LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಾವಣಗೆರೆ ದಕ್ಷಿಣ ಉಪಚುನಾವಣೆ: ಶಾಂತಿಯುತ ಶೇ. 68.55 ರಷ್ಟು ಮತದಾನ

 

ದಾವಣಗೆರೆ: 107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆಯು ನಿನ್ನೆ(ಏ. 09) ಅತ್ಯಂತ ಶಾಂತಿಯುತವಾಗಿ ಜರುಗಿದ್ದು, ಒಟ್ಟಾರೆ ಶೇ. 68.55 ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಪುರುಷ ಮತದಾರರ ಸಂಖ್ಯೆ 113339, ಮಹಿಳಾ ಮತದಾರರ ಸಂಖ್ಯೆ-117690, ತೃತೀಯ ಲಿಂಗ ಮತದಾರರ ಸಂಖ್ಯೆ 43 ಒಟ್ಟು 231072 ಇದ್ದು, ಇದರಲ್ಲಿ   ಪುರುಷ ಮತದಾರರ ಸಂಖ್ಯೆ 78290, ಮಹಿಳಾ ಮತದಾರರ ಸಂಖ್ಯೆ 79823 ತೃತೀಯ ಲಿಂಗ ಮತದಾರರ ಸಂಖ್ಯೆ 18 ಹೀಗೆ ಒಟ್ಟು ಮತ ಚಲಾಯಿಸಿದವರ ಸಂಖ್ಯೆ 158131 ಆಗಿರುತ್ತದೆ. ಒಟ್ಟಾರೆ ಶೇ. 68.55 ರಷ್ಟು ಮತದಾನವಾಗಿದೆ.

ಅತಿ ಹೆಚ್ಚು ಮತ್ತು ಅತಿ ಕಡಿಮೆ ಮತದಾನದ ಪ್ರಮಾಣ ದಾಖಲಾದ ವಿವರ:

ದಾವಣಗೆರೆ ಯರಗುಂಟೆ ಗೌರ್ನಮೆಂಟ್ ಅಪ್‌ಗ್ರೇಡೆಡ್ ಹೈಯರ್ ಪ್ರೈಮರಿ ಸ್ಕೂಲ್, ಕೊಠಡಿ ಸಂಖ್ಯೆ 1 ರಲ್ಲಿ ಪುರುಷ ಮತದಾರರು 397 ಮಹಿಳಾ ಮತದಾರರು 403 ತೃತೀಯ ಲಿಂಗ-0 ಒಟ್ಟು 800 ಮತದಾರರು ಇದ್ದು  343-ಪುರುಷ ಮತದಾರರು,  341-ಮಹಿಳಾ ಮತದಾರರು ಹಾಗೂ  0- ತೃತೀಯ ಮಹಿಳಾ ಮತದಾರರು ಹೀಗೆ ಒಟ್ಟು 684 ಮತದಾರರು ಮತಚಲಾಯಿಸಿ ಶೇ. 85.50% ರಷ್ಟು ಅತಿ ಹೆಚ್ಚು ಮತದಾನವಾಗಿದೆ.

ದಾವಣಗೆರೆ ದೇವರಾಜ್ ಅರಸು ಬಡಾವಣೆಯ ಅಪ್‌ಗ್ರೇಡೆಡ್ ಸ್ವಿಮ್ಮಿಂಗ್ ಪೂಲ್, ಕೊಠಡಿ ಸಂಖ್ಯೆ 1 ರಲ್ಲಿ ಪುರುಷ ಮತದಾರರು ಸಂಖ್ಯೆ 301, ಮಹಿಳಾ ಮತದಾರರ ಸಂಖ್ಯೆ 325, ತೃತೀಯ ಲಿಂಗ-0 ಒಟ್ಟು 626 ಮತದಾರರು ಇದ್ದು  129-ಪುರುಷ ಮತದಾರರು,  144-ಮಹಿಳಾ ಮತದಾರರು ಹಾಗೂ  0- ತೃತೀಯ ಮಹಿಳಾ ಮತದಾರರು ಹೀಗೆ ಒಟ್ಟು 273 ಮತದಾರರು ಮತಚಲಾಯಿಸಿ ಶೇ. 43.61%. ಅತಿ ಕಡಿಮೆ ಮತದಾನವಾಗಿದೆ.

ಕ್ಷೇತ್ರದಾದ್ಯಂತ ಸ್ಥಾಪಿಸಲಾಗಿದ್ದ ಎಲ್ಲಾ 284 ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಮತದಾನ ಪ್ರಕ್ರಿಯೆ ಸುಗಮವಾಗಿ ಮುಕ್ತಾಯಗೊಂಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026