LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ವಜನಾಂಗದ ಶಾಂತಿಯ ತೋಟ

ಭಾರತ ಸರ್ವಜನಾಂಗದ ಶಾಂತಿಯ ತೋಟ
ಸರ್ವಧರ್ಮಗಳ ಸಮನ್ವಯದ ಸ್ನೇಹದ ಕೂಟ;
ಜಾತಿ ಧರ್ಮಗಳು ಹಲವಿದ್ದರೂ ಭಾವೈಕ್ಯತೆಯೊಂದೆ
ಭಾಷೆಗಳು ಬೇರೆಯಾದರು ನುಡಿವ ನಾಲಿಗೆಯೊಂದೆ..!!

ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ದರೆಲ್ಲರೂ ಒಂದೇ
ರಾಮಾಯಣ ಮಹಾಭಾರತ ಕುರಾನ್ ಮಂತ್ರವೊಂದೆ;
ಹುತ್ತಿ ಬಿತ್ತುವ ಬೆಳೆಗೆ ಮಳೆಯ ಹನಿಯೊಂದೆ
ಹಗಲು ರಾತ್ರಿ ಬೆಳಕು ನೀಡೋ ಸೂರ್ಯಚಂದ್ರರೊಂದೆ...!!

ಉಸಿರಾಡುವ ಗಾಳಿ ತಿನ್ನುವ ಅನ್ನವೊಂದೆ
ಮಡಿಮೈಲಿಗೆಯಾದರೆ ಸ್ವಚ್ಛಗೊಳಿಸೋ ಗಂಗೆಯೊಂದೆ;
ಸ್ನೇಹ ಪ್ರೀತಿಯ ಬೆಸೆಯುವ ಮನದ ಭಾವವೊಂದೆ
ಕಷ್ಟಕಾಲದಿ ಸಹಾಯಹಸ್ತ ಚಾಚುವ ಭಾರತ ನಾಡೊಂದೆ...!!

ಸರ್ವ ಜನರಿಗೂ ನ್ಯಾಯ ನೀಡುವ ಸಂವಿಧಾನವೊಂದೆ
ಭಾರತಾಂಬೆಗೆ ಕೀರಿಟಪ್ರಾಯ ತ್ರಿವರ್ಣ ಧ್ವಜವೊಂದೆ;
ಸರ್ವಧರ್ಮಗಳು ಬೋಧಿಸುವ ನೀತಿಯ ಪಾಠವೊಂದೆ
ಎಲ್ಲರ ಸಂಪ್ರದಾಯಗಳಿಗೂ ಬೆಲೆನೀಡುವ ಪೂಣ್ಯಭೂಮಿಯೊಂದೆ....!!!

ಹಬ್ಬಗಳು ಬೇರೆಯಾದರು ಶುಭಕೋರುವ ಮನಗಳೊಂದೆ
ಅತಿಥಿ ಸತ್ಕಾರದ ಸಂಸ್ಕೃತಿ ಜಗತ್ತಿಗೆಲ್ಲ ಮಾದರಿಯೊಂದೆ;
ಸಾವುನೋವಿಗೆ ಮನಮೀಡಿವ ಹೃದಯಗಳ ನೋವೊಂದೆ
ಸತ್ಯಧರ್ಮವ ಪರಿಪಾಲಿಸುವ ಮೌಲ್ಯದ ಜನರೊಂದೆ....!!

ದೃಷ್ಟತನವ ಖಂಡಿಸುವ ದಿಟ್ಟತನದ ಮನಗಳೊಂದೆ
ತಾಯ್ನೆಲದ ವಿರೋಧಿಗಳ ಹುಟ್ಟಡಗಿಸುವ ಯೋಧರೊಂದೆ;
ಸಹಬಾಳ್ವೆಯ ಸಮನ್ವಯದ ಕ್ರಾಂತಿಮಾಡಿದ ಬಸವಣ್ಣನ ನಾಡೊಂದೆ;
ಸರ್ವರಿಗೂ ಸಮಾನತೆ ಸ್ವಾತಂತ್ರ್ಯ ನೀಡಿದ
ಭಾರತ ನೆಲವೊಂದೆ..!!!!

✍️ಕಾಡಜ್ಜಿ ಮಂಜುನಾಥ,

ಹರಪನಹಳ್ಳಿ ವಿಜಯನಗರ ಜಿಲ್ಲೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು