LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಿಎಂ ಡಿಸಿಎಂ ಕೈ ಸೇರಿದ ಕಾಂಗ್ರೆಸ್ ಆಂತರಿಕ ಸಮೀಕ್ಷಾ ವರದಿ, 14ರಲ್ಲಿ "ಕೈ" ಮೇಲು!

ಬೆಂಗಳೂರು : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೊಂಬಾಟ್ ರಿಸಲ್ಟ್ ಬರುವ ನಿರೀಕ್ಷೆ ದಟ್ಟವಾಗಿದೆ. ಏಪ್ರಿಲ್ 26 ಮತ್ತು ಮೇ.7 ಸೇರಿದಂತೆ ರಾಜ್ಯದಲ್ಲಿ ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆದಿದ್ದು, ಯಾವ ಪಕ್ಷಕ್ಕೆ ಎಷ್ಟು ಗೆಲುವು ದೊರೆಯಬಹುದು? ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾಗಿದ್ದ ಆಂತರಿಕ ಸಮೀಕ್ಷಾ ವರದಿ ಇದೀಗ ಸಿಎಂ ಮತ್ತು ಡಿಸಿಎಂ ಅವರ ಕೈ ಸೇರಿದ್ದು, ಕೈ ಪಾಳಯದವರಿಗೆ ಖುಷಿ ಸಮಾಚಾರ ಕಾದಿದೆ. ಈ ಸಲದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದ್ದರ ಪರಿಣಾಮ ಮತಗಳ ಧೃವೀಕರಣದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ತುಸು ಹಿನ್ನಡೆಯಾಗಬಹುದೆಂಬ ಆತಂತ ಇದೀಗ ಈ ವರದಿಯಿಂದ ದೂರವಾದಂತಾಗಿದೆ. ಏಕೆಂದರೆ ಬಿಜೆಪಿಯವರ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟೂ ಸೀಟ್ ಗಳನ್ನು ಗೆಲ್ಲುತ್ತೇವೆಂಬ ಲೆಕ್ಕಾಚಾರ ಬುಡಮೇಲಾದಂತಾಗಿದೆ. ಮೂಲಗಳ ಪ್ರಕಾರ, ಈ ಬಾರಿ ಕಾಂಗ್ರೆಸ್ ಮೊದಲ ಹಂತದ ಹದಿನಾಲ್ಕು ಕ್ಷೇತ್ರಗಳಲ್ಲಿ 6 ಸೀಟ್ ಗಳು ಹಾಗೂ ಎರಡನೇ ಹಂತದ ಹದಿನಾಲ್ಕು ಕ್ಷೇತ್ರಗಳ ಪೈಕಿ 8 ಸೀಟುಗಳು ಸೇರಿದಂತೆ ಒಟ್ಟು 14 ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ದುಂಧುಬಿ ಮೊಳಗಿಸಲಿದ್ದಾರೆ ಎನ್ನುವುದು ಇದೀಗ ಬಹಿರಂಗವಾಗಿದೆ. ಇದೇ ಕಾರಣಕ್ಕೋ ಏನೋ ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಫಲಿತಾಂಶದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಲೆದಂಡ ಖಚಿತ ಎಂದು ಮಾರ್ಮಿಕವಾಗಿ ಹೇಳಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಗಳೂರು: ಲವ್ ಜಿಹಾದ್ ಕಾಟ – ಸಮೀರ್ ಗೆ ಶಿಕ್ಷೆ ನೀಡುವಂತೆ, ದೇವರ ಮೊರೆ ಹೋದ ಪೋಷಕರು..!!!ದೀಪಾವಳಿ ಹಬ್ಬದ ಹಿನ್ನೆಲೆ, ಪಟಾಕಿ ಹಚ್ಚುವವರಿಗೆ ಪೊಲೀಸ್ ಇಲಾಖೆಯ ಸೂಚನೆಗಳಿವು..!ಮನೆಯಲ್ಲಿಯೇ ಆಯುರ್ವೇದ ಪದ್ದತಿಗಳನ್ನು ರೂಢಿಸಿಕೊಳ್ಳುವುದು ಒಳಿತು: ಬಿ.ಟಿ.ಕುಮಾರಸ್ವಾಮಿವೈದ್ಯಕೀಯ ಪದ್ದತಿಯಲ್ಲಿ ಗುಣಪಡಿಸಲಾಗದಂತ ಕಾಯಿಲೆಯನ್ನು ಪಾರಂಪರಿಕ ವೈದ್ಯ ಪದ್ದತಿಯಲ್ಲಿ ವಾಸಿ.!  ಟಿ.ರಾಜಣ್ಣ.!ಸುಪ್ರೀಂಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿ ಜಾರಿಗೊಳ್ಳಲಿ; ಎಂ.ಶಿವಮೂರ್ತಿಸರಳ ಜೀವನ ಪಾಲಿಸಿ ಎಂದು ಭೋದನೆ ಮಾಡಿದ್ದ ಆಧ್ಯಾತ್ಮಿಕ ವಾಗ್ಮಿ ಜಯ ಕಿಶೋರಿ ಕೈಯಲ್ಲಿ 2 ಲಕ್ಷ ಬೆಲೆ ಬಾಳುವ ಬ್ಯಾಗ್'ಪ್ರಚಾರಕ್ಕೆ ನನಗೆ ಯಾವುದೇ ನಿರ್ದಿಷ್ಟ ಆಹ್ವಾನ ಬಂದಿಲ್ಲ' - ಮಾಜಿ ಸಚಿವ ಜಿ.ಟಿ.ದೇವೇಗೌಡನಿಧಿ ಆಸೆಗೆ ಮಗನನ್ನೇ ಬಲಿ ಕೊಡಲು ಯತ್ನಿಸಿದ ತಂದೆ, ತಡೆದ ಪತ್ನಿ..!ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ Good News; 4115 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್.!ಬೆಂಗಳೂರು: ರಾಜ್ಯ ಜಾನುವಾರು ಜನಗಣತಿಗೆ ಚಾಲನೆ ನೀಡಿದ ಸಿಎಂ