LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರಾಜ್ಯದ ಶಕ್ತಿಸೌಧ ‘ವಿಧಾನಸೌಧ’ದಲ್ಲೇ ‘ನಕಲಿ ಪಾಸ್’ಗಳ ಹಾವಳಿ

ಬೆಂಗಳೂರು: ಈವರೆಗೆ ವಿವಿಧ ಪಾಸ್ ಗಳನ್ನು ನಕಲಿ ಮಾಡುತ್ತಿದ್ದಂತ ಖದೀಮರು. ಈಗ ವಿಧಾನಸೌಧ ಪ್ರವೇಶಕ್ಕೆ ( Vidhan Soudha Entry ) ನೀಡುವಂತ ಪಾಸ್ ಗಳನ್ನು ಕೂಡ ನಕಲಿ ಮಾಡಿರೋದಾಗಿ ತಿಳಿದು ಬಂದಿದೆ. ಈ ಮೂಲಕ ರಾಜ್ಯದ ಶಕ್ತಿಸೌಧದಲ್ಲೇ ನಕಲಿ ಪಾಸ್ ಗಳ ಹಾವಳಿ ಹೆಚ್ಚಾಗಿರುವಂತ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಬಜೆಟ್ ಮಂಡನೆಯ ವೇಳೆಯಲ್ಲಿ ಸದನಕ್ಕೆ ತೆರಳಿ, ಶಾಸಕರ ಸೀಟ್ ನಲ್ಲಿ ತಿಪ್ಪೇಸ್ವಾಮಿ ಎಂಬಾತ ಕುಳಿತ ಬಳಿಕ, ವಿಧಾನಸೌಧದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಿಸಿಬಿಯ ಮುಖ್ಯಸ್ಥ ಡಾ.ಶರಣಪ್ಪ ನೇತೃತ್ವದಲ್ಲಿ ಕಣ್ಗಾವಲು ನಡೆಸಲಾಗುತ್ತಿದೆ. ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿರುವ ಕಾರಣ ಮೊನ್ನೆಯಷ್ಟೇ ಮಹಿಳೆಯರ ಬ್ಯಾಗ್ ನಲ್ಲಿ ಚಾಕು ಕೂಡ ಪತ್ತೆಯಾಗಿತ್ತು. ಚಾಕು ಜಪ್ತಿ ಮಾಡಿ, ಮಹಿಳೆಯನ್ನು ವಿಧಾನಸೌಧ ಪ್ರವೇಶಿಸಲು ನೀಡಲಾಗಿತ್ತು.

https://bcsuddi.com/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%b8%e0%b3%87%e0%b2%b0%e0%b2%bf-4-%e0%b2%b0%e0%b2%be%e0%b2%9c%e0%b3%8d%e0%b2%af%e0%b2%97%e0%b2%b3%e0%b2%b2%e0%b3%8d%e0%b2%b2/

ಇದೀಗ ವಿಧಾನಸೌಧ ಪ್ರವೇಶಿಸುವಂತ ಪ್ರತಿಯೊಬ್ಬರ ತಪಾಸಣೆ ಮಾಡುತ್ತಿರುವ ಕಾರಣ, ವಿಧಾನಸೌಧಕ್ಕೆ ಎಂಟ್ರಿಯಾಗಲು ಖತರ್ನಾಕ್ ಪ್ಲ್ಯಾನ್ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಅದೇ ನಕಲಿ ಪಾಸ್ ಗಳೊಂದಿಗೆ ( Fake Pass ) ವಿಧಾನ ಸೌಧ ಪ್ರವೇಶಿಸೋದು ಪತ್ತೆಯಾಗಿದೆ.

ಅವಧಿ ಮೀರಿದಂತ ಪಾಸ್ ಸೇರಿದಂತೆ ನಕಲಿ ಪಾಸ್ ಗಳೊಂದಿಗೆ ವಿಧಾನಸೌಧ ಪ್ರವೇಶಿಸೋದಕ್ಕೆ ಪ್ರಯತ್ನಿಸುತ್ತಿರುವುದು ಪತ್ತೆ ಹಚ್ಚಲಾಗಿದೆ. ಪ್ರವೇಶ ಪಾಸ್ ಅಲ್ಲದೇ ಕಾರಿನ ಪಾಸ್ ಗಳನ್ನು ಕೂಡ ನಕಲಿ ಮಾಡಿ, ಅವಧಿ ಮುಗಿದ್ರೂ ಪ್ರವೇಶಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದ್ದು, ಇವರೆಲ್ಲರಿಗೂ ಪೊಲೀಸರು ಎಚ್ಚರಿಕೆ ನೀಡದಿದ್ದಾರೆ ಎನ್ನಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು ಏರ್ ಪೋರ್ಟ್ ಟರ್ಮಿನಲ್ - 2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆಐಫೋನ್ ಹ್ಯಾಕ್ ಆರೋಪವನ್ನು ನಿರಾಕರಿಸಿದ ಸಚಿವ ರಾಜೀವ್ ಚಂದ್ರಶೇಖರ್ಜೆಡಿಯು ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಕುಮಾರ್ ನೇಮಕಪರೀಕ್ಷಾರ್ಥವಾಗಿ ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ ವಿದ್ಯಾರ್ಥಿನಿಯರು ಮೃತ್ಯುಎಸ್‌ಯುವಿ ರೂಫ್ ನಲ್ಲಿ ಮಕ್ಕಳನ್ನು ಮಲಗಿಸಿ ಕಾರು ಚಾಲನೆ: ಪ್ರಕರಣ ದಾಖಲುನಾಳೆಯಿಂದ ಮಂಗಳೂರು - ಮಡಗಾಂವ್ ವಂದೇ ಭಾರತ್‌ ರೈಲು ಆರಂಭಪಾಕಿಸ್ತಾನದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ನಿಷೇಧ: ಪ್ರಧಾನಿ ಘೋಷಣೆಐಪಿಎಲ್‌ ಆಟಗಾರ, ಐಪಿಎಸ್‌ ಅಧಿಕಾರಿ ಎಂಬ ಸೋಗಿನಲ್ಲಿ ವಂಚನೆ : ಆರೋಪಿ ಬಂಧನಅನ್ಯಾಯಕ್ಕೆ ಹೆಸರಾದವರು ನ್ಯಾಯ ಕೊಡಿಸುವಂತೆ ನಟಿಸುತ್ತಿದ್ದಾರೆ: ಸ್ಮೃತಿ ಇರಾನಿ ಲೇವಡಿಗೂಢಾಚಾರ ಆರೋಪ: ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ರದ್ದುಗೊಳಿಸಿದ ಕತಾರ್ ಕೋರ್ಟ್