Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಿಹಾರ ಚುನಾವಣೆ ; ತೇಜಸ್ವಿ ಯಾದವ್ ಗೆ ಇರುವ 6 ಪ್ರಮುಖ ಸವಾಲುಗಳು

ಪಾಟ್ನಾ : ಬಿಹಾರದ ಸಂಕೀರ್ಣ ರಾಜಕೀಯ ರಂಗದಲ್ಲಿ 2025ರ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಎನ್‌ಡಿ ಮೈತ್ರಿಕೂಟ ಹಾಗೂ ಆರ್‌ಜೆಡಿ ನೇತೃತ್ವದ ಮಹಾಘಟಬಂಧನದ ನಡುವೆ ತೀವ್ರ ಹಣಾಹಣಿಯ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆಗಳು ಮುನ್ಸೂಚನೆ ನೀಡಿವೆ. ಬಿಹಾರದ ಪ್ರಮುಖ ವಿಪಕ್ಷವಾದ ಆರ್‌ಜೆಡಿಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ ಯಾದವ್‌ ಅವರ ಪುತ್ರ 35 ವರ್ಷದ ತೇಜಸ್ವಿ ಯಾದವ್ ಅವರು ಮಹಾಘಟಬಂಧನದ ನೇತೃತ್ವವನ್ನೂ ವಹಿಸಿದ್ದಾರೆ.

ಆದರೆ, ರಾಜಕೀಯ ಅಂಕದ ಪರದೆಯು ಮೇಲೇರಿದಾಗ, ಮುಖ್ಯಮಂತ್ರಿ ನಿತೀಶಕುಮಾರ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಹಾಗೂ ಮಹಾಘಟಬಂಧನದ ನಡುವಿನ ರಾಜಕೀಯ ಅಖಾಡದಲ್ಲಿ ಬಹುತೇಕ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ತೇಜಸ್ವಿ ಯಾದವ್‌ ಅಧಿಕಾರಕ್ಕೆ ಏರುವ ಏಣಿಯನ್ನು ಏರುವ ಹಾದಿಯಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ ಪ್ರತಿಯೊಂದು ಸವಾಲುಗಳು ಸಹ ತಮ್ಮದೇ ಸಂಕೀರ್ಣತೆಗಳಿಂದ ಕೂಡಿವೆ.

ಜನ ಸುರಾಜ್‌ ಪಕ್ಷದ ಪ್ರಶಾಂತ್ ಕಿಶೋರ ನೆರಳು
ಜನ ಸುರಾಜ್ ಪಕ್ಷದ ನಾಯಕ, ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ ಪ್ರಮುಖ ಫ್ಯಾಕ್ಟರ್‌ ಆಗಿದ್ದಾರೆ. ಇವರು ಬಹುತೇಕ ರಾಘೋಪುರ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಪಿ.ಕೆ.ಎಂದೇ ಕರೆಯಲ್ಪಡುವ ಅವರು ರಾಘೋಪುರದಲ್ಲಿ ತಮ್ಮ ಪ್ರಚಾರವನ್ನು ಪ್ರಾರಂಭಿಸಿದ್ದಾರೆ, ಆದರೆ ಇನ್ನೂ ಅಧಿಕೃತವಾಗಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿಲ್ಲ. ಇದು ತೇಜಸ್ವಿ ಅವರಿಗೆ ನಿದ್ರೆಯಿಲ್ಲದ ರಾತ್ರಿಗಳಿಗೆ ಕಾರಣವಾಗಿದೆ.
ತೇಜಸ್ವಿ ಯಾದವ್ ಅವರಿಗೆ, ಈ ಕ್ಷೇತ್ರವು ಕೇವಲ ಒಂದು ಸ್ಥಳವಲ್ಲ; ಇದು ಅವರ ಕುಟುಂಬದ ಪರಂಪರೆಯ ಕೋಟೆ. ಅವರ ವಿಜಯ ಅವರ ತಂದೆ ಲಾಲು ಪ್ರಸಾದ್ ಯಾದವ್ ಮತ್ತು ತಾಯಿ ರಾಬ್ರಿ ದೇವಿ ಅವರ ವಿಜಯಗಳನ್ನು ಪ್ರತಿಧ್ವನಿಸುತ್ತವೆ. ತೇಜಸ್ವಿ ಯಾದವ ರಾಘೋಪುರದಿಂದ ಎರಡು ಬಾರಿ ಗೆದ್ದಿದ್ದಾರೆ (2015 ಮತ್ತು 2020). ಬಿಜೆಪಿಯ ಸತೀಶಕುಮಾರ (ಇವರು ಸಹ ಯಾದವ್ ಸಮುದಾಯದ ಅಭ್ಯರ್ಥಿಯಾಗಿದ್ದು, ಈ ಹಿಂದೆ ರಾಬ್ರಿ ದೇವಿಯವರನ್ನು ಸೋಲಿಸಿದ್ದರು) ಅವರ ಗೆಲುವಿನ ಅಂತರ 38,174 ಮತಗಳಾಗಿತ್ತು.
ಪ್ರಶಾಂತ ಕಿಶೋರ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸಬಯಸುವುದು ತೇಜ್ಸ್ವಿ ಯಾದವ್‌ ಅವರಿಗೆ ಇದ್ದಕ್ಕಿದ್ದಂತೆ ಬಂದ ಬಿರುಗಾಳಿಯಂತಿದ್ದು, ಶಾಂತ ಸಮುದ್ರವನ್ನು ಕದಡುವ ಬೆದರಿಕೆ ಹಾಕಿದೆ. ರಾಜಕೀಯ ತಂತ್ರಗಾರಿಕೆಯಲ್ಲಿ ಪ್ರಖ್ಯಾತಿ ಗಳಿಸಿರುವ ಪಿ.ಕೆ.ಯಂತಹ ಹೊಸಬರು, ಅಂತಹ ಸುದೀರ್ಘ ಪರಂಪರೆಯ ಕುಡಿಯನ್ನು ಸೋಲಿಸಬಲ್ಲರೇ? ಇದು ಒಂದು ಪ್ರಶ್ನೆಯಾಗಿ ನಿಲ್ಲುತ್ತದೆ. ಸೋಲಿಸಲು ಸಾಧ್ಯವಾಗದಿದ್ದರೂ ತೇಜಸ್ವಿ ಯಾದವ ಅವರನ್ನು ಈ ಕ್ಷೇತ್ರದಲ್ಲಿ ಕಟ್ಟಿಹಾಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಒಂದು ಸಂಭವನೀಯ ಉತ್ತರವೆಂದರೆ, ಬಿಜೆಪಿ ಮತ್ತೊಮ್ಮೆ ಸತೀಶಕುಮಾರ ಅವರನ್ನು (ಯಾದವ್ ಅಭ್ಯರ್ಥಿ) ಕಣಕ್ಕಿಳಿಸಿದರೆ, ಯಾದವ್ ಮತಗಳು ವಿಭಜನೆಯಾದರೆ ಆಗ ಪಿ.ಕೆ. ಯಾದವೇತರ ಮತಗಳನ್ನು ಸೆಳೆಯಬಹುದಾಗಿದೆ. ಈ ಆತಂಕ ತೇಜ್ವಿಯವರಿಗೆ ಇದ್ದಂತೆ ಕಾಣುತ್ತದೆ.

ಒವೈಸಿ ಎಐಎಂಐಎಂ ಸವಾಲು
ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಿಂದ ಆಗಬಹುದಾದ ಸಂಭಾವ್ಯ ಮತ ಸೆಳೆತ.
ಈ ಪಕ್ಷವು ಬಿಹಾರದಲ್ಲಿ ಹಲವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧವಾಗಿದೆ. ಎಐಎಂಐಎಂನ ಚುನಾವಣಾ ಯಶಸ್ಸು ಪ್ರಶ್ನಾರ್ಹವಾಗಿದ್ದರೂ (2020 ರಲ್ಲಿ ಮುಸ್ಲಿಂ ಬಹುಸಂಖ್ಯಾತ ಸೀಮಾಂಚಲ ಪ್ರದೇಶದಲ್ಲಿ ಎಐಎಂಐಎಂ ಐದು ಸ್ಥಾನಗಳನ್ನು ಗೆದ್ದಿತ್ತು), ಮುಸ್ಲಿಂ ಮತಗಳನ್ನು ಸೆಳೆಯುವ ಸಾಮರ್ಥ್ಯವು ಮಹಾಮೈತ್ರಿಕೂಟದ ಹಲವಾರು ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗಿ ಪರಿಣಮಿಸಬಹುದಾಗಿದೆ.
ತೇಜಸ್ವಿ ಅವರ ಮತ ಬ್ಯಾಂಕ್‌ ಮುಸ್ಲಿಂ-ಯಾದವ್ ಮತಗಳಲ್ಲಿ ನೆಲೆ ಹೊಂದಿದೆ. ಆದರೆ ಎಐಎಂಐಎಂ ಪಕ್ಷವು ಪಡೆಯುವ ಅಲ್ಪಪ್ರಮಾಣದ ಮುಸಲ್ಮಾನರ ಮತಗಳು ಆ ಪಕ್ಷಕ್ಕೆ ಹೋದರೂ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಮುಸ್ಲಿಂ ಮತಗಳನ್ನೂ ಹೆಚ್ಚಗಿ ನಂಬಿಕೊಂಡಿರುವ ಆರ್‌ಜೆಡಿ ಗೆಲುವಿಗೆ ಅಡ್ಡಿಯಾಗಬಹುದು. ಹೀಗೆ ಎಂದು ಹೇಳುವುದು ಕಷ್ಟವಾದರೂ ಹೀಗೆ ಆಗಲು ಸಾಧ್ಯವಿಲ್ಲ ಎಂದು ಹೇಳುವುದೂ ಕಷ್ಟವೇ.

ಕುಟುಂಬ ಕಲಹಗಳು
ತೇಜಸ್ವಿ ಯಾದವ್ ಅವರ ಸ್ವಂತ ಕುಟುಂಬದಲ್ಲಿಯೂ ರಾಜಕೀಯ ನಾಟಕದ ಪರದೆ ತೆರೆದುಕೊಳ್ಳಬಹುದು. ಅವರ ಅಣ್ಣ ತೇಜ್ ಪ್ರತಾಪ ಯಾದವ್ ಮತ್ತು ಸಹೋದರಿ ರೋಹಿಣಿ ಆಚಾರ್ಯ ಅವರು ಸಂಭಾವ್ಯ ತೊಡಕಾಗಬಹುದು. ಅವರ ಮಹತ್ವಾಕಾಂಕ್ಷೆಗಳು ಮತ್ತು ಅಸಮಾಧಾನಗಳು ಅನೇಕ ಬಾರಿ ಪ್ರಕಟವಾಗಿವೆ. ಸಾಮಾನ್ಯವಾಗಿ ಒಗ್ಗಟ್ಟಿನ ಶಕ್ತಿಯ ಮೂಲವಾಗಿದ್ದ ಕೌಟುಂಬಿಕ ಬಂಧದಲ್ಲಿ ಸಂಭಾವ್ಯ ಬಿರುಕುಗಳು ಕಾಣಿಸಿಕೊಳ್ಳಬಹುದು. ರಾಜಕೀಯ ಭೂದೃಶ್ಯದಲ್ಲಿ ಗ್ರಹಿಕೆಯು ವಾಸ್ತವದಷ್ಟೇ ಮುಖ್ಯವಾಗಿರುವಾಗ, ಯಾದವ್ ಕುಟುಂಬದೊಳಗಿನ ಭಿನ್ನಾಭಿಪ್ರಾಯದ ಪಿಸುಮಾತುಗಳು ನಿರ್ಣಾಯಕ ಹಂತದಲ್ಲಿ ತೇಜಸ್ವಿ ಯಾದವ್ ಅವರ ನಾಯಕತ್ವದ ವಿರುದ್ಧ ದೊಡ್ಡಧ್ವನಿಯಾಗಿ ಮಾರ್ಪಟ್ಟು ಹಾನಿಕಾರಕವಾಗಬಹುದು. ಅವರ ಹಿರಿಯ ಸಹೋದರಿ ಡಾ. ಮಿಸಾ ಭಾರತಿ ಪಾಟಲಿಪುತ್ರದಿಂದ (ರಾಜ್ಯ ರಾಜಧಾನಿ ಪಟ್ನಾ ಪಕ್ಕದಲ್ಲಿದೆ) ಸಂಸದರಾಗಿದ್ದಾರೆ ಮತ್ತು ಕೊನೆಯದಾಗಿ 2024 ರಲ್ಲಿ ಗೆದ್ದಿದ್ದಾರೆ. ಅವರು ಸಹ ಬಹಳ ಮಹತ್ವಾಕಾಂಕ್ಷೆಯುಳ್ಳವರಾಗಿದ್ದು, ಇದು ಭವಿಷ್ಯದಲ್ಲಿ ತಮ್ಮ ತಮ್ಮನಿಗೆ ಸವಾಲಾಗಬಹುದು.

ಕಾಂಗ್ರೆಸ್ ಪಕ್ಷದ ಗೊಂದಲ
ತೇಜಸ್ವಿ ಯಾದವ್‌ ಅವರಿಗೆ ವಿಷಯಗಳನ್ನು ಇನ್ನಷ್ಟು ಜಟಿಲಗೊಳಿಸುವುದು ಕಾಂಗ್ರೆಸ್ ಪಕ್ಷದ ನಿಲುವು, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಅವರನ್ನು ಅನುಮೋದಿಸಲು ಕಾಂಗ್ರೆಸ್‌ ಹಿಂಜರಿಯುತ್ತಿದೆ. ಈ ಅನಿಶ್ಚಿತತೆಯು ಮಹಾಘಟಬಂಧನದ ಶ್ರೇಣಿಗಳಲ್ಲಿ ಪ್ರತಿಧ್ವನಿಸುತ್ತದೆ, ಕಾಂಗ್ರೆಸ್‌ ಬೆಂಬಲಿಗರಲ್ಲಿ ಅನಿಶ್ಚಿತತೆಯ ಬೀಜಗಳನ್ನು ಬಿತ್ತುತ್ತದೆ. ಐಕಾಂಗ್ರೆಸ್‌ನ ಹಿಂಜರಿಕೆ ಕೇವಲ ಒಂದು ಕಾರ್ಯತಂತ್ರದ ಭಾಗವಾಗಿ ಮಾತ್ರವಲ್ಲದೆ, ನಂಬಿಕೆಯ ಕೊರತೆಯಾಗಿಯೂ ಅರ್ಥೈಸಬಹುದು, ಇದು ತೇಜಸ್ವಿ ಯಾದವ್ ಅವರ ವಿಶ್ವಾಸಾರ್ಹತೆಗೆ ಧಕ್ಕೆ ತರಬಹುದು.
ಸೀಟು ಹಂಚಿಕೆಯ ಸವಾಲು
ನಾವು ಸೀಟು ಹಂಚಿಕೆಯಂತಹ ಸೂಕ್ಷ್ಮ ವಿಚಾರ ತೆಗೆದುಕೊಂಡರೆ ಅಲ್ಲಿ ದೀಪಂಕರ್ ಭಟ್ಟಾಚಾರ್ಯ ನೇತೃತ್ವದ ಸಿಪಿಐ-ಎಂಎಲ್, ಜೆಎಂಎಂ ಮತ್ತು ವಿಐಪಿ ಪಕ್ಷದ ಮುಖೇಶ ಸಹಾನಿ ಅವರಂತಹ ಮಿತ್ರಪಕ್ಷಗಳು ಹೆಚ್ಚು ಸ್ಥಾನಗಳಿಗೆ ಬಾರ್ಗೇನ್‌ ಮಾಡಬಹುದು. ಪ್ರತಿಯೊಂದು ಪಕ್ಷವು ತನ್ನ ಸೀಟು ಹೆಚ್ಚಿಸಲು ಪ್ರಯತ್ನಿಸುತ್ತದೆ, ಆದರೆ ಈ ಕೋಲಾಹಲವು ಚುನಾವಣಾ ಯಶಸ್ಸಿಗೆ ಅಗತ್ಯವಾದ ಒಗ್ಗಟ್ಟಿನ ಸಂದೇಶಕ್ಕೆ ಮುಳುವಾಗಬಹುದು. ಅವರು ಸ್ಥಾನಕ್ಕಾಗಿ ಹೆಚ್ಚು ಪೈಪೋಟಿ ನಡೆಸಿದಷ್ಟೂ, ಒಕ್ಕೂಟವು ಹೆಚ್ಚು ವಿಭಜಿತವಾಗುತ್ತದೆ, ಹೆಚ್ಚು ದುರ್ಬಲಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಸ್ಪರ್ಧಾತ್ಮಕ ಹಿತಾಸಕ್ತಿಗಳ ಗದ್ದಲದ ನಡುವೆ ಒಗ್ಗಟ್ಟು ಸಾಧಿಸುವುದು ತೇಜಸ್ವಿ ಯಾದವ್‌ ಅವರ ಮುಂದಿರುವ ಮತ್ತೊಂದು ಸವಾಲು.

ಎಂ-ವೈ ಅಂಶದ ಅಡಚಣೆ
ಈ ಸವಾಲುಗಳ ಜಟಿಲದಲ್ಲಿ, ಅತ್ಯಂತ ಮಹತ್ವವಾದದ್ದು ಎಂ-ವೈ ಅಂಶ ಆಗಬಹುದು. ಮುಸ್ಲಿಂ-ಯಾದವ್ ಮೈತ್ರಿಯು ದೀರ್ಘಕಾಲದಿಂದ ತೇಜಸ್ವಿ ಯಾದವ್ ಅವರ ರಾಜಕೀಯ ಅಸ್ಮಿತೆಯ ಮೂಲಾಧಾರವಾಗಿದೆ. ಆದರೆ ಮತ್ತೊಂದೆಡೆ ಇದು ಅವರ ತಂದೆ ಲಾಲು ಪ್ರಸಾದ ಯಾದವ್‌ ಅವರು ನಿಗದಿಪಡಿಸಿದ ಚೌಕಟ್ಟಿನಲ್ಲಿ ಅವರನ್ನು ಸೀಮಿತಗೊಳಿಸುತ್ತದೆ. ಈ ಪರಂಪರೆ ಮೀರಿ ಇನ್ನೂ ವಿಸೃತವಾಗಿ ಮತದಾರರನ್ನು ಆಕರ್ಷಿಸಲು, ಅವರು ಸಂಪ್ರದಾಯ ಮತ್ತು ನಾವೀನ್ಯತೆಯ ಸೂಕ್ಷ್ಮ ಸಮತೋಲನವನ್ನು ಸಾಧಿಸಬೇಕಾಗಿದೆ. ವಿಜಯದ ಹಾದಿಯು ಬಾಹ್ಯ ಮತ್ತು ಆಂತರಿಕ ಎರಡೂ ಅಡೆತಡೆಗಳಿಂದ ಕೂಡಿದೆ, ಮತ್ತು ಮುಂದಿನ ಚುನಾವಣಾ ಪ್ರಯಾಣ ಕೇವಲ ತಂತ್ರಗಾರಿಕೆ ಮಾತ್ರವಲ್ಲ, ನುರಿತ ಆತ್ಮವಿಶ್ವಾಸದ್ದೂ ಆಗಿರಬೇಕು. ಅಂದರೆ ಮುಸ್ಲಿಂ-ಯಾದವ್ ಮತ ಬ್ಯಾಂಕ್‌ ಗೆ ಧಕ್ಕೆಯಾಗದಂತೆ ಅದನ್ನು ಮೀರಿ ಮತದಾರರತ್ತ ಹೋಗಬೇಕಾಗಿದೆ. ಮೀರಿದರೆ ತಮ್ಮ ಪ್ರಾಬಲ್ಯ ಕಡಿಮೆಯಾಗಬಹುದು ಎಂಬ ಭಯ ಈ ಮುಸ್ಲಿಂ ಮತಬ್ಯಾಂಕಿಗೆ ಅನ್ನಿಸಬಹುದು, ಹೋಗದಿದ್ದರೆ ಎನ್‌ಡಿಎ ಪಡೆಯುವ ಮತಗಳನ್ನು ಮೀರಿ ಮತ ಪಡೆಯುವುದು ಕಷ್ಟವಾಗಬಹುದು. ಹೀಗಾಗಿ ಇಲ್ಲಿ ಸೂಕ್ಷ್ಮ ಹಾಗೂ ಸಮತೋಲಿತ ಪ್ರಬುದ್ಧತೆ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಇದುವೇ ದೊಡ್ಡ ಸವಾಲಾಗಿ ಪರಿಣಮಿಸಬಹುದು.
ಬಿಹಾರ ರಾಜಕೀಯದ ಮಹಾ ಅಖಾಡದಲ್ಲಿ, ಪ್ರತಿಯೊಂದು ಎಳೆಯೂ – ಅದು ಪ್ರತಿಸ್ಪರ್ಧಿಗಳ ಮಹತ್ವಾಕಾಂಕ್ಷೆಗಳಾಗಿರಲಿ, ಕೌಟುಂಬಿಕ ಭಿನ್ನಾಭಿಪ್ರಾಯವಾಗಿರಲಿ ಅಥವಾ ಒಕ್ಕೂಟದ ಡೈನಾಮಿಕ್ಸ್ ಆಗಿರಲಿ – 2025ರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. 2020 ರಲ್ಲಿ, ತೇಜಸ್ವಿ ಯಾದವ್ ಅವರ ಮಹಾಮೈತ್ರಿಕೂಟವು ಕೇವಲ ಸಣ್ಣ (ಶೇ. 0.03) ಅಂತರದಿಂದ ಎನ್‌ಡಿಎ ವಿರುದ್ಧ ಸೋತಿತ್ತು. ಹೀಗಾಗಿ ಚುನಾವಣೆಯಲ್ಲಿ ಪ್ರತಿಯೊಂದು ಅಂಶವೂ ಮುಖ್ಯವಾಗುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ