ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ ನಗರ ಪಾಲಿಕೆಯಾಗಿ ರಚನೆಯಾದ ನಂತರ ಮಾನ್ಯ *ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್* ರವರ ಮಾರ್ಗದರ್ಶನ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಮಾನ್ಯ *ಆಡಳಿತಗಾರರಾದ ಶ್ರೀ ಮಹೇಶ್ವರ್ ರಾವ್* ರವರ ಅಧ್ಯಕ್ಷತೆಯಲ್ಲಿ ಬನಶಂಕರಿ ದೇವಸ್ಥಾನದ ಹತ್ತಿರವಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 2026-27ನೇ ಸಾಲಿನ ಚೊಚ್ಚಲ ಆಯವ್ಯಯವನ್ನು *ಆಯುಕ್ತರಾದ ಕೆ.ಎನ್ ರಮೇಶ್* ರವರು ಪ್ರಸ್ತುತಿ ಪಡಿಸಿದರು.
*2026-27ನೇ ವರ್ಷದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 3826.43 ಕೋಟಿಗಳಷ್ಟು ಇದ್ದು, ಒಟ್ಟು ಖರ್ಚು ರೂ: 3825.95 ಕೋಟಿ ರೂ. ಇರಲಿದೆ.*
ಈ ವೇಳೆ ಅಭಿವೃದ್ಧಿ ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು, ಕಂದಾಯ ಅಪರ ಆಯುಕ್ತರಾದ ರಾಚಪ್ಪ, ಜಂಟಿ ಆಯುಕ್ತರಾದ ಮಧು ಪಟೇಲ್, ಸತೀಶ್ ಬಾಬು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ರವಿ, ಹಣಕಾಸು ವಿಭಾಗದ ಉಪ ನಿಯಂತ್ರಕರಾದ ಚೇತನ್ ಸೇರಿದಂತೆ ಮತ್ತಿತರರು ಉಪಸಸ್ಥಿತರಿದ್ದರು.