ರೋಹಿತ್ ಸ್ಥಾನಕ್ಕೆ ಮೂವರನ್ನ ಸೂಚಿಸಿದ ಸುನಿಲ್ ಗವಾಸ್ಕರ್
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿನ ಸೋಲಿನ ಬೆನ್ನಲ್ಲೇ ಶುರುವಾದ ಭಾರತ ತಂಡದ ನಾಯಕತ್ವದ ಚರ್ಚೆಯು ಇನ್ನೂ ಕೂಡ ಮುಂದುವರೆದಿದೆ. ಈ ಚರ್ಚೆಗೆ ತಾರ್ಕಿಕ ಅಂತ್ಯ ಸಿಗುವುದು ಏಕದಿನ ವಿಶ್ವಕಪ್ ಬಳಿಕ. ಇದನ್ನು ಪುಷ್ಠೀಕರಿಸುವಂತಹ ಹೇಳಿಕೆ ನೀಡಿದ್ದಾರೆ ಮಾಜಿ ನಾಯಕ ಸುನಿಲ್ ಗವಾಸ್ಕರ್. ಹಿಟ್ಮ್ಯಾನ್ ನಾಯಕತ್ವದಲ್ಲಿ ಭಾರತ ತಂಡವು ಏಷ್ಯಾಕಪ್, ಟಿ20 ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮುಗ್ಗರಿಸಿದೆ. ಕೆಲವು ಮಾಜಿ ಕ್ರಿಕೆಟಿಗರು ಕೂಡ ತಂಡವು ಯಾವುದೇ ಭವಿಷ್ಯದ ಸಂಭಾವ್ಯ ನಾಯಕರನ್ನು ರೂಪಿಸುತ್ತಿಲ್ಲ. ಆದ್ದರಿಂದ ಮತ್ತು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡದ ಮೇಲೆ ಪರಿಣಾಮ ಬೀರಬಹುದು ಎಂದು ಗಮನಸೆಳೆದಿದ್ದಾರೆ. ಮಾಜಿ ನಾಯಕ ಸುನಿಲ್ ಗವಾಸ್ಕರ್, ಮುಂಬರುವ ವರ್ಷಗಳಲ್ಲಿ ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ರಾಷ್ಟ್ರೀಯ ತಂಡವನ್ನು ಮುನ್ನಡೆಸಬಹುದು ಎಂದು ಹೇಳಿದ್ದಾರೆ. ಶುಭಮನ್ ಗಿಲ್ ಮತ್ತು ಇನ್ನೊಬ್ಬರು ಅಕ್ಷರ್ ಪಟೇಲ್ ಭವಿಷ್ಯದ ನಾಯಕರೆಂದು ಸೂಚಿಸಿದ್ದಾರೆ. ಅಕ್ಸರ್ ಚಿಮ್ಮಿ ಉಪನಾಯಕನ ಜವಾಬ್ದಾರಿಯನ್ನು ಅವರಿಗೆ ನೀಡಬಹುದು ಎಂದಿದ್ದಾರೆ. ಹಾಗಾಗಿ, ನನ್ನ ದೃಷ್ಟಿಯಲ್ಲಿ ಇವರಿಬ್ಬರೇ ಅಭ್ಯರ್ಥಿಗಳು, ಇತರರಿದ್ದರೆ, ಇಶಾನ್ ಕಿಶನ್ ಅವರಂತಹವರು ಒಮ್ಮೆ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರೆ. ಅವರು ಲೆಕ್ಕಾಚಾರದಲ್ಲಿ ಬರಬಹುದು ಎಂದು ಸ್ಪೋರ್ಟ್ಸ್ ಟುಡೆಯೊಂದಿಗೆ ಗವಾಸ್ಕರ್ ಹೇಳಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.