Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಕಲ ಮರಾಠಾ ಸಮಾಜದಿಂದ ಕ್ರೀಡಾಪಟುಗಳಿಗೆ ಸಾಧಕರಿಗೆ ಸನ್ಮಾನ

ಬೆಳಗಾವಿ : ಸಕಲ ಮರಾಠಾ ಸಮಾಜ ಬೆಳಗಾವಿ ವತಿಯಿಂದ ಕ್ರೀಡೆ, ರಾಜಕೀಯ, ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮರಾಠಾ ಸಮುದಾಯದ ಪ್ರತಿಭೆಗಳಿಗೆ ಸಕಲ ಮರಾಠಾ ಸಮಾಜದ ವತಿಯಿಂದ ಸನ್ಮಾನ ಮಾಡುತ್ತಿದ್ದು, ಬರುವ ದಿನಗಳಲ್ಲಿಯೂ ಸಾಧಕರ ಪ್ರತಿಭೆಗೆ ನಮ್ಮ ಪ್ರೋತ್ಸಾಹ ಇದ್ದೆ ಇರುತ್ತದೆ ಎಂದು ಬಿಜೆಪಿ ಧುರೀಣ ಹಾಗೂ ಸಕಲ ಮರಾಠಾ ಸಮಾಜದ ನಾಯಕ ಕಿರಣ ಜಾಧವ ಹೇಳಿದರು.

ರವಿವಾರ ನಗರದ ಜತ್ತಿ ಮಠದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮರಾಠಾ ಸಮುದಾಯದಲ್ಲಿ ಹಲವಾರು ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ, ಅಂತಹ ಮರಾಠಾ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ನಮ್ಮ ಸಕಲ ಮರಾಠಾ ಸಮಾಜದ ಕರ್ತವ್ಯವಾಗಿದೆ, ಆದ ಕಾರಣ ಇಂದು ಸಮುದಾಯದ ಕೆಲ ಸಾಧಕರಿಗೆ ಸನ್ಮಾನ ನಡೆಯುತ್ತಿದೆ ಎಂದು ಹೇಳಿದರು.

ಸಕಲ ಮರಾಠಾ ಸಮಾಜದಿಂದ ಬೆಳಗಾವಿಯಲ್ಲಿ ಪ್ರತ್ಯೇಕವಾದ ಕ್ರೀಡಾ ವಿಭಾಗವನ್ನು ರಚಿಸಿದ್ದೇವೆ, ಈ ಹಿಂದೆ ಮರಾಠಾ ಸಮುದಾಯದ ಏಳಿಗೆಗಾಗಿ ಹಲವಾರು ಕಾರ್ಯಗಳನ್ನು ನಮ್ಮ ಸಮಾಜ ಮಾಡುತ್ತಾ ಬಂದಿದ್ದು, ಈಗ ಕ್ರೀಡಾ ಸಾಧಕರಿಗೆ ಒಂದು ಒಳ್ಳೆಯ ವೇದಿಕೆ ಕಲ್ಪಿಸಿ ಕೊಡಲಾಗುತ್ತದೆ. ಅದರ ಜೊತೆಗೆ ಬರುವ ದಿನಗಳಲ್ಲಿ ಕರ್ನಾಟಕ, ದೇಶದಲ್ಲಿ ಬೆಳಗಾವಿಯ ಹೆಸರು ಬೆಳಗಿಸಲಿ, ಈಗಾಗಲೇ ಕೆಲ ಪ್ರತಿಭೆಗಳು ಆ ಸಾಧನೆ ಮಾಡಿದ್ದಾರೆ. ಅವರಿಗೆ ನಮ್ಮ ಅಭಿನಂದನೆ ಎಂದರು.



ಮರಾಠಾ ಸಮುದಾಯದ ಕೆಲ ಕ್ರೀಡಾ ಪಟುಗಳಿಗೆ ಹಾಗೂ ಬೇರೆ ಕ್ಷೇತ್ರಗಳ ಸಾಧಕರು ಪರಿಶ್ರಮದಿಂದ ತಮ್ಮ ಕಾರ್ಯ ಮಾಡುತ್ತಾರೆ, ಆದರೆ ಅವರ ಪರಿಶ್ರಮಕ್ಕೆ ಆರ್ಥಿಕ ಅನುಕೂಲವೂ ಬೇಕಾಗಿರುತ್ತದೆ, ಅದಕ್ಕಾಗಿ ನಾನು ನಮ್ಮ ಸಮಾಜಕ್ಕೆ ಮನವಿ ಮಾಡುವೆ. ಬರುವ ದಿನಗಳಲ್ಲಿ ಕ್ರೀಡಾ ಹಾಗೂ ಇತರ ಸಾಧಕರಿಗೆ ನಮ್ಮ ಸಕಲ ಮರಾಠಾ ಸಮಾಜದ ಕ್ರೀಡಾ ಕಮಿಟಿಯಿಂದ ಆದಷ್ಟು ಅನುಕೂಲ ಮಾಡಿಕೊಡೋಣ ಎಂದರು.

ಇಂದು ನಮ್ಮ ಸಕಲ ಮರಾಠಾ ಸಮಾಜದಲ್ಲಿ ಪ್ರತ್ಯೇಕ ಕ್ರೀಡಾ ವಿಭಾಗವನ್ನು ನಿರ್ಮಿಸಿ, ಅದರಿಂದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ನಮ್ಮ ಸಮುದಾಯದ ಸಾಧಕರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಡೋಣ ಎಂದು ಹೇಳಿದರು.

ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ದಸರಾ ಕಂಠೀರವ ಕೇಸರಿ ವಿಜೇತ ತನಿಷ್ ಪಾಟೀಲ, ಕಾಡಾ ಅಧ್ಯಕ್ಷರಾಗಿ ಆಯ್ಕೆ ಆದ ಯುವರಾಜ ಕದಂ, ಪೊಲೀಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಶ್ರುತಿ ಪಾಟೀಲ, ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಗೋಲ್ಡ್ ಮೆಡಲ್ ಪಡೆದ ಪ್ರೇಮ್ ಜಾಧವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಇತರ ಸಾಧಕರಿಗೆ ಸಕಲ ಮರಾಠಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಕಿರಣ ಜಾಧವ, ಅಮರ್ ಯಳ್ಳೂರಕರ, ಪ್ರಕಾಶ ಬಿಳಗೊಜಿ, ಸುನಿಲ್ ಜಾಧವ, ರೇಷ್ಮಾ ಪಾಟೀಲ, ಪ್ರವೀಣ ಪಾಟೀಲ, ಮಾಧುರಿ ಜಾಧವ, ಶರದ ಪಾಟೀಲ, ನಿಖಿಲ್ ಮುರಕುಟೆ, ಪ್ರಶಾಂತ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ