Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಲಕ್ಕುಂಡಿಯಲ್ಲಿ ಅಪರೂಪದ ನಾಗಶಿಲೆ ಪತ್ತೆ

ಚಂದ್ರವಳ್ಳಿ ನ್ಯೂಸ್, ಗದಗ:
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಅಪರೂಪದ ನಾಗಶಿಲೆ ಪತ್ತೆಯಾಗಿದೆ.


ಪುರಾತತ್ವ ತಜ್ಞರು ಹಾಗೂ ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದಕ್ಕೂ ಎರಡು ದಿನಗಳ ಹಿಂದಷ್ಟೇ ನಾಗಮಣಿ ಇರುವ ನಾಗರ ಕಲ್ಲೊಂದು ಪತ್ತೆಯಾಗಿತ್ತು. ಈಗ ನಾಗರ ಹಾವಿನ ಚಿತ್ರವಿರುವ ಹಸಿರು ಬಣ್ಣದ ಶಿಲೆ ಪತ್ತೆಯಾಗಿರುವುದು ಉತ್ಖನನದ ಮಹತ್ವ ಹೆಚ್ಚಿಸಿದೆ.


ನಾಗರ ಶಿಲೆ-
ಉತ್ಖನನ ಸ್ಥಳದಲ್ಲಿ ಪತ್ತೆಯಾದ ಶಿಲೆಯ ಮೇಲೆ ಹೆಡೆ ಎತ್ತಿ ನಿಂತಿರುವ ನಾಗರ ಹಾವಿನ ಸುಂದರ ಹಾಗೂ ಸ್ಪಷ್ಟ ಕೆತ್ತನೆ ಕಂಡುಬಂದಿದೆ.
ಹಸಿರು ಬಣ್ಣದ ಶಿಲೆಯಲ್ಲಿ ಮಾಡಿರುವ ಈ ಶಿಲ್ಪವು ನೈಜವಾಗಿ ಜೀವಂತ ನಾಗರ ಹಾವಿನ ರೂಪದಂತಿದೆ. ಶಿಲ್ಪಕಲೆಯ ಉನ್ನತ ಮಟ್ಟವನ್ನು ತೋರಿಸುತ್ತದೆ.


ಎರಡನೇ ನಾಗಶಿಲೆ-
ಉತ್ಖನನದ ವೇಳೆ ಹಲವು ಮಹತ್ವದ ಶಿಲೆಗಳು ಲಭ್ಯವಾಗುತ್ತಿದ್ದು ಕಳೆದ ಎರಡು ದಿನಗಳ ಹಿಂದೆ
ನಾಗಮಣಿ ಇರುವ ಕಲ್ಲೊಂದು ಇದೇ ಉತ್ಖನನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈಗ ಎರಡನೇ ನಾಗಶಿಲೆ ಸಿಕ್ಕಿರುವುದು, ಲಕ್ಕುಂಡಿ ಪ್ರದೇಶದಲ್ಲಿ ನಾಗಾರಾಧನೆಯ ಪರಂಪರೆ ಬಲವಾಗಿದ್ದಿರಬಹುದು ಎಂಬ ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದೆ.
ಇದರಿಂದಾಗಿ ಲಕ್ಕುಂಡಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ. ಈ ಶಿಲೆಯ ಹಿನ್ನೆಲೆ
, ಅದರ ಉಪಯೋಗ ಹಾಗೂ ಕಾಲಘಟ್ಟದ ಕುರಿತು ವಿವಿಧ ಚರ್ಚೆಗಳು ನಡೆಯುತ್ತಿವೆ. ನಾಗಾರಾಧನೆ, ಭೂಸಂಸ್ಕಾರ ಅಥವಾ ಧಾರ್ಮಿಕ ಸಂಕೇತವಾಗಿ ಇದನ್ನು ಬಳಸಲಾಗುತ್ತಿದ್ದು ಸ್ಪಷ್ಟವಾಗಿದೆ.

ಮಣ್ಣಿನ ಬಿಲ್ಲೆ ಪತ್ತೆ-
ಉತ್ಖನನ ಪ್ರದೇಶದಲ್ಲೇ ನಾಗಶಿಲೆಯ ಜೊತೆಗೆ
ಸುಟ್ಟ ಮಣ್ಣಿನಿಂದ ಸಿದ್ಧವಾಗಿರುವ ಒಂದು ಬಿಲ್ಲೆಯೂ ಪತ್ತೆಯಾಗಿದೆ. ಈ ಬಿಲ್ಲೆ ಎರಡು ರೂಪಾಯಿ ನಾಣ್ಯದ ಗಾತ್ರಕ್ಕೆ ಸಮಾನವಾಗಿದ್ದು, ವೃತ್ತಾಕಾರದ ಆಕಾರದಲ್ಲಿದೆ. ಈ ಮಣ್ಣಿನ ಬಿಲ್ಲೆ ಯಾವ ಕಾಲದದ್ದು? ಇದನ್ನು ಆಟದ ಬಿಲ್ಲೆಯಾಗಿ ಬಳಸಲಾಗಿತ್ತೋ ಅಥವಾ ವಾಣಿಜ್ಯ, ಲೆಕ್ಕಪತ್ರ ಅಥವಾ ಧಾರ್ಮಿಕ ಉದ್ದೇಶಕ್ಕಾಗಿ ಉಪಯೋಗಿಸಲಾಗಿತ್ತೋ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಅಧ್ಯಯನ ಅಗತ್ಯ-
ಪುರಾತತ್ವ ಇಲಾಖೆಯ ತಜ್ಞರ ಅಭಿಪ್ರಾಯದಂತೆ
, ಪತ್ತೆಯಾದ ನಾಗಶಿಲೆ ಮತ್ತು ಮಣ್ಣಿನ ಬಿಲ್ಲೆಗಳ ಸಮಗ್ರ ಅಧ್ಯಯನ ನಡೆಯಬೇಕಿದೆ. ವೈಜ್ಞಾನಿಕ ಪರೀಕ್ಷೆ ಮತ್ತು ಶಿಲ್ಪಶಾಸ್ತ್ರೀಯ ವಿಶ್ಲೇಷಣೆಯಿಂದ ಮಾತ್ರ ಅವುಗಳ ಕಾಲಘಟ್ಟ ಹಾಗೂ ಬಳಕೆಯ ಉದ್ದೇಶ ಸ್ಪಷ್ಟವಾಗಲಿದೆ. ಲಕ್ಕುಂಡಿಯ ಉತ್ಖನನ ಮುಂದುವರಿದಂತೆ ಮತ್ತಷ್ಟು ಅಪರೂಪದ ಅವಶೇಷಗಳು ಪತ್ತೆಯಾಗುವ ಭರವಸೆ ಇದೆ.

ಹೊಸ ಸೇರ್ಪಡೆ-
ಲಕ್ಕುಂಡಿ ಉತ್ಖನನ ಪ್ರದೇಶದಲ್ಲಿ ಪತ್ತೆಯಾಗುತ್ತಿರುವ ನಾಗಶಿಲೆಗಳು ಮತ್ತು ಮಣ್ಣಿನ ಬಿಲ್ಲೆಗಳು ಈ ಪ್ರದೇಶದ ಶ್ರೀಮಂತ ಇತಿಹಾಸ
, ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ವೈಭವಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿವೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ