Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹೊಸ ಇತಿಹಾಸ ಸೃಷ್ಟಿಸಿದ ಬೆಳಗಾವಿ ಗಣೇಶೋತ್ಸವ..!

ಜನ ಜೀವಾಳ ಜಾಲ: ಬೆಳಗಾವಿ :ಈ ಸಲದ ಬೆಳಗಾವಿ ಸಾರ್ವಜನಿಕ ಗಣೇಶೋತ್ಸವ ಹೊಸ ಇತಿಹಾಸ ಬರೆದಿದೆ. ಸತತ 30 ಗಂಟೆಗಳ ಕಾಲ ಗಣೇಶ ವಿಸರ್ಜನೆ ನಡೆಯುವ ಮೂಲಕ ಬೆಳಗಾವಿ ಮಹಾನಗರದ ಗಣೇಶೋತ್ಸವ ಈ ಬಾರಿ ಹೊಸ ದಾಖಲೆ ಮೆರೆದಿದೆ.

ಅನಂತ ಚತುರ್ದಶಿ ದಿನವಾದ ಗುರುವಾರ ಸಂಜೆ 4 ರಿಂದ ಆರಂಭವಾದ ಗಣೇಶ ಮೂರ್ತಿಗಳ ಮೆರವಣಿಗೆ ಶುಕ್ರವಾರ ರಾತ್ರಿ 11:00 ಗಂಟೆಗೆ ಅದ್ದೂರಿ ವಿಸರ್ಜನೆ ಯೊಂದಿಗೆ ಸಮಾರೋಪಗೊಂಡಿದೆ. ಒಟ್ಟಾರೆ ಬೆಳಗಾವಿಯ ಗಣೇಶೋತ್ಸವ ಈ ಬಾರಿ ದಾಖಲೆಯ ಅವಧಿವರೆಗೂ ನಡೆದು ಸಂಚಲನಕ್ಕೆ ಕಾರಣವಾಗಿದೆ.

ಕಳೆದ 11 ದಿನಗಳಿಂದ ಆಕರ್ಷಣೆಗೆ ಕಾರಣವಾಗಿದ್ದ ಬೆಳಗಾವಿ ಸಾರ್ವಜನಿಕ ಗಣೇಶೋತ್ಸವಕ್ಕೆ ಶುಕ್ರವಾರ ರಾತ್ರಿ ಕೊನೆಗೂ ವಿಧ್ಯುಕ್ತವಾಗಿ ತೆರೆ ಬಿದ್ದಿದೆ. ಅದರಲ್ಲೂ ಗುರುವಾರ ಹಾಗೂ ಶುಕ್ರವಾರ ಗಣೇಶ ವಿಸರ್ಜನೆಯ ಸುಂದರ ನೋಟವನ್ನು ಲಕ್ಷಾಂತರ ಜನ ವೀಕ್ಷಿಸಿದರು. ಕಪಿಲೇಶ್ವರ ಸೇರಿದಂತೆ ವಿವಿಧ ಗಣೇಶ ವಿಸರ್ಜನೆ ತಾಣಗಳಲ್ಲಿ ಭಕ್ತರ ದಂಡೇ ನೆರೆದಿತ್ತು. ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧ ವಾಹಿನಿಗಳು ನೀಡಿದ ನೇರ ದೃಶ್ಯ, ವಿವರಣೆಯನ್ನು ಬೆಳಗಾವಿ ಮಾತ್ರವಲ್ಲ, ನೆರೆಹೊರೆಯ ರಾಜ್ಯಗಳು ಹಾಗೂ ಹೊರದೇಶಗಳ ಜನತೆ ಸಹ ವೀಕ್ಷಿಸಿ ಆನಂದ ತುಂದಿಲಗೊಂಡರು.

ಗಣೇಶ ಮೆರವಣಿಗೆಯ ಸುಂದರ ನೋಟವನ್ನು ವೀಕ್ಷಿಸಲು ಬೆಳಗಾವಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನತೆ ಗಣೇಶ ವಿಸರ್ಜನೆಯ ವೈಭವದ ಮೆರವಣಿಗೆಯನ್ನು ಕಂಡು ಪುಳಕಿತಗೊಂಡರು. ಒಟ್ಟಾರೆ, ಹೇಳುವುದಾದರೆ ಬೆಳಗಾವಿಯ ಗಣೇಶೋತ್ಸವ ಈ ಸಲ ಹೊಸ ದಾಖಲೆ ಮಾಡಿದೆ.

ಅಭಿನಂದನೀಯ ಆಡಳಿತ ವ್ಯವಸ್ಥೆ :
ಬೆಳಗಾವಿ ಗಣೇಶೋತ್ಸವದ ಅಷ್ಟು ಯಶಸ್ಸು ಬೆಳಗಾವಿ ಮಹಾನಗರ ಪಾಲಿಕೆಗೆ ಸಲ್ಲಬೇಕು. ಅದರಲ್ಲೂ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರ ಅಚ್ಚುಕಟ್ಟುತನದ ವ್ಯವಸ್ಥೆಗಳು, ಮೇಲ್ವಿಚಾರಣೆ ಬೆಳಗಾವಿ ಜನತೆಯ ಮನೆಗೆದ್ದಿತು. ಗಣೇಶೋತ್ಸವದ ಅಷ್ಟು ವ್ಯವಸ್ಥೆಗಳ ಜವಾಬ್ದಾರಿ ವಹಿಸಿಕೊಂಡ ಆಯುಕ್ತ ಅಶೋಕ ದುಡಗುಂಟಿ ಅವರು ತಮ್ಮ ಇಷ್ಟು ವರ್ಷದ ಅಡಳಿತದ ಅನುಭವವನ್ನು ಧಾರೆಯೆರೆದು ಈ ಬಾರಿಯ ಗಣೇಶೋತ್ಸವ ಅತ್ಯಂತ ಯಶಸ್ವಿಗೊಳ್ಳಲು ನೇರ ಕಾರಣರಾದರು. ಅವರ ಮಾರ್ಗದರ್ಶನದ ಮೂಲಕ ಮಹಾನಗರ ಪಾಲಿಕೆಯ ಇಡೀ ಆಡಳಿತ ವರ್ಗ ಗಣೇಶೋತ್ಸವ ಅತ್ಯಂತ ಯಶಸ್ವಿಯಾಗಲು ಬೆವರು ಹರಿಸಿ ದುಡಿಯಿತು. ಈ ವರ್ಷದ ಗಣೇಶೋತ್ಸವ 119 ವರ್ಷಗಳ ಭವ್ಯ ಹಿನ್ನೆಲೆಯುಳ್ಳ ಬೆಳಗಾವಿ ಗಣೇಶೋತ್ಸವಕ್ಕೆ ಹೊಸ ಭಾಷ್ಯ ಬರೆಯಲು ಕಾರಣವಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ