LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

8 ವರ್ಷದ ಬಾಲಕಿ ಹೊಟ್ಟೇಲಿ 3 ಕೆಜಿ ಕೂದಲು ಪತ್ತೆ!

ಬೆಂಗಳೂರು : ಬೆಂಗಳೂರಿನಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂಬಂತೆ 8 ವರ್ಷದ ಬಾಲಕಿ ಹೊಟ್ಟೆಯಲ್ಲಿ ಬರೋಬ್ಬರಿ 3 ಕೆ.ಜಿ. ತೂಕದಷ್ಟು ಕೂದಲು ಪತ್ತೆಯಾಗಿದ್ದು, ವೈದ್ಯರೇ ಅಚ್ಚರಿಗೆ ಒಳಗಾಗಿದ್ದಾರೆ.


ಬೆಂಗಳೂರಿನ ನಾಯಂಡಹಳ್ಳಿಯ ನೇಟಸ್‌ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಜಡೆಯಂತೆ ಗಂಟು ಕಟ್ಟಿಕೊಂಡಿದ್ದ 3 ಕೆ.ಜಿ ಕೂದಲಿನ ಗಡ್ಡೆ ತೆಗೆದಿದ್ದಾರೆ.

ಬಹು ಅಪರೂಪದ ‘ಟ್ರೈಕೊ ಬೆಜೋರ್’ ಎಂಬ ಕೂದಲು ನುಂಗುವ ರೋಗದಿಂದ ಬಳಲುತ್ತಿದ್ದ ಬಾಲಕಿ ಸುಮಾರು 4-5 ವರ್ಷಗಳಿಂದ ಕೂದಲು ನುಂಗಿರುವ ಸಾಧ್ಯತೆಯಿದೆ.

ಅಷ್ಟೂ ವರ್ಷ ಪೋಷಕರಿಗೆ ಈ ಬಗ್ಗೆ ಸಣ್ಣ ಅನುಮಾನವೂ ಬಂದಿಲ್ಲ. ಇತ್ತೀಚೆಗೆ ತೂಕ ಕಡಿಮೆಯಾಗುತ್ತಿತ್ತು. ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಹೊಟ್ಟೆ ಭಾಗದಲ್ಲಿ ಗಡ್ಡೆ ರೀತಿಯ ಗುರುತು ಪತ್ತೆಯಾಗಿದ್ದರಿಂದ ಎಚ್ಚೆತ್ತ ಪೋಷಕರು ನೇಟಸ್‌ ಆಸ್ಪತ್ರೆಗೆ ಕರೆತಂದಿದ್ದಾರೆ.

ಈ ವೇಳೆ ವೈದ್ಯರು ಪರಿಶೀಲಿಸಿ, ಹೊಟ್ಟೆ ಭಾಗದಲ್ಲಿ ಗಡ್ಡೆ ಇದ್ದಿದ್ದರಿಂದ ಸಿಟಿ-ಸ್ಕ್ಯಾನ್‌ ಮಾಡಿದ್ದರು. ಸ್ಕ್ಯಾನ್‌ ವರದಿಯಲ್ಲಿ ಕೂದಲು ಇರುವುದು ಪತ್ತೆಯಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿ ಕೂದಲು ತೆಗೆಯಲಾಗಿದೆ.

ಮಕ್ಕಳ ಕ್ರಿಟಿಕಲ್‌ ಕೇರ್‌ ತಜ್ಞರಾದ ಡಾ.ಎಚ್.ಎಸ್‌.ಸುರೇಂದ್ರ ನೇತೃತ್ವದಲ್ಲಿ ಡಾ.ಪ್ರದೀಪ್‌, ಡಾ.ಹೇಮಾ, ಡಾ. ದೀಪ್ತಿ, ಡಾ.ಕೇಶವ ಮೂರ್ತಿ, ಡಾ.ಮಂಜುನಾಥ್ ಅವರನ್ನು ಒಳಗೊಂಡ ವಿವಿಧ ತಜ್ಞ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿದ ಡಾ.ಎಚ್.ಎಸ್‌. ಸುರೇಂದ್ರ ಅವರು, ಸುಮಾರು 3 ಕೆ.ಜಿ. ಅಷ್ಟು ಕೂದಲು ಸುರುಳಿ ಆಕಾರದಲ್ಲಿ ಸುತ್ತಿಕೊಂಡು ಬರೋಬ್ಬರಿ 35 ಸೆ.ಮೀ. ಉದ್ದದಷ್ಟು ಜಡೆ ಸೃಷ್ಟಿಯಾಗಿತ್ತು. ಹೊಟ್ಟೆ ಭಾಗದಲ್ಲಿ ಸಣ್ಣ ಕರಳಿನವರೆಗೂ ಕೂದಲಿನ ಗಡ್ಡೆ ವ್ಯಾಪಿಸಿತ್ತು. ಮೊದಲಿಗೆ ಎರಡು ಬಯೋಪ್ಸಿ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲು ಪ್ರಯತ್ನಿಸಿದರೂ ಕೂದಲು ತುಂಡಾಗುತ್ತಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಕೂದಲಿನ ಗಡ್ಡೆ ತೆಗೆಯಲಾಗಿದೆ ಎಂದರು.

ಏನಿದು ‘ಟ್ರೈಕೊ ಬೆಜೋರ್‌’?:

ಟ್ರೈಕೊ ಬೆಜೋರ್ ಎಂದರೆ ಕೂದಲು ನುಂಗುವ ಕಾಯಿಲೆ. ಕೆಲ ಮಹಿಳೆಯರಲ್ಲಿ ತಮ್ಮ ಕೂದಲು ಕಡಿದು ನುಂಗುವ ಕಾಯಿಲೆ ಇರುತ್ತದೆ. ಟ್ರೈಕೊಟಿಲೊಮೇನಿಯಾ (ಕೂದಲು ಕೀಳುವುದು) ಹಾಗೂ ಟ್ರೈಕೊ ಬೆಜಿಯಾ (ಕೂದಲು ನುಂಗುವುದು) ಎಂಬ ಮಾನಸಿಕ ಅನಾರೋಗ್ಯ ಉಳ್ಳವರಲ್ಲಿ ಇದು ಚಟವಾಗಿಬಿಟ್ಟಿರುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026