
ಬೆಂಗಳೂರಿನ ಪ್ರಸ್ಕಪ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜಧಾನಿ ಬೆಂಗಳೂರು ಇಂದು ಹಿಂದೂಗಳಿಗೆ ಸುರಕ್ಷಿತ ನಗರವಲ್ಲ ಎಂಬುದನ್ನು ಚಾಮರಾಜಪೇಟೆಯಲ್ಲಿ ನಡೆದ ನಿರಂತರ ದೌರ್ಜನ್ಯಗಳು ಸಾಬೀತುಪಡಿಸಿವೆ. ಹಿಂದೂ ಭಕ್ತರು, ಮಹಿಳೆಯರು, ವ್ರತಧಾರಿಗಳು ಮತ್ತು ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳು ಇನ್ನು ಸಹನೆಯ ಗಡಿ ದಾಟಿವೆ. ಇದು ಕೇವಲ ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ – ಹಿಂದೂ ವಿರೋಧಿ ಷಡ್ಯಂತ್ರವನ್ನು ಸರ್ಕಾರವೇ ಮೌನದಿಂದ ಪೋಷಿಸುತ್ತಿರುವ ಭಯಾನಕ ಸ್ಥಿತಿ ಎದುರಾಗಿದೆ.
ಜನವರಿ 4ರಂದು ಓಂ ಶಕ್ತಿ ಮಾಲಧಾರಿಣಿ ಅಮಾಯಕ ಮಹಿಳಾ ಭಕ್ತರು ಭಜನೆಯೊಂದಿಗೆ ಶಾಂತಿಪೂರ್ಣವಾಗಿ ಮೆರವಣಿಗೆ ನಡೆಸುತ್ತಿದ್ದಾಗ, ಜಿಹಾದಿ ಮನೋಭಾವದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಕಲ್ಲು ತೂರಾಟ ನಡೆಸಿ ಮಹಿಳೆಯರನ್ನು ಗಾಯಗೊಳಿಸಿದರು. ಮಹಿಳೆಯರ ಮೇಲೂ ದಾಳಿ ನಡೆಸುವಷ್ಟು ಕ್ರೂರ ಮನಸ್ಥಿತಿಗೆ ಇಳಿದಿರುವ ಈ ಶಕ್ತಿಗಳನ್ನು ಸರ್ಕಾರ ಇನ್ನೂ “ಸಮಾಜ ವಿರೋಧಿ ಅಂಶಗಳು” ಎಂದು ಮೃದು ಪದಗಳಲ್ಲಿ ಕರೆದಿರುವುದು ಅಪರಾಧಿಗಳ ಮನೋಬಲ ಹೆಚ್ಚಿಸಿದೆ.
ಇದೇ ಕ್ಷೇತ್ರದಲ್ಲಿ ನರಸಿಂಹ ದೇವಸ್ಥಾನದ ಉತ್ಸವ ಮೂರ್ತಿಯ ಮೇಲೆ ಅಶುದ್ಧ ನೀರು ಎರಚಿ ದೇವಾಲಯವನ್ನು ಅಪವಿತ್ರಗೊಳಿಸಲಾಯಿತು. ಆಕಳ ಕೆಚ್ಚಲು ಕತ್ತರಿಸಿದ ಅಮಾನವೀಯ ಕೃತ್ಯ, ಅಯ್ಯಪ್ಪ ಮಾಲಧಾರಿಗಳ ಮೇಲೆ ದಾಳಿ, ವ್ರತಾಚರಣೆಯ ಟೆಂಟಿಗೆ ಬೆಂಕಿ, ಹಿಂದೂ ಭಕ್ತರಲ್ಲಿ ಭಯ ಮೂಡಿಸುವ ಕ್ರಮಗಳು – ಎಲ್ಲಕ್ಕೂ ಒಂದೇ ಉತ್ತರ:
“ಅಪ್ರಾಪ್ತ ಬಾಲಕರು”, “ಮಾನಸಿಕ ಅಸ್ವಸ್ಥ” ಎಂದು ಪ್ರಕರಣ ಮುಚ್ಚಿಹಾಕುವುದು!
ಇದು ಯಾದೃಚ್ಛಿಕವಲ್ಲ. ಇದು ಅಪರಾಧಿಗಳನ್ನು ರಕ್ಷಿಸುವ ವ್ಯವಸ್ಥಿತ ಸರ್ಕಾರಿ ನೀತಿ.
ಚಾಮರಾಜಪೇಟೆಯಲ್ಲಿ ಆಟದ ಮೈದಾನ ಕಬಳಿಸುವ ಷಡ್ಯಂತ್ರಧಾರ್ಮಿಕ ದತ್ತಿ ಇಲಾಖೆಯ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ಸುತ್ತ ಕಾನೂನುಬಾಹಿರ ಮಾಂಸದ ಅಂಗಡಿಗಳುದೇವಸ್ಥಾನಗಳನ್ನು ಉದ್ದೇಶಪೂರ್ವಕವಾಗಿ ಅಪವಿತ್ರಗೊಳಿಸುವ ಕ್ರಮಗಳುನಿರಂತರವಾಗಿ ನಡೆಯುತ್ತಿವೆ. ಇಲ್ಲಿ ಸಂವಿಧಾನ ನಡೆಯುತ್ತಿಲ್ಲ. ಒಬ್ಬ ವ್ಯಕ್ತಿಯ, ಒಂದು ಮತಬ್ಯಾಂಕ್ನ, ಒಂದು ಅಜೆಂಡಾದ ಕಾನೂನು ಮಾತ್ರ ನಡೆಯುತ್ತಿದೆ.
ಇದಕ್ಕೂ ಮೇರಾಗಿ, ಪಶುಸಂಗೋಪನೆ ಇಲಾಖೆಗೆ ಸೇರಿದ ಸುಮಾರು 100 ಕೋಟಿ ರೂ. ಮೌಲ್ಯದ ಪಶು ಆಸ್ಪತ್ರೆಯ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರಿಸುವ ಪ್ರಯತ್ನ ನಡೆಯಿತು. ಮಾನ್ಯ ಉಚ್ಚ ನ್ಯಾಯಾಲಯ ತಡೆಆಜ್ಞೆ ನೀಡದಿದ್ದರೆ ಈ ದೋಚಾಟವೂ ಪೂರ್ಣಗೊಂಡಿರುತ್ತಿತ್ತು. ಇದು ರಾಜ್ಯ ಪ್ರಾಯೋಜಿತ ಭೂಮಿ ಕಬಳಿಕೆಯ ಸ್ಪಷ್ಟ ಉದಾಹರಣೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮೋದ್ ಮುತಾಲಿಕ್, ರಾಷ್ಟ್ರೀಯ ಆದ್ಯಕ್ಷರು, ಶ್ರೀರಾಮ ಸೇನೆ.ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ,ಬಿಎನ್ ಮಹೇಶ ಕುಮಾರ್, ಅಯ್ಯಪ್ಪ ದೇವಸ್ಥಾನ ರಕ್ಷಿತ , ಕಾರ್ಯದರ್ಶಿ, ಓಂ ಶಕ್ತಿ ಸಂಘಟನೆ,ಸುಂದ್ರೇಶ ನರ್ಗಲ್, ಅಧ್ಯಕ್ಷರು, ಶ್ರೀ ರಾಮ ಸೇನೆ, ಕರ್ನಾಟಕಮಂಜುನಾಥ, ಆದ್ಯಕ್ಷರು, ಶ್ರೀರಾಮನ ಸೇನೆ, ಬೆಂಗಳೂರು ನಗರ. ಉಪಸ್ಥಿತರಿದ್ದರು.