LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ: ಅಮಿತಾಭ್‌ ಬಚ್ಚನ್‌ ಅಳಿಯನ ವಿರುದ್ಧ ಎಫ್‌ಐಆರ್

ಅಮಿತಾಭ್‌ ಬಚ್ಚನ್‌ ಮಗಳು ಶ್ವೇತಾ ಬಚ್ಚನ್‌ ಪತಿ ನಿಖಿಲ್‌ ನಂದಾ ಸೇರಿ ಒಟ್ಟು 8 ಮಂದಿ ವಿರುದ್ಧ ಉತ್ತರ ಪ್ರದೇಶದ ಬದೌನ್‌ ಜಿಲ್ಲೆಯ ದತಗಂಜ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಇವರ ವಿರುದ್ಧ ಕೇಸ್‌ ದಾಖಲಾಗಿದೆ ಎಂದು ವರದಿಯಾಗಿದೆ. ಅಂದಹಾಗೇ, ಎಸ್ಕಾರ್ಟ್‌ ಕುಬೋಟಾ ಲಿಮಿಟೆಡ್‌ ಸಿಇಒ ಆಗಿರುವ ನಿಖಿಲ್‌ ನಂದಾ ಸೇರಿ 8 ಮಂದಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಾಪಡ್ ಹಮ್ಜಾಪುರೆ ಗ್ರಾಮದ ನಿವಾಸಿ ಜ್ಞಾನೇಂದ್ರ ಎಂಬುವರು ನಿಖಿಲ್‌ ನಂದಾ ಮತ್ತು ಇತರರ ವಿರುದ್ಧ ಕೋರ್ಟ್‌ಗೆ ದೂರು ಸಲ್ಲಿಸಿದ್ದಾರೆ. ನನ್ನ ಸಹೋದರ ಜಿತೇಂದ್ರ ಅವರು ದತ್ತಗಂಜ್‌ನಲ್ಲಿ ಜೈ ಕಿಸಾನ್‌ ಟ್ರೇಡರ್ಸ್‌ ಎಂಬುವ ಟ್ರ್ಯಾಕ್ಟರ್‌ ಏಜೆನ್ಸಿ ನಡೆಸುತ್ತಿದ್ದರು. Escorts Kubota Limited ಕಂಪನಿಯ ಸ್ಥಳೀಯ ಮ್ಯಾನೇಜರ್‌ ಆಗಿರುವ ಆಶಿಶ್‌ ಬಲಿಯಾನ್‌, ಸೇಲ್ಸ್‌ ಮ್ಯಾನೇಜರ್‌ ಸುಮಿತ್‌ ರಾಘವ್‌, ಉತ್ತರ ಪ್ರದೇಶ ಬ್ರ್ಯಾಂಚ್‌ ಮುಖ್ಯಸ್ಥ ದಿನೇಶ್‌ ಪಂತ್‌, ಫೈನಾನ್ಸಿಯರ್‌ ಕಲೆಕ್ಷನ್‌ ಆಫೀಸರ್‌ ಪಂಕಜ್‌ ಭಾಸ್ಕರ್‌, ಸೇಲ್ಸ್‌ ಮ್ಯಾನೇಜರ್‌ ಅಮಿತ್‌ ಪಂತ್‌, ಸೇಲ್ಸ್‌ ಹೆಡ್‌ ನೀರಜ್‌ ಮೆಹ್ರಾ, ಸಿಇಒ ನಿಖಿಲ್‌ ನಂದಾ ಮತ್ತು ಶಹಜಹಾನ್‌ಪುರ ಡೀಲರ್‌ ಶಿಶಾಂತ್‌ ಗುಪ್ತಾ ಅವರು ನನ್ನ ಸಹೋದರನ ಏಜೆನ್ಸಿಗೆ ಆಗಮಿಸಿ, ತಮ್ಮ ಕಂಪನಿಯ ಟ್ರ್ಯಾಕ್ಟರ್‌ಗಳ ಮಾರಾಟವನ್ನ ಹೆಚ್ಚಿಸುವಂತೆ ಒಂದೇ ಸಮನೆ ಒತ್ತಡ ಹೇರಿದ್ದಾರೆ. ಹಾಗೊಮ್ಮೆ ಹೆಚ್ಚಿಸದೆ ಇದ್ದಲ್ಲಿ, ಏಜೆನ್ಸಿ ಮುಚ್ಚಿಸುವುದಾಗಿಯೂ ಬೆದರಿಕೆ ಒಡ್ಡಿದ್ದರು. ಇವರು ನೀಡುವ ಮಾನಸಿಕ ಹಿಂಸೆ ತಾಳಲಾರದೆ ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಇದರ ಅನ್ವಯ ಈ ಮೇಲಿನವರ ಎಲ್ಲರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನ; ಕೊಲೆ ಆರೋಪಿಯ ಕಾಲಿಗೆ ಗುಂಡೇಟು'ವಂದೇ ಭಾರತ್ ಮೇಲ್ದರ್ಜೆಗೆ ಕ್ರಮ; 1,300 ರೈಲು ನಿಲ್ದಾಣಗಳ ಪುನರ್ನಿರ್ಮಾಣ'- ಸಚಿವ ಅಶ್ವಿನಿ ವೈಷ್ಣವ್ಆರೋಗ್ಯ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಜ್ಯೂಸ್ಇಷ್ಟು ಕಡಿಮೆ ಬಟ್ಟೆ ಹಾಕಿದ್ರೆ ಅತ್ಯಾಚಾರ ಮಾಡ್ತೀನಿ: ಮಹಿಳೆಗೆ ಆಟೋ ಚಾಲಕನ ಬೆದರಿಕೆ!ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕನ್ ವಿಜ್ಞಾನಿ ಜೇಮ್ಸ್ ವಾಟ್ಸನ್ ವಿಧಿವಶಶಾಂತಿ ಮಾತುಕತೆ ವಿಫಲ: 'ನಾವು ಯುದ್ಧಕ್ಕೆ ಸಿದ್ಧ'- ಪಾಕ್‌ಗೆ ಅಫ್ಘಾನ್ ಖಡಕ್ ವಾರ್ನಿಂಗ್ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: 'ಉಸ್ತುವಾರಿ ವಿರುದ್ಧ ಕ್ರಮ'- ಪರಮೇಶ್ವರ್ ಕಿಡಿಹೆಲ್ಮೆಟ್ ಧರಿಸದೆ ಹೋದ ಸ್ಕೂಟರ್ ಸವಾರ: 20 ಲಕ್ಷ ದಂಡ – ರಶೀದಿ ನೋಡಿ ಸವಾರ ಶಾಕ್4ನೇ ಬಾರಿಗೆ ಯುಪಿಎಸ್‌ಸಿ ಬರೆದು 18ನೇ ರ‍್ಯಾಂಕ್ ಪಡೆದ ಐಎಎಸ್ ರವಿ ಕುಮಾರ್ ಸಿಹಾಗ್ಕಾಲ ಕಾಲಕ್ಕೆ ರಾಸುಗಳಿಗೆ ಲಸಿಕೆಯನ್ನು ಹಾಕಿಸಿ: ಜಿ.ಬಿ.ಶೇಖರ್