LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ : 26 ಸಾಧಕರಿಗೆ ಸನ್ಮಾನ.!

 

ಚಿತ್ರದುರ್ಗ : ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ನ. 01 ರಂದು ಜಿಲ್ಲಾ ಕೇಂದ್ರದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲು 26 ಜನ ಸಾಧಕರನ್ನು ಆಯ್ಕೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯು ಅ. 30 ರಂದು ಸಭೆ ನಡೆಸಿ, ಸನ್ಮಾನಿತರ ಪಟ್ಟಿಯನ್ನು ಶಿಫಾರಸು ಮಾಡಿ ಸಲ್ಲಿಸಿರುತ್ತದೆ.

ಚಿತ್ರದುರ್ಗ ತಾಲ್ಲೂಕು ಚೀಳಂಗಿ ಗ್ರಾಮದ ರಂಗಪ್ಪ ಎ.ಡಿ.- ಜಾನಪದ ಕಲೆ(ಉರುಮೆ ವಾದ್ಯ).  ಚಿತ್ರದುರ್ಗ ಗಾಂಧಿನಗರದ ಹೆಚ್. ಕಮಲಮ್ಮ- ಜಾನಪದ (ಸೋಬಾನೆ).  ಚಿತ್ರದುರ್ಗ ಬುದ್ಧನಗರದ ಕೆ. ಶ್ರೀನಿವಾಸ- ಜಾನಪದ (ತಾಷರಾಂಡೋಲು).  ಮೊಳಕಾಲ್ಮೂರು ತಾಲ್ಲೂಕು ರ‍್ರೇನಹಳ್ಳಿಯ ಬಿ. ಮಾರಣ್ಣ- ಕಲೆ (ಬಯಲಾಟ).  ಚೋಳಗುಡ್ಡದ ಚನ್ನಬಸಪ್ಪ- ರಂಗಭೂಮಿ.  ಚಿತ್ರದುರ್ಗದ ಸಿ.ಹೆಚ್. ಜಯಪ್ಪ- ತಬಲಾ ಕಲಾವಿದರು.  ರಾಜೇಂದ್ರ ನಗರದ ಹರೀಶ್ ಎಂ.ಕೆ.- ರಂಗಭೂಮಿ.  ಹೊಸದುರ್ಗದ ಬಿ. ಈಶ್ವರಪ್ಪ- ಸಂಗೀತ ಕಲಾವಿದರು.  ಚಿತ್ರದುರ್ಗದ ನಾಗವಲ್ಲಿ ಶಾಸ್ತಿç ಮತ್ತು ಎಂ.ಕೆ. ಹಟ್ಟಿ ಗ್ರಾಮದ ಮಲ್ಲಿಕಾರ್ಜುನಯ್ಯ ಎ.ಎಂ.- ಸಂಗೀತ ಕ್ಷೇತ್ರ. ಚಿತ್ರದುರ್ಗದ ಹೇಮಾವತಿ- ಯೋಗ.  ಕನ್ನಡ ಸಂಪಿಗೆ ಪತ್ರಿಕೆ ಸಂಪಾದಕ ಟಿ. ತಿಪ್ಪೇಸ್ವಾಮಿ, ವಿಜಯಕರ್ನಾಟಕ ಪತ್ರಿಕೆ ಛಾಯಾಗ್ರಾಹಕ ಎಸ್.ಜಿ. ಸುರೇಶ್ ಬಾಬು, ಪಬ್ಲಿಕ್ ಟಿ.ವಿ. ಕ್ಯಾಮೆರಾಮನ್ ಅರ್ಜುನ್ ಡಿ., ಪ್ರಜಾ ಟಿ.ವಿ. ವರದಿಗಾರ ಡಿ. ಕುಮಾರಸ್ವಾಮಿ- ಮಾಧ್ಯಮ ಕ್ಷೇತ್ರ.  ಪರಶುರಾಂಪುರದ ಡಾ. ಎಂ. ಚೌಡಪ್ಪ-ವೈದ್ಯಕೀಯ ಕ್ಷೇತ್ರ.  ನಿವೃತ್ತ ಮುಖ್ಯ ಶಿಕ್ಷಕ ಚಿತ್ರದುರ್ಗದ ಹೆಚ್.ಎಸ್.ಟಿ. ಸ್ವಾಮಿ, ಜಿ.ಎಂ. ಶಂಕರಮೂರ್ತಿ, ಚಿತ್ರದುರ್ಗ- ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರ.  ಹಿರಿಯೂರು ತಾಲ್ಲೂಕು ವಾಣಿ ವಿಲಾಸಪುರದ ಹೆಚ್.ಆರ್. ರಾಮಸ್ವಾಮಿ, ಚಿತ್ರದುರ್ಗದ ಟಿ.ವಿ. ಸುರೇಶ ಗುಪ್ತ, ಹೊಸದುರ್ಗ ತಾಲ್ಲೂಕು ಶ್ರೀರಾಂಪುರದ ಬಿ. ಮೈಲಾರಪ್ಪ ಮತ್ತು ರಾಮ್ಕಿ ಮಾಚೇನಹಳ್ಳಿ- ಸಾಹಿತ್ಯ/ಸಂಕೀರ್ಣ ಕ್ಷೇತ್ರ.  ಹಿರಿಯೂರಿನ ನಿವೃತ್ತ ಮುಖ್ಯ ಶಿಕ್ಷಕ ಎಂ.ಬಿ. ಲಿಂಗಪ್ಪ- ಶಿಕ್ಷಣ ಕ್ಷೇತ್ರ.  ಚಿತ್ರದುರ್ಗದ ದುರುಗೇಶ್, ಚಿತ್ರದುರ್ಗ ಹಿಮ್ಮತ್ ನಗರದ ಸಿರೀನ್ ತಾಜ್- ಸಮಾಜ ಸೇವೆ ಕ್ಷೇತ್ರ.  ಚಳ್ಳಕೆರೆ ತಾಲ್ಲೂಕು ಹಾಲಿಗೊಂಡನಹಳ್ಳಿಯ ರುದ್ರಮುನಿಯಪ್ಪ- ಕೃಷಿ ಕ್ಷೇತ್ರ.

ಮೇಲ್ಕಂಡ ಗಣ್ಯರಿಗೆ ನ. 01 ರಂದು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026