Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಿನ್ನಮತ -  ಬಂಡಾಯವಿಲ್ಲದ -  ನಿಷ್ಕಾಮ ಕರ್ಮ ನಾಯಕ  ಸಿದ್ದರಾಮಯ್ಯನವರು

ಬಿನ್ನಮತಕ್ಕೆ ಅವಕಾಶ ನೀಡಲಿಲ್ಲ
ರೆಸಾರ್ಟ್ ರಾಜಕಾರಣ ಮಾಡಲಿಲ್ಲ 
ನಾಯಕತ್ವದ ಬಿಕ್ಕಟ್ಟಿಗೂ ಬಿಟ್ಟುಕೊಡಲಿಲ್ಲ  
ಹೈಕಮಾಂಡ್ ಎದುರು ಸೆಡ್ಡು ಹೊಡೆದು ನಿಲ್ಲಲಿಲ್ಲ!

ಯಾವುದೇ ಗೊಂದಲ ಸೃಷ್ಟಿಸದೆ, ಯಾವುದೇ ಬಂಡಾಯ ಎದ್ದೇಳದೆ, ಅತ್ಯಂತ ಪ್ರಾಮಾಣಿಕವಾಗಿ ಮತ್ತು ಗೌರವಯುತವಾಗಿ ತನ್ನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ, ನಿಷ್ಕಾಮ ಕರ್ಮ ಮತ್ತು ಸ್ವಧರ್ಮವನ್ನು ಪಾಲಿಸಿದ ನೈಜ ಧರ್ಮಪಾಲಕ ಹಾಗೂ ನಿಜವಾದ ಕರ್ಮಯೋಗಿ - ಸಿದ್ದರಾಮಯ್ಯ.

ಇದು "ನುಡಿದಂತೆ ನಡೆದ" ರಾಜಕಾರಣ :
ಇಂದಿನ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವುದು, ಹೈಕಮಾಂಡ್‌ಗೆ ಸೆಡ್ಡು ಹೊಡೆಯುವುದು, ಬಿನ್ನಮತ ಸೃಷ್ಟಿಸಿ ಪಕ್ಷ ಒಡೆಯುವುದು ಸಾಮಾನ್ಯವಾಗಿದೆ. ಆದರೆ ಸಿದ್ದರಾಮಯ್ಯನವರು ಆ ದಾರಿ ಹಿಡಿಯಲಿಲ್ಲ.

"ರಾಹುಲ್ ಗಾಂಧಿ ಹೇಳಿದರೆ ಸಾಕು" ಎಂದು ಒಂದೇ ಮಾತಿಗೆ ಸ್ಥಾನ ತ್ಯಾಗ ಮಾಡಿದರು. ಇದು ಕೃತಜ್ಞತೆಯ ಪರಮಾವಧಿ. ಎರಡು ಬಾರಿ ಸಿಎಂ ಮಾಡಿದ ನಾಯಕನ ಮಾತಿಗೆ ಬೆಲೆ ಕೊಟ್ಟರು. ಈ ಗುಣ ಇಂದಿನ ಸ್ವಾರ್ಥ ಯುಗದಲ್ಲಿ ಅಪರೂಪ.
ಅಧಿಕಾರ ಶಾಶ್ವತವಲ್ಲ, ಜನಸೇವೆ ಶಾಶ್ವತ ಎಂದು ತೋರಿಸಿಕೊಟ್ಟರು. ಕುರ್ಚಿಗಾಗಿ ಕಚ್ಚಾಡುವ ರಾಜಕಾರಣಿಗಳಿಗೆ ಇವರ ನಡೆ ಪಾಠವಾಗಬೇಕು.

ಆದರೆ... ಕೆಲವು ಪ್ರಶ್ನೆಗಳು ಉಳಿದಿವೆ:
ಸಿದ್ದರಾಮಯ್ಯನವರ ನಿರ್ಗಮನ ಸಮಾಜ ವಿರೋಧಿ ಶಕ್ತಿಗಳಿಗೆ ಸಂಭ್ರಮದ ಸಮಯ* ಎಂಬುದು ನಿಜ. ಅಹಿಂದ ಚಳವಳಿಯ ಧ್ವನಿ, ಬಡವರ ಪರ ಧ್ವನಿ, ಸಾಮಾಜಿಕ ನ್ಯಾಯದ ಧ್ವನಿ ಸ್ವಲ್ಪ ಮಟ್ಟಿಗೆ ಕ್ಷೀಣಿಸಬಹುದು.

ಮೊದಲ ಅವಧಿಯಲ್ಲಿ ಕೈಗೊಂಡ ಐತಿಹಾಸಿಕ ನಿರ್ಣಯಗಳನ್ನು ಈ ಬಾರಿ ತೆಗೆದುಕೊಳ್ಳಲಿಲ್ಲ ಎಂಬ ಕೊರಗು ಇದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ರೀತಿಯ ಗೇಮ್-ಚೇಂಜರ್ ಯೋಜನೆಗಳು ಈ ಬಾರಿ ಬರಲಿಲ್ಲ. ಗ್ಯಾರಂಟಿಗಳ ನಿರ್ವಹಣೆಯಲ್ಲೇ ಅವಧಿ ಕಳೆದುಹೋಯಿತು.

ಒಳಮೀಸಲಾತಿ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ವಿಫಲರಾದರು ಎಂಬುದು ದಲಿತ ಸಮುದಾಯದ ದೊಡ್ಡ ಅಸಮಾಧಾನ. ಸದಾಶಿವ ಆಯೋಗದ ವರದಿ ಜಾರಿ ಮಾಡಲಿಲ್ಲ, ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಸ್ಪಷ್ಟ ನಿಲುವು ತೆಗೆದುಕೊಳ್ಳಲಿಲ್ಲ. ಇದು ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ.

ಆದರೂ ಹೆಮ್ಮೆಯ ಕಾಲಘಟ್ಟ :
ಇವೆಲ್ಲಾ ಕೊರತೆಗಳ ನಡುವೆಯೂ, ಇಂತಹ ಮುತ್ಸದ್ದಿಯ ಕಾಲಘಟ್ಟದಲ್ಲಿ ನಾವು ಇದ್ದೆವು ಎನ್ನುವುದು ನಮ್ಮ ಹೆಮ್ಮೆ.

1. ಧೈರ್ಯದ ನಾಯಕ: ಜಾತಿ ಗಣತಿ, ಟಿಪ್ಪು ಜಯಂತಿ, ಲಿಂಗಾಯತ ಸ್ವತಂತ್ರ ಧರ್ಮ ವಿಷಯದಲ್ಲಿ ಸಮಾಜ ವಿರೋಧಿಗಳ ಸವಾಲು ಸ್ವೀಕರಿಸಿ ನಿಂತವರು.
2. ಬಡವರ ಬಂಧು: ಮಠ-ಮಂದಿರಗಳಿಗಿಂತ ಹಸಿದ ಹೊಟ್ಟೆಗೆ ಮಿಡಿದವರು.
3. ನೇರ ನಡೆ: ಮುಖವಾಡ ಹಾಕದೆ, ಮನಸ್ಸಿನಲ್ಲಿ ಇರುವುದನ್ನು ನೇರವಾಗಿ ಹೇಳುವ ದಿಟ್ಟತನ.
4. ಆಡಳಿತ ಅನುಭವ: 14 ಬಾರಿ ಬಜೆಟ್ ಮಂಡಿಸಿದ ದಾಖಲೆ, 40 ವರ್ಷಗಳ ರಾಜಕೀಯ ಅನುಭವ.

ಕೊಟ್ಟ ಮಾತಿನಂತೆ ನಡೆ :
"2.5 ವರ್ಷ ಫಾರ್ಮುಲಾ" ಇತ್ತು ಎಂಬ ಚರ್ಚೆ ಇದ್ದರೂ, ಅಧಿಕೃತವಾಗಿ ಎಲ್ಲೂ ಒಪ್ಪಿಕೊಂಡಿರಲಿಲ್ಲ. ಆದರೆ ಪಕ್ಷ ಹೇಳಿದಾಗ, ನಾಯಕತ್ವ ಕೇಳಿದಾಗ ಯಾವುದೇ ಆಮಿಷಕ್ಕೂ ಬಲಿಯಾಗದೆ ಸ್ಥಾನ ತ್ಯಾಗ ಮಾಡಿದರು.
ಇದು "ನುಡಿದಂತೆ ನಡೆದ" ಪರಂಪರೆ. ರಾಜಕೀಯದಲ್ಲಿ ಮಾತಿಗೆ ತಪ್ಪುವವರೇ ಹೆಚ್ಚಿರುವಾಗ, ಮಾತು ಉಳಿಸಿಕೊಂಡು ಹೋದ ಸಿದ್ದರಾಮಯ್ಯನವರ ನಡೆ ಇತಿಹಾಸವಾಗಿ ಉಳಿಯುತ್ತದೆ.
ಅಂತೆಯೇ ಕರ್ನಾಟಕದಲ್ಲಿ ಹಲವು ನಾಯಕರ ಮಹತ್ವಾಕಾಂಕ್ಷೆ ಮತ್ತು ಬಂಡಾಯದ ನಡುವೆಯೂ, ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟವಾಗಿಟ್ಟುಕೊಂಡು ಪಕ್ಷದ ಮತ್ತು ಸರ್ಕಾರದ ಆಡಳಿತವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಸಿದ್ದರಾಮಯ್ಯನವರದ್ದು ಎತ್ತಿದ ಕೈ ಅಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಬಡವರು, ಶೋಷಿತರು ಮತ್ತು ದುರ್ಬಲ ವರ್ಗದವರಿಗೆ ಯಾವುದೇ ಜಾತಿ-ಧರ್ಮದ ಭೇದವಿಲ್ಲದೆ ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಯೋಜನೆಗಳನ್ನು ಜಾರಿಗೆ ತಂದದ್ದು. ಇದು ಪ್ರತಿಫಲ ಅಥವಾ ಮತಗಳ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಹೊಟ್ಟೆ ತುಂಬಿಸುವ ನಿಸ್ವಾರ್ಥ ಕಾಳಜಿಯಾಗಿದೆ.ಅಧಿಕಾರ ಶಾಶ್ವತವಲ್ಲ ಎಂಬ ಅರಿವಿನಿಂದ, ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ (ಅಹಿಂದ) ಹಕ್ಕುಗಳಿಗಾಗಿ ಸೈದ್ಧಾಂತಿಕವಾಗಿ ಧ್ವನಿಯೆತ್ತಿದವರು. ರಾಜಕೀಯದಲ್ಲಿ ಏಳು-ಬೀಳುಗಳು, ಸೋಲು-ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಸತತವಾಗಿ ಜನರ ಸೇವೆಗೆ ಶ್ರೀ ಸಿದ್ದರಾಮಯ್ಯನವರು ಮುಡಿಪಾಗಿರುವುದು ಮರೆಯಲಾಗದ ದಿನಗಳಾಗಿವೆ.
ಹಾಗಾಗಿ 
ಸಿದ್ದರಾಮಯ್ಯನವರ ಈ ಗುಣವು ಅವರನ್ನು ಜನಸಾಮಾನ್ಯರ ನಾಯಕನನ್ನಾಗಿ ಮಾಡಿದ್ದು, ಇವರ ರಾಜಕೀಯ ಬದುಕು 'ನುಡಿದಂತೆ ನಡೆದ' ಕರ್ಮಯೋಗಿ ಎಂದು ಗುರುತಿಸಿಕೊಳ್ಳುತ್ತಾರೆ.

ಕೊನೆಯದಾಗಿ,ಸ್ಥಾನ ಹೋದರೂ ಗೌರವ ಹೋಗಿಲ್ಲ. ಅಧಿಕಾರ ಕಳೆದುಕೊಂಡರೂ ಜನರ ಮನಸ್ಸು ಗೆದ್ದಿದ್ದಾರೆ. ಇದೇ ನಿಜವಾದ ರಾಜಕಾರಣ. ಮುಂದೆ ಪರದೆಯ ಹಿಂದಿನ ಸೂತ್ರಧಾರರಾಗಲಿ, ಮಾರ್ಗದರ್ಶಕರಾಗಲಿ - ಸಿದ್ದರಾಮಯ್ಯ ಎಂಬ ಹೆಸರು ಕರ್ನಾಟಕದ ರಾಜಕಾರಣದಲ್ಲಿ ಸದಾ ಮಿನುಗುತ್ತಿರುತ್ತದೆ. ನಿಷ್ಕಾಮ ಕರ್ಮಯೋಗಿಗೆ ನನ್ನ ನಮನಗಳು.
---
ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ