
ಬೆಂಗಳೂರಿನ ಪ್ಲಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದವರು,ಹಲವು ವರ್ಷಗಳ ಕಾಲ ಕನ್ನಡಪರ ಹೋರಾಟದ ಬೇಡಿಕೆಗಳು ಮತ್ತು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿವೇಚನೆ, ಮುತ್ಸದಿತನ, ಕನ್ನಡಪರ ಕಾಳಜಿಯಿಂದ ಈ ಮಹತ್ವದ ನಿರ್ಧಾರವು ಜಾರಿಯಾಗುತ್ತಿದೆ. ಅದಕ್ಕೆ ಕನ್ನಡ ಪರ ಸಂಘಟನೆಗಳಿಂದ ಸ್ವಾಗತ ಕೋರುತ್ತೇವೆ.
ನಾಡಿನ ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರದ ಈ ತೀರ್ಮಾನದಿಂದ ನಿರಾಳ ಭಾವನೆ ಅನುಭವಿಸುತ್ತಿದ್ದಾರೆ. ಸಾಮಾನ್ಯ ನಾಗರಿಕರು, ಶಿಕ್ಷಣ ತಜ್ಞರು ಸರ್ಕಾರದ ನಿಲುವನ್ನು ಸ್ವಾಗತಿಸಿ ಅಭಿನಂದಿಸುತ್ತಿದ್ದಾರೆ.
ಬಿಜೆಪಿ ಅವರಿಂದ ಹಿಂದಿ ಪರ ಹೇಳಿಕೆಗೆ ಖಂಡನೆ:
ಇಡೀ ಕನ್ನಡ ನಾಡು ಇದನ್ನು ಬೆಂಬಲಿಸುತ್ತಿರುವಾಗಲೇ ಕರ್ನಾಟದ ಬಿಜೆಪಿ ಪಕ್ಷದ ಕೆಲವು ಮುಖಂಡರು ಕನ್ನಡವನ್ನು ದಮನಿಸುತ್ತಿರುವ ಹಿಂದಿ ಭಾಷೆಯ ಪರ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನಾರ್ಹ.ಮಾಜಿ ಶಿಕ್ಷಣ ಸಚಿವರಾದ ಹಾಲಿ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್. ಸಂಸದೆ ಶೋಭಾ ಕರಂದ್ಲಾಜಿ, ಶಾಸಕ ಸುಶೀಲ್ ನಮೋಶಿ, ಬಸವರಾಜ ಹೊರಟ್ಟಿ, ಸಿ.ಟಿ.ರವಿ, ಆರ್.ಅಶೋಕ್. ಕಾಂಗ್ರೆಸ್ ಶಾಸಕ ಪುಟ್ಟಣ್ಣ ಮುಂತಾದವರು ಹಿಂದಿ ಭಾಷೆಯ ಹೇರಿಕೆಗೆ ನಾನಾ ಸಮರ್ಥನೆಗಳನ್ನು ನೀಡುತ್ತಿದ್ದಾರೆ.
ಶಾಸಕ ಮತ್ತು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಹಿಂದಿ ಪರೀಕ್ಷೆಗಳಲ್ಲಿ ಇಲ್ಲಿಯವರೆಗೂ ಫೇಲ್ ಆಗಿ ತೊಂದರೆ ಅನುಭವಿಸಿರುವ ಲಕ್ಷಾಂತರ ಕನ್ನಡಿಗ ವಿದ್ಯಾರ್ಥಿಗಳ ಬಗ್ಗೆ ಯಾವ ಕಾಳಜಿಯನ್ನೂ ತೋರದೆ ಹಿಂದಿ ಹೇರಿಕೆಯನ್ನು ಬೆಂಬಲಿಸುತ್ತಿದ್ದಾರೆ. ಶಿಕ್ಷಣ ಸಚಿವರಾಗಿದ್ದಾಗ ನಾಡು ನುಡಿಯ ಹಿತಾಸಕ್ತಿಗಳನ್ನು ರಕ್ಷಿಸುವ ಕೆಲಸ ಮಾಡದೆ ಆರ್ ಎಸ್ ಎಸ್ ಅಜೆಂಡಾವನ್ನು ಕರ್ನಾಟಕದ ಶಿಕ್ಷಣ ವ್ಯವಸ್ಥೆಯೊಳಗೆ ಜಾರಿ ಮಾಡಲು ಸಹಕರಿಸಿದ್ದರು.
ಕೇಂದ್ರ ಸರ್ಕಾರದ ಪರೀಕ್ಷೆಗಳಿಗೆ ಕನ್ನಡ ಭಾಷೆ ಕಡ್ಡಾಯ ಮಾಡಿ:
ಇತ್ತೀಚೆಗೆ ನಡೆದ ರೇಷ್ಮೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ಬಳಸದೆ ಕೇಂದ್ರದ ಒಕ್ಕೂಟದ ಬಿಜೆಪಿ ಸರ್ಕಾರವು ಅನ್ಯಾಯ ಮಾಡಿದಾಗ ಸುರೇಶ್ ಕುಮಾರ್ ದನಿ ಎತ್ತಲಿಲ್ಲ..ಕರ್ನಾಟಕದ ಸಾವಿರಾರು ಯುವಜನರಿಗೆ ರೇಲ್ವೆ, ಬ್ಯಾಂಕ್ ಕೇಂದ್ರದ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳಲ್ಲಿ ಅವಕಾಶ ತಪ್ಪಿ ಹೋಗುತ್ತಿರುವ ಬಗ್ಗೆ ಯಾರಿಗೂ ಕಾಳಜಿ ಇಲ್ಲ.
ಒಕ್ಕೂಟ ಸರ್ಕಾರವು 15ನೇ ಹಣಕಾಸು ಆಯೋಗದ ಕರ್ನಾಟಕಕ್ಕೆ ಸೂಕ್ತ ಪಾಲು ನೀಡದೆ ವಂಚಿಸಿದಾಗಲೂ ಸುರೇಶ್ ಕುಮಾರ್ ಆಗಲಿ ಇಲ್ಲವೆ ಇನ್ನಿತರ ರಾಜ್ಯ ಬಿಜೆಪಿ ನಾಯಕರು ದನಿ ಎತ್ತಲಿಲ್ಲ.

ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ ಪಡಕೋಟೆ ಮಾತನಾಡಿ, ಕನ್ನಡ ನಾಡು ನುಡಿ ಭಾಷೆ ಸಂಸ್ಕೃತಿ ವಿಚಾರವಾಗಿ ಸಾಕಷ್ಟು ಹೋರಾಟಗಳನ್ನು ದಶಕಗಳಿಂದ ಮಾಡಿಕೊಂಡು ಸಂಘಟನೆಗಳು ಬಂದಿವೆ, ಹಲೋ ಹೋರಾಟಗಳನ್ನು ಕನ್ನಡ ಪದ ಸಂಘಟನೆಯ ಮುಖಂಡರುಗಳು ಜೈಲಿಗೆ ಹೋಗಿ ನರಕಯಾತನೆ ಅನುಭವಿಸಿದ್ದು ಇದೆ.
ಬ್ಯಾಂಕುಗಳಲ್ಲಿ ಕನ್ನಡ ವ್ಯವಹಾರವನ್ನು ಕಡ್ಡಾಯ ಮಾಡಬೇಕು ಎಂದು ಮೊದಲು ಹೋರಾಟ ಮಾಡಿದ್ದು ನಮ್ಮ ಕರ್ನಾಟಕ ಸೇನೆ, ಈ ವಿಚಾರವಾಗಿ ಜೈಲಿಗೆ ಹೋಗಿದ್ದು ಉಂಟು, ಬೇಸರವಾಗಿ ಅನೇಕ ಮುಖಂಡರು ನಮ್ಮ ಮೇಲೆ ಬಿದ್ದಿವೆ. ಹಿಂದಿ ವಿಚಾರವಾಗಿ ಮುಂದಿನ ದಿನಗಳಲ್ಲಿ ಬಿಜೆಪಿಯವರು ಬೇರೆ ಬೇರೆ ವಿಚಾರಗಳನ್ನು ಮಾತನಾಡಿದರೆ ಕನ್ನಡ ಪರ ಸಂಘಟನೆ ಅವರು ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿರಿಯ ಕನ್ನಡ ಪರ ಹೋರಾಟಗಾರರು ಚಿಂತಕರಾದ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಹಿಂದಿ ಭಾಷೆಯ ವಿಚಾರದಲ್ಲಿ ತ್ರಿಭಾಷದಿಂದ ದ್ವಿಭಾಷದ ವರೆಗೆ ನಡೆದಿರುವ ವಿಚಾರದಲ್ಲಿ ಬಿಜೆಪಿಯ ಕೆಲ ನಾಯಕರು ಮೂಗು ತೋರಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು. ನಮ್ಮ ಮಾತೃ ಭಾಷೆ ಕನ್ನಡ ಅದಕ್ಕೆ ಮೊದಲು ಪ್ರಾಶಸ್ಯ ಕೊಡಬೇಕು. ಹಿಂದಿ ಓದುವುದಕ್ಕೆ ಬರೆಯುವುದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಬಿಜೆಪಿಯವರು ಸುಖ ಸುಮ್ಮನೆ ಹಿಂದಿ ತೆಗೆದು ಹಾಕಿದ್ದಾರೆ ಎನ್ನುವ ಸುಳ್ಳು ವದಂತಿಗಳನ್ನು ಎಲ್ಲೆಡೆ ಹಬ್ಬಿಸುತ್ತಿರುವುದು ಮೂರ್ಖತನಕ್ಕೆ ಎಡೆ ಮಾಡಿಕೊಡುತ್ತದೆ ಎಂದರು.
ಇನ್ನು ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರು ಹಿಂದಿ ವಿಚಾರವಾಗಿ ಸಾಕಷ್ಟು ಕೀಳು ಮಟ್ಟದಲ್ಲಿ ಮಾತನಾಡಿರುವುದು ಅವರ ವ್ಯಕ್ತಿತ್ವಕ್ಕೆ ಹಾಗೂ ರಾಜಕೀಯ ನಿರ್ಣತೆಗೆ ಸರಿಯಾದ ವಿಚಾರವಲ್ಲ,
ಕರ್ನಾಟಕ ಸರ್ಕಾರವು ಹಿಂದಿ ಕಲಿಕೆ ಕಡ್ಡಾಯವಲ್ಲ ಎಂಬ ನೀತಿಯನ್ನು 6ನೇ ತರಗತಿಯಿಂದಲೂ ಅನ್ವಯವಾಗುವಂತೆ ತಕ್ಷಣ ಆದೇಶ ಹೊರಡಿಸಬೇಕು.2026-27ನೇ ಶೈಕ್ಷಣಿಕ ವರ್ಷದಿಂದಲೇ ದಿ ಭಾಷಾ ಶಿಕ್ಷಣ ನೀತಿ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತೇವೆ.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಅಶ್ವಥ್ ಮರಿಗೌಡ ರಾಧಾಕೃಷ್ಣ ಪಾರ್ವತೀಸಿ ಬೆಳಿದಾಳೆ, ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಮುಖಂಡರುಗಳು ಇದೆ ವೇಳೆ ಉಪಸ್ಥಿತರಿದ್ದರು.