ಸುರತ್ಕಲ್: ಮಂಗಳೂರು ನಗರದ ಮಾಜಿ ಮೇಯರ್ ಸುರತ್ಕಲ್ ಮುಂಚೂರು ನಿವಾಸಿ ರಜನಿ ದುಗ್ಗಣ್ಣ (72) ಅನಾರೋಗ್ಯದಿಂದ ಭಾನುವಾರ ನಿಧನರಾದರು. ಅವರು ಪುತ್ರ ಉದ್ಯಮಿ ಸತೀಶ್ ಮುಂಚೂರು ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.
https://bcsuddi.com/%e0%b2%85%e0%b2%a8%e0%b3%8d%e0%b2%a8%e0%b2%ad%e0%b2%be%e0%b2%97%e0%b3%8d%e0%b2%af-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%a8%e0%b2%be%e0%b2%b3%e0%b3%86-%e0%b2%b8%e0%b2%82%e0%b2%9c/
ಮಂಗಳೂರು ಮಹಾನಗರದ ಮಹಿಳಾ ಮೇಯರ್ ಆಗಿ ಬಿಜೆಪಿ ಪಕ್ಷದ ವಿವಿಧ ಪದಾಧಿಕಾರಿಗಳಾಗಿ, ಉತ್ತಮ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾನುರಾಗಿಯಾಗಿದ್ದರು. ಅವರ ನಿಧನಕ್ಕೆ ಶ್ರೀ ಚಂದ್ರಶೇಖರ ಸ್ವಾಮೀಜಿ, ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆಪಿ ಸುದರ್ಶನ್ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.