LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ಬಟರ್ ಚಿಕನ್ ಮಾಡುವ ವಿಧಾನ




ಬೇಕಾಗುವ ಪದಾರ್ಥಗಳು...






  • ಕೋಳಿ ಮಾಂಸ- ಅರ್ಧ ಕೆಜಿ

  • ಬೆಣ್ಣೆ- 25 ಗ್ರಾಂ

  • ಸೋಯಾ ಸಾಸ್ - 1 ಚಮಚ

  • ವಿನೆಗರ್- ಸ್ವಲ್ಪ

  • ಉಪ್ಪು- ರುಚಿಗೆ ತಕ್ಕಷ್ಟು

  • ಎಣ್ಣೆ- ಸ್ವಲ್ಪ

  • ಮೊಟ್ಟೆ- 1

  • ಹಸಿಮೆಣಸಿನಕಾಯಿ- ಸಣ್ಣಗೆ ಕತ್ತರಿಸಿದ್ದು 2

  • ಕಾರ್ನ್ ಫ್ಲೋರ್- 2 ಚಮಚ

  • ಕಾಳುಮೆಣಸಿನ ಪುಡಿ - 1 ಚಮಚ ಬಿಳಿ

  • ಅಚ್ಚಖಾರದ ಪುಡಿ- 1 ಚಮಚ

  • ಬೆಳ್ಳುಳ್ಳಿ- 8 ಎಸಲು

  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1.5 ಚಮಚ

  • ಈರುಳ್ಳಿ ಹೂವು - ಸ್ವಲ್ಪ



     

    ಮಾಡುವ ವಿಧಾನ...






    • ಮೊದಲಿಗೆ ಚಿಕನ್ ಅನ್ನು ಸ್ವಲ್ಪ ಉಪ್ಪು, ಮೊಟ್ಟೆಯ ಬಿಳಿಯ ಭಾಗ, ಸೋಯಾ ಸಾಸ್, ಕಾಳು ಮೆಣಸಿನಪುಡಿ, ವಿನೆಗರ್ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮ್ಯಾರಿನೆಟ್ ಮಾಡಿ ಮತ್ತು 15 ರಿಂದ 20 ನಿಮಿಷಗಳು ನೆನೆಯಲು ಬಿಡಿ.

    • ಒಂದು ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಅದಕ್ಕೆ ಚಿಕನ್ ಪೀಸ್ ಗಳನ್ನು ಹಾಕಿ. ಸ್ವಲ್ಪ ಪ್ರಮಾಣದಲ್ಲಿ ಗೋಲ್ಡನ್ ಕಲರ್ ಬರುವವರೆಗೂ ಎಣ್ಣೆಯಲ್ಲಿ ಬಾಡಿಸಿ. ಕಾರ್ನ್ ಫ್ಲೋರ್'ನ್ನು ಸ್ವಲ್ಪ ನೀರಿಗೆ ಸೇರಿ ಪೇಸ್ಟ್ ಮಾಡಿಕೊಳ್ಳಿ

    • ಈಗ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಣ್ಣೆ ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿದು, ಹೆಚ್ಚಿದ ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹೂವು ಸೇರಿಸಿ. ಕೆಲವು ಸೆಕೆಂಡುಗಳವರೆಗೆ ಇದನ್ನು ತಿರುಗಿಸಿ ಅದಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು, ಕಾರ್ನ್ ಫ್ಲೋರ್' ಪೇಸ್ಟ್ ಎಲ್ಲವನ್ನೂ ಸೇರಿಸಿ ಒಂದು ನಿಮಿಷ ಚೆನ್ನಾಗಿ ಬೇಯಿಸಿ. ಇದು ಗಟ್ಟಿಯಾಗುತ್ತಿದ್ದಂತೆ ಸ್ವಲ್ಪ ನೀರು ಹಾಕಿ ಒಂದು ನಿಮಿಷ ಮತ್ತೆ ಬೇಯಿಸಿ.

    • ಈಗ ನೀವು ಹುರಿದುಕೊಂಡ ಚಿಕನ್ ಪೀಸ್ ಗಳನ್ನು ಇದರಲ್ಲಿ ಸೇರಿಸಿ ಎಲ್ಲವನ್ನೂ ಒಮ್ಮೆ ಮಿಶ್ರಣ ಮಾಡಿ ಮತ್ತೆ ಒಂದು ನಿಮಿಷ ಬಿಸಿ ಮಾಡಿ. ಈಗ ರುಚಿಕರವಾದ ಬಟನ್ ಚಿಕನ್ ಸವಿಯಲು ಸಿದ್ಧ.






Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮ-ಜಾತಿ ಹೆಸರಲ್ಲಿ ಸಮಾಜ ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ : ಸಿ.ಎಂ.ಸಿದ್ದರಾಮಯ್ಯಅನಾಥ ಯುವತಿಗೆ ಧಾರೆಯೆರೆದ ಉಡುಪಿ ಜಿಲ್ಲಾಧಿಕಾರಿ..!ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 1,130 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಬೆಳ್ಳಂ ಬೆಳಿಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಅಧಿಕಾರಿಗಳ ದಾಳಿಹಂಸರಾಜ್ ಭಾರದ್ವಾಜ್ ಮಾಡಿದ್ರೆ ತಪ್ಪಲ್ಲ, ದಲಿತ ರಾಜ್ಯಪಾಲ ಗೆಹ್ಲೋಟ್ ಮಾಡಿದ್ರೆ ತಪ್ಪಾ - ಸುನಿಲ್ ಕುಮಾರ್ ಪ್ರಶ್ನೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಸ್ಟಾರ್‌ ಕ್ರಿಕೆಟಿಗ ಶಿಖರ್‌ಧವನ್‌ ನಿವೃತ್ತಿ ಘೋಷಣೆಮಂಗಳೂರಿನಲ್ಲಿ ಭಯಾನಕ ಗ್ಯಾಂಗ್ ರೇಪ್: ಅನ್ಯಕೋಮಿನ ಮೂವರು ಯುವಕರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ..!ರುಚಿಕರವಾದ ಸೋರೆಕಾಯಿ ಪಾಯಸ ಮಾಡುವ ವಿಧಾನಕಿವಿ ಹಣ್ಣಿನ ವಿಶೇಷ ಗುಣಗಳು ನಮ್ಮ ಆರೋಗ್ಯಕ್ಕೆ ಹೇಗೆ ಸಹಾಯಕ ಗೊತ್ತೇ?ಮನೆಯಲ್ಲಿ ಪ್ರತಿಯೊಂದು ಸಣ್ಣ ಸಣ್ಣ ವಿಚಾರಕ್ಕೂ ಕೂಡ ಜಗಳ ಆಗುತ್ತಾ ಇದ್ದರೆ ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸಿ.