LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಹಿಳೆ ಆತ್ಮಹತ್ಯೆಗೆ ಶರಣು - ಸ್ಯಾನಿಟರಿ ಪ್ಯಾಡ್‌ನೊಳಗೆ ಪತ್ತೆಯಾಗಿತ್ತು ಡೆತ್‌ನೋಟ್..!

ಕಾಸರಗೋಡು: ಧರಿಸಿರುವ ಸ್ಯಾನಿಟರಿ ಪ್ಯಾಡ್‌ನೊಳಗಡೆ ಡೆತ್‌ನೋಟ್ ಬಚ್ಚಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಸರಗೋಡಿನ ಬೋವಿಕ್ಕಾನದ ಪೊವ್ವಲ್ ಬೆಂಚುಕೋರ್ಟುವಿನಲ್ಲಿ ನಡೆದಿದೆ.

ಈ ಡೆತ್‌ನೋಟ್‌ನಲ್ಲಿ ಪತಿಯ ಕಿರುಕುಳದ ಕರಾಳತೆ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಜಾಫರ್ ಎಂಬಾತನ ಪತ್ನಿ, ಮೂಲತಃ ಸುಳ್ಯ ಗಾಂಧಿನಗರದ ಅಲೀಮಾ ಅಲಿಯಾಸ್ ಶೈಮ (35) ಎಂಬಾಕೆಯ ಆತ್ಮಹತ್ಯೆ ದೌರ್ಜನ್ಯದ ಕರ್ಣಕಠೋರ ಕತೆಗಳನ್ನು ತೆರೆದಿಟ್ಟಿದೆ. ಐದು ಮಕ್ಕಳತಾಯಿ ಅಲೀಮಾ ಮನೆಯ ಬಚ್ಚಲು ಮನೆಯಲಯ ನೇಣುಬಿಗಿದು ಆತ್ಮಹತ್ಯೆ ಮಾಡಿದ್ದಳು. ಪತ್ನಿ ಆತ್ಮಹತ್ಯೆಗೈದ ಬೆನ್ನಲ್ಲೇ ಪತಿ ಜಾಫ‌ರ್ ರಾತ್ರಿಯೇ ಮನೆ, ಊರು ಬಿಟ್ಟು ತಲೆಮರೆಸಿಕೊಂಡಿದ್ದಾನೆ. ದಂಪತಿ ನಡುವೆ ಜಗಳ ಏರ್ಪಟ್ಟಿತ್ತೆಂದೂ, ಪತಿಯ ಸಂಶಯದ ರೋಗವನ್ನು ಸಹಿಸಲಾಗದೇ, ತಾನು ಅನುಭವಿಸಿದ ದೌರ್ಜನ್ಯದ ಅನುಭವಗಳನ್ನು ಎಳೆಎಳೆಯಾಗೊ ಬಿಚ್ಚಿಟ್ಟು ತನಗೆ ಆತ್ಮಹತ್ಯೆಯಲ್ಲದೇ ಅನ್ಯದಾರಿಯಿಲ್ಲ ಎಂದು ಬರೆದಿದ್ದಾರೆ. ಈ ಡೆತ್‌ನೋಟ್ ಅನ್ನು ತಾನು ಧರಿಸಿರುವ ಪ್ಯಾಡ್‌ನೊಳಗಿಟ್ಟು ಅಲೀಮಾ ಆತ್ಮಹತ್ಯೆ ಮಾಡಿದ್ದಾರೆ.

ವಿಪರೀತ ಸಂಶಯ ರೋಗಿಯಾದ ಪತಿ, ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ದೈಹಿಕ ಹಲ್ಲೆ, ದೌರ್ಜನ್ಯ ನಡೆಸಿದ್ದ. ತನ್ನ ಮೊಬೈಲ್ ಕಿತ್ತುಕೊಂಡು, ಯಾರೊಂದಿಗೂ ಸಂಪರ್ಕವೇ ಇಲ್ಲದಂತೆ ಮಾಡಿದ್ದ‌. ತನ್ನನ್ನು ಬೆತ್ತಲು ಮಾಡಿ ಹಲ್ಲೆಗೈದು ಹೆಣ್ಣೊಬ್ಬಳಿಗೆ ನೀಡಬಾರದ ಚಿತ್ರಹಿಂಸೆ ನೀಡಿದ್ದಾನೆಂದು ಆಕೆ ಪತ್ರದಲ್ಲಿ ವಿವರಿಸಿದ್ದಾರೆ. ಲೈಂಗಿಕ ದೌರ್ಜನ್ಯವನ್ನೂ ಮಾಡುತ್ತಿದ್ದ ಪತ್ರದಲ್ಲಿ ಉಲ್ಲೇಖಿಸುತ್ತಿದ್ದ. ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಾಗ ಆಕೆ ಬರೆದಿಟ್ಟ ಪತ್ರ ಗುಪ್ತಾಂಗ ಭಾಗದಲ್ಲಿ ಪತ್ತೆಯಾಗಿದೆ.

ನಾಪತ್ತೆಯಾದ ಜಾಫ‌ರ್ ಇನ್ನೂ ಪತ್ತೆಯಾಗಿಲ್ಲ. ಮೃತ ಮಹಿಳೆ ಬರೆದಿಟ್ಟ ಪತ್ರ ಸಿಕ್ಕಿದ ಮೇಲೂ ಪ್ರಕರಣ ದಾಖಲಿಸಿರುವ ಪೊಲೀಸರು ಜಾಫ‌ರ್ ವಿರುದ್ಧ ಆತ್ಮಹತ್ಯಾ ಪ್ರೇರಣೆ, ನಿರಂತರ ದೌರ್ಜನ್ಯ, ನೈತಿಕ ಸಂಶಯದ ಕೇಸ್ ದಾಖಲಿಸಿಲ್ಲ ಎಂದು ಆರೋಪಿಸಿ ಸುಳ್ಯ ಗಾಂಧಿನಗರ ಮೂಲದ ಮಹಿಳೆ ಕುಟುಂಬದವರು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಾನವ ಹಕ್ಕು ಆಯೋಗಕ್ಕೆ ದೂರಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂದಿನ ಮೂರು ದಿನ ರಾಜ್ಯದಲ್ಲಿ ಭಾರಿ ಮಳೆ – ಹವಾಮಾನ ಇಲಾಖೆ10 ತಿಂಗಳ ಮಗುವಿನ ಪ್ರಾಣ ಕಸಿದ ತಂದೆ ಎಸೆದ ತುಂಡು ಬೀಡಿ!!ಕ್ಯಾನ್ಸರ್’ಗೆ ಇನ್ನು ಕಿಮೋ ಥೆರಪಿ ಬೇಕಿಲ್ಲ..!! ಮಹತ್ವದ ಆವಿಷ್ಕಾರ ಹುಟ್ಟುಹಾಕಿದ ಸಂಶೋಧಕರ ತಂಡಇಸ್ರೇಲ್‌-ಇರಾನ್‌ ರಣರಂಗಕ್ಕೆ ಅಮೆರಿಕ ನೇರ ಎಂಟ್ರಿ?'ವಿಚ್ಛೇದನದ ಭಯಕ್ಕೆ ವಿವಾಹ ಆಗುತ್ತಿಲ್ಲ'- ನಟ ಸಲ್ಮಾನ್‌ ಖಾನ್‌ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳ ಒಂದು ಶನಿವಾರ ‘ಸಂಭ್ರಮ ಶನಿವಾರ’ – ಬ್ಯಾಗ್ ರಹಿತ ದಿನ; ಶಿಕ್ಷಣ ಇಲಾಖೆ ಮಹತ್ವದ ಆದೇಶಲೋಕಾಯುಕ್ತ ಹೆಸರು ಹೇಳಿ ಕೋಟಿ..ಕೋಟಿ ರೂಪಾಯಿ ಲೂಟಿ..!!ಉತ್ತಮ ಸಂಬಳದ ವೃತ್ತಿ ತೊರೆದು ಐಎಎಸ್ ಅಧಿಕಾರಿಯಾದ ಪ್ರಿಯಾ ರಾಣಿ ಯಶೋಗಾಥೆಯು.ಪಿ.ಎಸ್.ಸಿ ಪರೀಕ್ಷಾ ತರಬೇತಿಗೆ ಅರ್ಜಿ ಆಹ್ವಾನಜೂನ್ 19 ರಂದು ನೇರ ನೇಮಕಾತಿ ಸಂದರ್ಶನ