LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಾಯಿಗೆ ಸಮಾದಿ ನಿರ್ಮಿಸಿದ ಕುಟುಂಬ - ನಡೆಯುತ್ತೆ ನಿತ್ಯ ಪೂಜೆ!

ಚಿತ್ತೂರು : ನಾಯಿ ಎಂದರೆ ನಿಷ್ಠೆಯ ಮತ್ತೊಂದು ಹೆಸರು. ಒಂದು ತುತ್ತು ಊಟ ಕೊಟ್ಟರೂ ಸಾಕು, ಜೀವ ಇರುವವರೆಗೂ ತನ್ನ ಮಾಲೀಕರನ್ನು ಕಾಯುವ ಪ್ರಾಣಿ ಅದು. ಅಪಾಯ ಎದುರಾದಾಗ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಾಲೀಕರನ್ನು ರಕ್ಷಿಸುವ ನಾಯಿ, ಕುಟುಂಬದ ಸದಸ್ಯನಂತೆಯೇ ಆಗಿಬಿಡುತ್ತದೆ. ಇಂತಹ ನಿಷ್ಠೆಯ ಸಂಕೇತವಾಗಿ ಚಿತ್ತೂರು ಜಿಲ್ಲೆಯ ವೈದ್ಯರ ಕುಟುಂಬವೊಂದು ತಮ್ಮ ನಾಯಿಯ ಸಾವಿನ ನಂತರ ಅದಕ್ಕೆ ಭವ್ಯ ಸಮಾಧಿ ನಿರ್ಮಿಸಿ ಪೂಜೆ ಸಲ್ಲಿಸುತ್ತಿದೆ.

ಚಿತ್ತೂರಿನ ಡಾ. ಸುದರ್ಶನ್ ಹಾಗೂ ಗಾಯತ್ರಿ ದೇವಿ ದಂಪತಿ ಸುಮಾರು 9 ವರ್ಷಗಳ ಹಿಂದೆ ತಮ್ಮ ಮನೆಗೆ ರೊಟ್‌ವೀಲರ್ ತಳಿಯ ನಾಯಿಯನ್ನು ತಂದಿದ್ದರು. ಅದಕ್ಕೆ ಅವರು ಪ್ರೀತಿಯಿಂದ ‘ಬಾಕ್ಸಿ’ ಎಂದು ಹೆಸರಿಟ್ಟಿದ್ದರು. ಚಿಕ್ಕ ವಯಸ್ಸಿನಿಂದಲೇ ಮನೆಯವರೇ ಬೆಳೆಸಿದ್ದರಿಂದ ಬಾಕ್ಸಿ ಕೇವಲ ಸಾಕು ಪ್ರಾಣಿಯಾಗಿರದೆ, ಮನೆಯೊಬ್ಬ ಸದಸ್ಯನಾಗಿತ್ತು.

ಬಾಕ್ಸಿ ಮನೆಯ ಭದ್ರತೆಯಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ಮನೆಯಲ್ಲಿ ಎರಡು ಬಾರಿ ಕಳ್ಳತನ ನಡೆದಾಗ, ಕಳ್ಳರನ್ನು ಹಿಡಿಯಲು ಬಾಕ್ಸಿಯೇ ಸಹಾಯ ಮಾಡಿತ್ತು. ಇದರಿಂದಾಗಿ ಮನೆಯವರಲ್ಲಿ ಅದು ಇನ್ನಷ್ಟು ಪ್ರೀತಿ ಮತ್ತು ಗೌರವವನ್ನು ಗಳಿಸಿತ್ತು.

ಇತ್ತೀಚೆಗೆ ಬಾಕ್ಸಿ ತೀವ್ರ ಅನಾರೋಗ್ಯಕ್ಕೆ ಒಳಗಾಯಿತು. ಕುಟುಂಬದವರು ಅದನ್ನು ಉಳಿಸಲು ಪ್ರಯತ್ನಿಸಿದರು. ಚಿತ್ತೂರು ಮಾತ್ರವಲ್ಲದೆ, ಚೆನ್ನೈ ಮತ್ತು ಬೆಂಗಳೂರಿನ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಇದಕ್ಕಾಗಿ ಸುಮಾರು 7 ಲಕ್ಷ ರೂಪಾಯಿ ವೆಚ್ಚ ಮಾಡಲಾಯಿತು. ಆದರೆ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು, ನವೆಂಬರ್ 11 ರಂದು ಚಿಕಿತ್ಸೆ ಪಡೆಯುತ್ತಿದ್ದಾಗ ಬಾಕ್ಸಿ ಕೊನೆಯುಸಿರೆಳೆದಿತು.

ಬಾಕ್ಸಿಯ ಸಾವು ಕುಟುಂಬದವರಿಗೆ ಅತೀವ ದುಃಖ ತಂದೊಡ್ಡಿತು. ಅದರ ನೆನಪಿಗಾಗಿ, ನಾಯಿಗೆ ಸಾಂಪ್ರದಾಯಿಕ ಅಂತ್ಯಕ್ರಿಯೆ ನೆರವೇರಿಸಿ, ಭಾರಿ ವೆಚ್ಚದಲ್ಲಿ ಸಮಾಧಿಯನ್ನು ನಿರ್ಮಿಸಿದರು. ಸಮಾಧಿಯ ಮೇಲ್ಭಾಗದಲ್ಲಿ ಬಾಕ್ಸಿಯ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಇಂದಿಗೂ ಕುಟುಂಬದವರು ಪ್ರತಿದಿನ ಸಮಾಧಿಗೆ ತೆರಳಿ, ಬಾಕ್ಸಿಯನ್ನು ಸ್ಮರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಘಟನೆ, ನಾಯಿ ಮತ್ತು ಮಾನವನ ನಡುವಿನ ನಿಷ್ಠೆ ಹಾಗೂ ಭಾವನಾತ್ಮಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026