LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

16 ಸಾವಿರ ಜನರಿಗೆ ವಂಚಿಸಿದ ಮಹಿಳೆಗೆ 1.41 ಲಕ್ಷ ವರ್ಷಗಳ ಸೆರೆವಾಸ - ಜೈಲು ಶಿಕ್ಷೆಯ ಪ್ರಮಾಣಕ್ಕೆ ವಿಶ್ವವೇ ನಿಬ್ಬೆರಗು

ಯಾವುದೇ ತಪ್ಪು ಮಾಡಿದರೂ ಅದಕ್ಕೆ ಕಾನೂನಿನಲ್ಲಿ ಇಂತಿಷ್ಟು ದಿನ, ತಿಂಗಳು ಅಥವಾ ವರ್ಷಗಳ ಕಾಲ ಶಿಕ್ಷೆ ಹಾಗೂ ದಂಡವನ್ನು ನ್ಯಾಯಾಲಯಗಳು ವಿಧಿಸುತ್ತವೆ. ಕೆಲವೊಂದು ಪ್ರಕರಣಗಳಲ್ಲಿ ಕಠಿಣ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ. ನಮ್ಮ ದೇಶದಲ್ಲೂ ಕೂಡಾ ಅಷ್ಟೆ ಆಯಾ ಪ್ರಕರಣಗಳಿಗೆ ತಕ್ಕಂತೆ ಆರು ತಿಂಗಳು, ಒಂದು ವರ್ಷ, ಆರು ವರ್ಷ ಅಥವಾ ಜೀವಾವದಿ ಶಿಕ್ಷೆಯನ್ನು ವಿಧಿಸುತ್ತಾರೆ. ಆದರೆ, ಇಲ್ಲೊಂದು ಆಘಾತಕಾರಿ ಶಿಕ್ಷೆಯ ಪ್ರಮಾಣ ಘೋಷಣೆಯಾಗಿದೆ. ಅದೂ ಮೋಸ ಮಾಡಿದ ಪ್ರಕರಣಕ್ಕೆ ಇಷ್ಟೊಂದು ವರ್ಷಗಳ ಕಾಲ ಶಿಕ್ಷೆ ವಿಧಿಸುತ್ತಾರಾ ಎಂದು ವಿಶ್ವದ ಜನ ನಿಬ್ಬೆರಗಾಗಿದ್ದಾರೆ. ಸಾಮಾನ್ಯವಾಗಿ ಮೋಸದ ಪ್ರಕರಣಕ್ಕೆ ಕಾನೂನಿನ ಪ್ರಕಾರ ಎಷ್ಟು ಶಿಕ್ಷೆಯಾಗಬಹುದು ಅಬ್ಬಬ್ಬಾ ಅಂದರೆ ಆರು ತಿಂಗಳು ಅಥವಾ ಒಂದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಬಹುದು. ಆದರೆ, ಈ ಮಹಿಳೆಗೆ 1,41,078 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಇಷ್ಟು ದೀರ್ಘಾವಧಿಯ ಸೆರೆವಾಸ ವಿಚಿತ್ರ ಎನಿಸಬಹುದು. ಆದರೆ ಇದು ನಿಜಸಂಗತಿ. ಥಾಯ್ಲೆಂಡ್‌ನ ಚಮೋಯ್ ಥಿಪ್ಯಾಸೊ ಎಂಬ ಈ ದುಷ್ಟ ಮಹಿಳೆ 16,000 ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಳು. ಇದಕ್ಕಾಗಿ ಆಕೆಗೆ 1,41,078 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಮಹಿಳೆ ಸುಮಾರು 16.5 ಶತಕೋಟಿ ರೂಪಾಯಿಗಳನ್ನು ದೋಚಿದ್ದಳು. ಉಳಿತಾಯ ಯೋಜನೆಯ ಹೆಸರಿನಲ್ಲಿ ತಿಪ್ಯಾಸೋ ವಂಚನೆಯ ಸಂಚು ಹೆಣೆದಿದ್ದಳು. ಹಣಕಾಸು ಕಂಪನಿ ಮತ್ತು ಹೂಡಿಕೆ ಯೋಜನೆ ನಡೆಸುವ ಮೂಲಕ ಈಕೆ ಜನರನ್ನು ವಂಚಿಸುತ್ತಿದ್ದಳು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಅಬಕಾರಿ ಇಲಾಖೆ - ಮದ್ಯದ ದರದಲ್ಲಿ ಏರಿಕೆ‌ಕರಸೇವಕರ ಬಂಧನ ಖಂಡಿಸಿ ನಾಳೆ ರಾಜ್ಯವ್ಯಾಪಿ ಪ್ರತಿಭಟನೆಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು..!ಷರತ್ತು ಉಲ್ಲಂಘನೆ - ಭಾರತದ 71 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್ಕರ್ನಾಟಕದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭಶಬರಿಮಲೆ ಮಕರವಿಳಕ್ಕು ಉತ್ಸವ – ಮೊದಲ ದಿನವೇ ಭಕ್ತರ ಸಾಗರಸುಮ್ಮನೆ ICU ಗೆ ದಾಖಲು ಮಾಡುವ ಹಾಗಿಲ್ಲ….ಮೊದಲ ಬಾರಿಗೆ ಕೇಂದ್ರ ಸರಕಾರದಿಂದ ನಿಯಮಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಸಾರ್ವತ್ರಿಕ ರಜೆ ಘೋಷಣೆಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ..!ರಾಜ್ಯದ ಪ್ರತಿ ಮನೆಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ: ಶರಣ್ ಪಂಪ್‌ವೆಲ್ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ - ನಾಲ್ಕು ಮಂದಿ ಮೃತ್ಯು