ಬೆಂಗಳೂರು: ಪ್ರಸ್ತುತ ಕಾಲಘಟ್ಟದಲ್ಲಿ ಸೈಬರ್ ದಾಳಿ ಅಪಾಯಕಾರಿಯಾಗಿ ಬೆಳೆಯುತ್ತಿದ್ದು, ಎಲ್ಲಡೆ ಅಣಬೆಯಂತೆ ಹಬ್ಬುತ್ತಿದೆ, ಎಲ್ಲೆಡೆ ವಿಶ್ವಾಸಗಳನ್ನು ಅಳಿಸುವಂತೆ ಮಾಡುವ ಕೆಲಸ ಅತಿ ವೇಗವಾಗಿ ಮಾಡುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿ ಸಲುವಾಗಿ ತನಿಖೆಗೆ ನೆರವಾಗಲು ಪರಿಣತ ಸಮುದಾಯದ ಅವಶ್ಯಕತೆ ಇದೆ ಕಾನೂನು ತಂತ್ರಜ್ಞಾನ ಮತ್ತು ಸಮುದಾಯದ ಪಯಣತರು ಒಟ್ಟುಗೂಡಿ ಇಂತಹ ಸಮುದಾಯವನ್ನು ನಿರ್ಮಿಸಬೇಕಾಗಿದೆ ಎಂದು ಸೈಬರ್ ವಿಧಿ ಸಂಗಮ ಸಮ್ಮೇಳನದಲ್ಲಿ ಒಗ್ಗಟ್ಟಿನ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂಬಂಧ ಹಲವು ಪರಿಣತರು ಹಾಗೂ ಸೈಬರ್ ವಿಚಾರವಾಗಿ ಚರ್ಚೆಯನ್ನು ಸಹ ನಡೆಸಲಾಯಿತು. ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಹಳೆ ವಿದ್ಯಾರ್ಥಿಗಳ ಗುಂಪು ನಗರದಲ್ಲಿ ಹಮ್ಮಿಕೊಂಡಿದ್ದ ಸೈಬರ್ ವಿಧಿಸಂಗಮ 2025 ಸಮಾವೇಶ ತಜ್ಞರು ಸೈಬರ್ ವಲಯದ ಪಾಲುದಾರರು ಮತ್ತು ಸಹಯೋಗಗಳನ್ನು ಒಗ್ಗೂಡಿಸಿ ಸಹಿಬರ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಈ ಸಮಾವೇಶದಲ್ಲಿ ಎರಡು ಪ್ಯಾನಲ್ ಚರ್ಚೆಗಳು ಸಹ ನಡೆದವು.
ಈ ಚರ್ಚೆಯಲ್ಲಿ ಗೋಪಿತೆ ದತ್ತಾಂಶಗಳ ಸುರಕ್ಷತೆ ಮತ್ತು ಎಐ ಆಧಾರಿತ ಸೈಬರ್ ಅಪರಾಧಗಳ ನಡುವೆ ಬೆಳೆಯುತ್ತಿರುವ ಸಂಪರ್ಕಗಳ ಬಗ್ಗೆ ವಿಷಯ ಮಂಡನೆ ಮಾಡಲಾಯಿತು.
ವಿವಿಧ ಉದ್ದೇಶಗಳಿಗೆ ಸರ್ಕಾರಗಳು ನಾಗರಿಕರಿಂದ ಸಂಗ್ರಹಿಸುವ ವಯಕ್ತಿಕ ಮಾಹಿತಿಯ ಡಿಜಿಟಲ್ ದತ್ತಾಂಶದ ಗೋಪಿತೆ ಮತ್ತು ಸುರಕ್ಷತೆಯ ಬಗ್ಗೆ ಕಾತರಿ ಇಲ್ಲ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರೊಫೆಸರ್ ನಿಗಮ್ ನುಗ್ಗೆಹಳ್ಳಿ ಹೇಳಿದರು.
ನಾಗರಿಕರಿಂದ ಸರ್ಕಾರಗಳು ವಿವಿಧ ಉದ್ದೇಶಗಳಿಗೆ ಪಡೆಯುವ ಮಾಹಿತಿಯನ್ನು ಅದೇ ಉದ್ದೇಶಕ್ಕೆ ಮಾತ್ರ ಬಳಸುತ್ತಾರೆ ಎನ್ನುವ ನಂಬಿಕೆ ಇಲ್ಲ ಸರ್ಕಾರಗಳು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು ಗೌಪ್ಯತೆ ಕಾಪಾಡಲಾಗುತ್ತದೆ ಎನ್ನುವ ಕಾದರಿಲ್ಲ ಎಂದರು ಡೇಟಾ ಗೋಪಿತೆ ಮತ್ತು ಸೆಕ್ಯೂರಿಟಿ ತಜ್ಞ ಸಂದೀಪ್ ಕುಮಾರ್ ಅಕ್ಕಿ ಮುಳ್ಳ ಮಾತನಾಡಿ ಬ್ಯಾಂಕಿಂಗ್ ಟೆಲಿಕಾಂ ಮತ್ತು ಟ್ರೇಡ್ ಸಂಬಂಧಿಸಿದ ನಾಗರಿಕರ ಡೇಟಾ ದೇಶದ ಕಾನೂನು ನೋಡಿ ಸುರಕ್ಷಿತವಾಗಿದೆ ಕಂಪನಿಗಳು ಗ್ರಾಹಕರಿಂದ ಸಂಗ್ರಹಿಸುವ ಹಾಗೂ ಕಂಪನಿ ಡೇಟಾವನ್ನು ನಮ್ಮ ದೇಶದಿಂದ ನಿರ್ವಹಿಸಬೇಕು ಎನ್ನುವ ಬೇಡಿಕೆ ಈಗ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಯೋಜಕ ತಂಡದವರಾದ ಟೆಕ್ನಾಲಜಿ ಲೀಡರ್ ಕೆ ವಿ ಬಾಬಿನ್ಸನ್ ಆನಂದ ಕುಮಾರ ವಸಂತಕೃಷ್ಣ ಮೂರ್ತಿ ಶ್ರೀದೇವಿ ದಕ್ಷಿಣ ಮೂರ್ತಿ ಡಾ. ಸೌಮ್ಯ ಮೈತ್ಯಾ,ದೇಬಶಿಶ್ ದಾಸ್, ಆಶಾ ರಾಜಿ, ಸೈಬರ್ ರಕ್ಷಣೆ ಸಲಹೆಗಾತಿ ಶ್ಲೋಕನಾರಾಯಣ ಮಾತನಾಡಿದರು ರಾಷ್ಟ್ರೀಯ ಕಾನೂನು ಪುರುಷರು ಸಿದ್ಧಾರ್ಥ ಚೌಹಾನ್ ಸಚಿನ್ ದವನ್ ಸೇರಿದಂತೆ ಅನೇಕರು ಇದೇ ವೇಳೆ ಉಪಸ್ಥಿತರಿದ್ದರು.