
ಅಧಿಕಾರ ಹಂಚಿಕೆ ವಿಚಾರವಾಗಿ ಕಳೆದ 15 ದಿನಗಳಿಂದ ಸಾಕಷ್ಟು ಸಂಚಲವನ್ನು ಮೂಡಿಸಲಾಗಿತ್ತು ಸಾಕಷ್ಟು ಹೈಕಮಾಂಡ್ ನಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಭೆಯನ್ನು ಸಹ ಮಾಡಲಾಗಿತ್ತು ರಾಜ್ಯ ರಾಜಕೀಯದಲ್ಲಿ ಗಂಭೀರವಾದಂತಹ ಚರ್ಚೆಗಳು ಸಹ ನಡೆಯಿರಿದವು ಯಾರಿಗೆ ಸಿಎಂ ಪಟ್ಟ ದೊರಕುತ್ತದೆ ಅಧಿಕಾರ ಹಂಚಿಕೆಯಲ್ಲಿ ಯಾರಿಗೆ ಬಹುಮತ ಸಿಗುತ್ತದೆ ಎಂಬುದರ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಸಾರ್ವಜನಿಕರಲ್ಲಿಯೂ ಹಾಗೂ ರಾಜಕೀಯ ಪ್ರತಿನಿಧಿಗಳಲ್ಲಿಯೂ ಮೂಡ್ಸಿದ್ದವು.
ಇಂತಹ ರಾಜಕೀಯ ಗೊಂದಲಗಳಿಗೆ ಹಾಗೂ ಸಾರ್ವಜನಿಕರ ಗೊಂದಲಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಇವತ್ತು ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಸಿದ್ದರಾಮಯ್ಯನವರು ಬ್ರೇಕ್ಫಾಸ್ಟ್ ಮೀಟಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು. ಯಾವ ಉದ್ದೇಶಗಳಿಂದ ಈ ಒಂದು ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಲಾಗಿದೆ ಎಂಬುದರ ಕುರಿತು ಇನ್ನಷ್ಟೇ ತಿಳಿಯಬೇಕಾಗಿದೆ.
ಇನ್ನು ಸಿದ್ದರಾಮಯ್ಯ ಅವರನ್ನು ಬೆಳಿಗ್ಗೆ ಡಿಕೆ ಶಿವಕುಮಾರ್ ಅವರ ನಿವಾಸದ ಮುಂದೆ ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ ಅವರು ಆತ್ಮೀಯವಾಗಿ ಪುಷ್ಪಗುಚ ನೀಡುವ ಮೂಲಕ ಮುಗುಳ್ನಗೆ ಸ್ವಾಗತವನ್ನು ಕೋರಿದರು. ಅದಕ್ಕೆ ಪ್ರತಿಕ್ರಿಯೆಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಮುಗುಳ್ನಗೆಯಲ್ಲಿಯೇ ಹಸ್ತಲಾಗುವ ಮೂಲಕ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಎಂಟ್ರಿ ಕೊಟ್ಟರು.
ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಸಿಎಂ ಡಿಸಿಎಂ ಭಾಗಿ:
ಇನ್ನು ಡಿಕೆ ಶಿವಕುಮಾರ್ ನಿವಾಸದಲ್ಲಿ ನಡೆಯುತ್ತಿರುವ ಉಪಹಾರ ಔತಣಕೂಟದಲ್ಲಿ ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿದ್ದು ಬೇರೆ ಯಾವ ಸಚಿವರಿಗೂ ಶಾಸಕರಿಗೂ ಮಂತ್ರಿಮಂಡಲದ ದಲ್ಲಿರುವ ನಾಯಕರಿಗೆ ಯಾವುದೇ ಕಾರಣಕ್ಕೂ ಆಹ್ವಾನ ಇಲ್ಲ.
ಉಪಹಾರ ಅವತಾಳ ಕೋಟ ಕೇವಲ ವೈಯಕ್ತಿಕವಾಗಿರುವ ಕಾರಣ ಯಾವುದೇ ಸಚಿವರಾಗಲಿ ಶಾಸಕರಾಗಲಿ ಮಂತ್ರಿಮಂಡಲ ನಾಯಕರಿಗೆ ಆಹ್ವಾನ ಮಾಡಿರುವುದಿಲ್ಲ. ಹೀಗಾಗಿ ಕೇವಲ ಡಿಸಿಎಂ ಜೊತೆಗೆ ಸಹೋದರ ಡಿಕೆ ಸುರೇಶ್ ಅವರು ಇರುವುದು ಕಂಡುಬಂದಿದೆ.
ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಅಂತಿಮವಾಗಿ ಏನೆಲ್ಲಾ ಚರ್ಚೆಗಳು ಆಗಿದ್ದಾವೆ ಎಂಬುದರ ಬಗ್ಗೆ ಇನ್ನೂ ಕೆಲವೇ ಗಂಟೆಗಳಲ್ಲಿ ತಿಳಿದು ಬರಲಿದೆ.
ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಹಿನ್ನೆಲೆ ಡಿಕು ಶಿವಕುಮಾರ್ ಅವರ ನಿವಾಸದ ಮುಂದಿನ ರಸ್ತೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಏರಲಾಗಿದ್ದು ಹಿಲ್ಲೆಡೆ ಬ್ಯಾರಿಕೆಗಳನ್ನು ಸಹ ಹಾಕಲಾಗಿದೆ.