
ಸೆಪ್ಟಂಬರ್ 29ರಂದು ವಿ ಎಸ್ ಆರಾಧ್ಯ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್. ಆರ್ (ಭಾ.ಆ.ಸೇ), ನಿರ್ದೇಶಕರು (ಮಾ.ತಂ) ಶಿಲ್ಪಾ. ಎಂ (ಭಾ.ಆ.ಸೇ) ಹಾಗೂ ನಿರ್ದೇಶಕರು (ಭ&ಜಾ) ಅಬ್ದುಲ್ ಅಹದ್ (ಭಾ.ಪೊ.ಸೇ) ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ, ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೊಸ ಅಧ್ಯಕ್ಷರನ್ನು ಸ್ವಾಗತಿಸಿದರು.
ಗುಗುರುವಾರ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನದ ಅಧಿಕೃತವಾಗಿ ಪೂಜಿ ಸಲ್ಲಿಸುವ ಮೂಲಕ ಪಾದರ್ಪಣೆಯನ್ನು ಮಾಡಿದರು, ಒಂದು ವಿ ಎಸ್ ಆರಾಧ್ಯ ಅವರಿಗೆ ನಾಡಿನ ಮೂಲೆ ಮೂಲೆಗಳಿಂದ ಪಕ್ಷಾಭೇದ ಮರೆತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಿತೈಷಿಗಳು ಬಂಧುಗಳು ಸಂಬಂಧಿಕರು ಎಲ್ಲರೂ ಸಹ ಒಗ್ಗಟ್ಟಿನಿಂದ ಆರಾಧ್ಯ ಅವರಿಗೆ ಶುಭ ಕೋರಿದರು.
ಇನ್ನೂ ಬೆಳಿಗ್ಗೆಯಿಂದ ಸಂಜೆಯ ತನಕ ಸುಮಾರು ಐದು ನೂರಕ್ಕಿಂತ ಹೆಚ್ಚು ಅಭಿಮಾನಿಗಳು ಕಾರ್ಯಕರ್ತರು ಹಿತೈಷಿಗಳು ತಮ್ಮ ನೆಚ್ಚಿನ ಅಧ್ಯಕ್ಷರಿಗೆ ಪುಷ್ಪಗುಚ್ಛ ಸಿಹಿತಿನಿಸು ಸಮರ್ಪಿಸುವ ಮೂಲಕ ವಿಶೇಷವಾದಂತಹ ಉಡುಗೊರೆಗಳನ್ನು ಕೊಡುವ ಮೂಲಕ ಶುಭ ಹಾರೈಸಿದ್ದನ್ನು ನೋಡಬಹುದಾಗಿದೆ.
ಕೇವಲ ಕಾರ್ಯಕರ್ತರ ಸಾರ್ವಜನಿಕರಲ್ಲದೆ ಮುಖಂಡರುಗಳು ಸಹ ಭಾಗಿ
ಇನ್ನು ವಿಎಸ್ ಆರಾಧ್ಯ ಅವರ ಕಚೇರಿಯ ಪೂಜಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಹಿರಿಯ ಮುಖಂಡರುಗಳು ಹಾಗೂ ಸಾರಿಗೆ ಹಾಗೂ ಮುಜರಾಯಿ ಸಚಿವರಾದಂತಹ ರಾಮಲಿಂಗ ರೆಡ್ಡಿ ಅವರು ಸೇರಿದಂತೆ ಸಲೀಂ ನಜೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ನ ಎಲ್ಲಾ ವಿಭಾಗದ ವಾರ್ಡ್ ಅಧ್ಯಕ್ಷರುಗಳು ಬ್ಲಾಕ್ ಅಧ್ಯಕ್ಷರುಗಳು ಮಾಜಿ ಬಿಬಿಎಂಪಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆರಾಧ್ಯ ಅವರಿಗೆ ಶುಭ ಹಾರೈಸಿದರು.
ಇನ್ನೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ನಿಖಿತ್ ರಾಜ್ ಅವರು ಅಧಿಕಾರ ವಹಿಸಿಕೊಂಡಿದ್ದರು ಈ ಒಂದು ಕಾರ್ಯಕ್ರಮದಲ್ಲಿ ಸಾಕಷ್ಟು ಅಭಿಮಾನಿಗಳು ಕಾರ್ಯಕರ್ತರು ರಾಜ್ ಅವರಿಗೆ ಶುಭ ಹಾರೈಸಿದರು.
ಇನ್ನು ಇದೇ ವೇಳೆ ಪೇಟಿಎಂ ವಿಧಾನಸಭಾ ಕ್ಷೇತ್ರದ ಲಕ್ಕಸಂದ್ರ ವಾರ್ಡ್ ನ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಆದ ಆಡುಗೋಡಿ ಮೋಹನ್ ಅವರು ಸಹ ಅಧ್ಯಕ್ಷರಾದ ವಿ ಎಸ್ ಆರಾಧ್ಯ ಹಾಗೂ ಉಪಾಧ್ಯಕ್ಷರಾದ ನಿಕೇತ್ ರಾಜ್ ಅವರಿಗೆ ಪುಷ್ಪ ಗುಚ್ಚ ನೀಡುವ ಮೂಲಕ ಶುಭಾಶಯಗಳು ತಿಳಿಸಿದರು.