, ನಂತರ ಅವಕಾಶವಿರುವುದಿಲ್ಲ.

ಯಶಸ್ವಿ ಬಿಡ್‌ದಾರನ ಠೇವಣಿ ಹಣವನ್ನು ನ.18 ರಂದು ಹಿಂತಿರುಗಿಸಲಾಗುವುದು. ಯಶಸ್ವಿ ಬಿಡ್‌ದಾರರು ಬಿಡ್ ಮಾಡಿದ ಅನುಪಯುಕ್ತ ವಸ್ತುಗಳನ್ನು ಹೊರತುಪಡಿಸಿ ಕೇಂದ್ರ್ರದ ಬೇರೆ ವಸ್ತುಗಳಿಗೆ ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಬಾರದು. ಯಾವುದೇ ತರಹದ ಹಾನಿಯಾದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿಯಮಾವಳಿ ಮತ್ತು ನಿರ್ಣಯದ ಪ್ರಕಾರ ಹಾನಿಯ ಖರ್ಚನ್ನು ತಕ್ಷಣ ಭರಿಸಬೇಕು.

ಬಿಡ್ ಮಾಡಿದ ಅನುಪಯುಕ್ತ ವಸ್ತುಗಳನ್ನು ಕೇವಲ ಕಚೆರಿ ಸಮಯದಲ್ಲಿ ಅಂದರೆ ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಮಾತ್ರ ಕೇಂದ್ರದ ಹೊರಗೆ ಸಾಗಿಸಬೇಕು. ಬಿಡ್ ಮಾಡಿದ ಅನುಪಯುಕ್ತ ವಸ್ತುಗಳನ್ನು ಕೇಂದ್ರದ ಹೊರಗೆ ಸಾಗಿಸಲು ಅವಶ್ಯಕವಾದ ಪರವಾನಿಗೆ ಪತ್ರಗಳನ್ನು ಸಂಭ0ದಪಟ್ಟ ಅಧಿಕಾರಿಗಳಿಂದ/ಸ0ಸ್ಥೆಗಳಿ0ದ ಬಿಡ್‌ದಾರರೇ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು