LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

2022ರಲ್ಲಿ ರೇಬಿಸ್‌ನಿಂದ ಸಾವಿನ ಪ್ರಮಾಣದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ನವದೆಹಲಿ:2022ರಲ್ಲಿ ದೇಶಾದ್ಯಂತ ಸಂಭವಿಸಿದ ರೇಬಿಸ್ ಸೋಂಕಿನಿಂದಾದ ಮರಣ ಪ್ರಮಾಣದಲ್ಲಿ ಕರ್ನಾಟಕ ರಾಜ್ಯಗಳು ಮೂರನೆ ಸ್ಥಾನದಲ್ಲಿವೆ.

ಜುಲೈ 21ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಬಘೇಲ್ , ಕೇರಳ ಸಂಸದ ಡೀನ್ ಕುರಿಯಾಕೋಸ್ ಅವರ ಪ್ರಶ್ನೆಗೆ ಪ್ರತಿಯಾಗಿ ಲೋಕಸಭೆಯಲ್ಲಿ ಮಂಡಿಸಿದರು.

ವರದಿಯ ಪ್ರಕಾರ, ದಕ್ಷಿಣ ಭಾರತದ ಐದು ರಾಜ್ಯಗಳು ಅತಿ ಹೆಚ್ಚು ರೇಬಿಸ್ ಸೋಂಕಿನ ಮರಣ ಪ್ರಮಾಣವನ್ನು ದಾಖಲಿಸಿವೆ. ಇಡೀ ಭಾರತದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಮೂರನೆ ಅತಿ ಹೆಚ್ಚು ರೇಬಿಸ್ ಸೋಂಕಿನ ಮರಣಗಳನ್ನು ದಾಖಲಿಸಿದ್ದರೆ, ಕೇರಳ 27 ಮರಣಗಳೊಂದಿಗೆ ನಾಲ್ಕನೆಯ ಸ್ಥಾನದಲ್ಲಿ, ತೆಲಂಗಾಣ 21 ಮರಣಗಳೊಂದಿಗೆ ಐದನೆಯ ಸ್ಥಾನದಲ್ಲಿ ಹಾಗೂ ತಮಿಳುನಾಡು 20 ಮರಣಗಳೊಂದಿಗೆ ಆರನೆಯ ಸ್ಥಾನದಲ್ಲಿದೆ ಎಂದು ವರದಿ ಮಾಡಿದೆ.

ಇಡೀ ದೇಶದಲ್ಲಿ ರೇಬಿಸ್ ಸೋಂಕಿನಿಂದ ಸಂಭವಿಸಿರುವ ಮರಣಗಳಲ್ಲಿ ದಿಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಇಲ್ಲಿ 48 ಮರಣಗಳು ಸಂಭವಿಸಿವೆ. ನಂತರ, ಕ್ರಮವಾಗಿ ಪಶ್ಚಿಮ ಬಂಗಾಳ (38), ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ (ತಲಾ 29), ಕೇರಳ (27), ತಮಿಳುನಾಡು (27), ಬಿಹಾರ ಮತ್ತು ತೆಲಂಗಾಣ (ತಲಾ 21), ತಮಿಳುನಾಡು (16) ಹಾಗೂ ಅಸ್ಸಾಂ (12) ರಾಜ್ಯಗಳಿವೆ. ಉಳಿದಂತೆ ಇನ್ನಿತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 10ಕ್ಕಿಂತಲೂ ಕಡಿಮೆ ಪ್ರಮಾಣದ ಮರಣ ಸಂಖ್ಯೆಯನ್ನು ದಾಖಲಿಸಿವೆ ಎಂದು ತಿಳಿಸಿದೆ. 2022ರಲ್ಲಿ ರೇಬಿಸ್ ಸೋಂಕಿನಿಂದಾಗಿರುವ ಮರಣಗಳ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಾವಾರು ದತ್ತಾಂಶಗಳನ್ನೂ ಸಚಿವರು ಒದಗಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಬಿಜೆಪಿಯವರದ್ದು ಡೋಂಗಿ ಹಿಂದುತ್ವ' -ಸಿಎಂ ವ್ಯಂಗ್ಯವಖ್ಫ್ ಆಸ್ತಿಗಳ ಒತ್ತುವರಿ ಕುರಿತು ತಿಂಗಳಲ್ಲಿ ವರದಿ ನೀಡಲು ಸಚಿವ ಜಮೀರ್ ಗಡುವುಶಬರಿಮಲೆ – ಪಂಪಾ ನದಿಯಲ್ಲಿ ಮುಳುಗಿ ಇಬ್ಬರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಸಾವುಜನರ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಸುಮ್ಮನಿರಲ್ಲ: ಡಿಕೆಶಿಸೊಸೆ ಗಂಡು ಮಗು ಹೆರಲಿಲ್ಲವೆಂದು 2 ತಿಂಗಳ ಮೊಮ್ಮಗಳ ಕತ್ತು ಹಿಸುಕಿ ಕೊಂದ ಅತ್ತೆಮಾವಬಿಗ್ ಬಾಸ್ ಮನೆಗೆ ಬಂದ ಡ್ರೋನ್ ಪ್ರತಾಪ್ ತಂದೆ ತಾಯಿ….ಕಣ್ಣೀರು ಹಾಕಿ ಗಳಗಳನೆ ಅತ್ತ ಡ್ರೋನ್ ಪ್ರತಾಪ್ರಾಹುಲ್ ಗಾಂಧಿ ಯಾತ್ರೆ 2.0: ‘ಮಣಿಪುರದಿಂದ ಮುಂಬೈಗೆ’ ಜನವರಿ 14ರಂದು ಚಾಲನೆಸಾವೀಗೀಡಾದ ಕಾಶ್ಮೀರಿ ನಾಗರೀಕರ ಕುಟುಂಬಗಳನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್; ಸೇನೆಗೆ ಕಿವಿಮಾತುಹೊಸ ವರ್ಷದಲ್ಲಿ ಹೊಸ ದಾಖಲೆ ಬರೆಯುತ್ತಾ ಚಿನ್ನ? ಹಳದಿ ಲೋಹದ ಬೆಲೆ ಏರಿಕೆಗುಜರಿ ಬಸ್ ಸಂಚಾರಕ್ಕೆ ಬಳಸದಂತೆ ಹೈಕೋರ್ಟ್ ಆದೇಶ