LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮರುಭೂಮಿಯಲ್ಲಿ ಬೆಳೆದು ನಿಂತ 30,000 ಮರಗಳು - ಇದು ಜಂಗಲ್‌ಮ್ಯಾನ್‌ ಕಹಾನಿ!

ರಾಜಸ್ಥಾನ್ : ಬಿಸಿಲಿನ ತೀವ್ರ ಪ್ರಭಾವವಿರುವ ರಾಜಸ್ಥಾನದ ನಿರ್ಜಲ ಪ್ರದೇಶಗಳಲ್ಲಿ ಮರಗಳನ್ನು ನೆಡುವುದು ಸಾಮಾನ್ಯವಾಗಿ ಅಸಾಧ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಯುವಕ ಭುವನೇಜ್ ಓಜಾ ಈ ಕಲ್ಪನೆಯನ್ನು ನಿಜವಾಗಿಸಿದವರು. ತಮ್ಮ ದೃಢ ಸಂಕಲ್ಪ ಮತ್ತು ಪರಿಶ್ರಮದ ಮೂಲಕ, ಅವರು ಬಂಜರು ಭೂಮಿಯನ್ನು ಹಸಿರಿನ ಸಂಪತ್ತಾಗಿ ಪರಿವರ್ತಿಸಿದ್ದಾರೆ.

ಭುವನೇಜ್ ಅವರನ್ನು ಸ್ಥಳೀಯರು “ರಾಜಸ್ಥಾನದ ಜಂಗಲ್ ಮ್ಯಾನ್” ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಾರೆ. ಅವರು ಬಂಜರು ಭೂಮಿಯನ್ನು ಹಚ್ಚ ಹಸುರಿನ ತಾಣವಾಗಿ ಪರಿವರ್ತಿಸಲು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಅವರ ದೃಢ ನಿಶ್ಚಯದಿಂದ, ಮರುಭೂಮಿಯಲ್ಲೂ ಸಹ ಮರಗಳು ಬೆಳೆಯಬಹುದೆಂದು ಸಾಬೀತುಪಡಿಸಿದ್ದಾರೆ. ತಮ್ಮ ಪ್ರಯತ್ನವು 2013 ರಲ್ಲಿ ಪುಕಾರ್ ಫೌಂಡೇಶನ್ ಸ್ಥಾಪನೆಯೊಂದಿಗೆ ಆರಂಭವಾಗಿತ್ತು. ಪುಕಾರ್ ಫೌಂಡೇಶನ್ ಬಂಜರು ಭೂಮಿಯ ಮರು ಅರಣ್ಯೀಕರಣ ಮತ್ತು ಪರಿಸರ ಉಸ್ತುವಾರಿಗಾಗಿ ಕಾರ್ಯನಿರ್ವಹಿಸುತ್ತಿದೆ.

ಕೆಳಗಿನ ಸಾಧನೆಗಳು ಹಿಂದಿನ 12 ವರ್ಷಗಳಲ್ಲಿ ಗಮನಾರ್ಹವಾಗಿವೆ:

* ರಾಜ್ಯಾದ್ಯಂತ 30,000ಕ್ಕೂ ಹೆಚ್ಚು ಮರಗಳನ್ನು ನೆಡಲಾಗಿದೆ
* 3,500 ಕ್ಕೂ ಹೆಚ್ಚು ಸ್ಥಳೀಯ ಪ್ರಭೇದಗಳನ್ನು ಹೊಂದಿರುವ 8 ದಟ್ಟ ಮಿಯಾವಾಕಿ ಕಾಡುಗಳ ನಿರ್ಮಾಣ
* ನವೀನ ನೀರು ಸಂಗ್ರಹಣಾ ವಿಧಾನಗಳ ಮೂಲಕ 2 ಕೋಟಿ ಲೀಟರ್ ಮಳೆನೀರನ್ನು ಸಂರಕ್ಷಿಸಲಾಗಿದೆ
* 600 ರೈತರು ಶಾಶ್ವತ ಮತ್ತು ನೈಸರ್ಗಿಕ ಕೃಷಿಯಲ್ಲಿ ತರಬೇತಿ ಪಡೆದರು
* 800ಕ್ಕೂ ಹೆಚ್ಚು ಉತ್ಸಾಹಭರಿತ ಸ್ವಯಂಸೇವಕರನ್ನು ಸಬಲೀಕರಿಸಲಾಗಿದೆ

ಭುವನೇಜ್ ಓಜಾ ಅವರ ತಂಡವು ಪ್ರತಿಯೊಂದು ಯೋಜನೆಯಲ್ಲಿಯೂ ಸುಸ್ಥಿರತೆ ಮತ್ತು ಸಮುದಾಯದ ಭಾಗವಹಿಸುವಿಕೆಗೆ ಪ್ರಧಾನ್ಯ ನೀಡುತ್ತದೆ. ಮಣ್ಣಿನ ಸ್ವಯತ್ತತೆ ಪುನಃಸ್ಥಾಪಿಸಿ, ಜೀವವೈವಿಧ್ಯತೆಯನ್ನು ಸುಧಾರಿಸಿ, ಸ್ಥಳೀಯ ಮೈಕ್ರೋಕ್ಲೈಮೇಟ್ ರಚಿಸುವ ಮೂಲಕ, ಅವರು ಬಂಜರು ಪ್ರದೇಶಗಳಲ್ಲಿ ಹಸಿರಿನ ಪರಿಸರವನ್ನು ಸೃಷ್ಟಿಸಿದ್ದಾರೆ. ನಿರ್ಮಿಸಿದ ಕಾಡುಗಳು, ಪಕ್ಷಿಗಳು, ಪರಾಗಸ್ಪರ್ಶಕಗಳು ಹಾಗೂ ಇತರ ಜೈವಿಕವೈವಿಧ್ಯಕ್ಕೆ ಆಶ್ರಯ ತಾಣಗಳಾಗಿ ಪರಿಗಣಿಸಲಾಗಿದೆ. ಭುವನೇಜ್ ಓಜಾ ಅವರ ಕಾರ್ಯಗಳು ಮರುಭೂಮಿಗಳನ್ನೂ ಕೂಡ ಅಭಿವೃದ್ಧಿಯ ಹಾದಿಯಾಗಿಸಬಹುದು ಎಂಬುದಕ್ಕೆ ದೃಢ ಸಾಕ್ಷಿಯಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026