LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮರಗೆಣಸಿನ ಆರೋಗ್ಯಕಾರಿ ಪ್ರಯೋಜನಗಳು ಗೊತ್ತಾದ್ರೆ ನಿಜಕ್ಕೂ ಅಚ್ಚರಿ

ಸಾಮಾನ್ಯವಾಗಿ ಮಾರ್ಕೆಟ್ ನಲ್ಲಿ ಮರಗೆಣಸು ಸಿಗುವುದು ತುಂಬಾನೇ ವಿರಳ. ಆದರೆ ಒಂದು ವೇಳೆ ಈ ಮರಗೆಣಸನ್ನು ಖರೀದಿಸದೆ ಬಿಡಬೇಡಿ. ಯಾಕೆಂದರೆ ಇದರಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ಗೊತ್ತಾದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ದೇಹದ ತೂಕ ಇಳಿಸುವಲ್ಲಿಂದ ಹಿಡಿದು, ಅಜೀರ್ಣ ಮಲಬದ್ಧತೆಯಂತಹ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.

ನಮಗೆಲ್ಲಾ ಗೊತ್ತೇ ಇರುವ ಹಾಗೆ ಹಿಂದಿನ, ಕಾಲದಲ್ಲಿ ಜನರು, ಕಾಡಿನಲ್ಲಿ ಸಿಗುವ ಕೆಲೆವೊಂದು ಬಗೆಯ ಗಡ್ಡೆಗೆಣಸುಗಳನ್ನು, ತಿಂದು ಜೀವನ ಸಾಗಿಸುತ್ತಿದ್ದರು. ಯಾವುದೇ ರೀತಿಯ ಕಾಯಿಲೆಗಳೂ ಕೂಡ ಇವರು ಬಗ್ಗುತ್ತಿರಲಿಲ್ಲ. ಸರಿಯಾಗಿ ತಿಂದು-ಉಂಡು ಅರೋಗ್ಯಕಾರಿ ಜೀವನ ನಡೆಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಕುಡಿಯುವ ನೀರಿನಿಂದ ಹಿಡಿದು, ಸೇವಿಸುವ ಆಹಾರ ಪದಾರ್ಥಗಳವರೆಗೂ ಕೂಡ ಎಲ್ಲದರಲ್ಲೂ ಕೂಡ ಬದಲಾವಣೆಗಳು ಕಂಡು ಬರುತ್ತಿವೆ.

ಇತ್ತೀಚೆಗೆ ನಾವು ರೂಢಿ ಮಾಡಿಕೊಂಡಿರುವ, ಕೆಟ್ಟ ಜೀವನ ಶೈಲಿ ಹಾಗೂ ಅಸಮರ್ಪಕ ಆಹಾರ ಪದಾರ್ಥ ಗಳು ನಮ್ಮ ಆರೋಗ್ಯವನ್ನು ದಿನೇ ದಿನೇ ಅಪಾಯದ ಕೂಪಕ್ಕೆ ತಳ್ಳುತ್ತಾ ಹೋಗುತ್ತಿದೆ. ಹೀಗಾಗಿಯೇ ಇಂದು ಹಲವಾರು ರೋಗ-ರುಜಿನಗಳು, ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಂಡು, ಮನುಷ್ಯರ ಇರುವ ಆಯಸ್ಸನ್ನು ಕಡಿಮೆ ಮಾಡುತ್ತಿರುವುದು ನಿಜಕ್ಕೂ ಆತಂಕದ ವಿಚಾರ.

ಇವೆಲ್ಲಾ ಸಮಸ್ಯೆಗಳಿಂದ ದೂರವಿರಬೇಕೆಂದರೆ, ಆರೋಗ್ಯಕಾರಿ ಜೀವನಶೈಲಿಯನ್ನು ಅನುಸರಿಸಬೇಕು. ಇದಕ್ಕಾಗಿ ನಮ್ಮ ಹಿರಿಯರು ಅನುಸರಿಸಿಕೊಂಡು ಹೋಗುತ್ತಿದ್ದ ಆಹಾರಪದ್ಧತಿಗಳನ್ನು, ಇಂದು ನಾವು ಕೂಡ ಅದನ್ನೇ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಹಾಗೆಂದು ಅವರ ರೀತಿ ನಾವು ಗಡ್ಡೆ ಗೆಣಸುಗಳನ್ನು ತಿನ್ನಲು ಸಾಧ್ಯವಿಲ್ಲ! ಬದಲಿಗೆ ಕೆಲವೊಂದು ಆಹಾರ ಪದಾರ್ಥ ಗಳನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಅಂತಹ ಆಹಾರಗಳಲ್ಲಿ ಮರಗೆಣಸು ಕೂಡ ಒಂದು…ಮುಂದೆ ಓದಿ

ದೇಹದ ತೂಕ ಇಳಿಸುವವರಿಗೆ

ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಅವರ ದೇಹದ ತೂಕವೇ ದೊಡ್ಡ ಶಾಪ ಎಂದು ಹೇಳಬಹುದು! ಇದಕ್ಕೆಲ್ಲಾ ಮುಖ್ಯ ಕಾರಣ, ಅನಾರೋಗ್ಯಕಾರಿ ಆಹಾರ ಸೇವನೆ, ದೈನಂದಿನ ವ್ಯಾಯಾಮ ಇಲ್ಲದೆ ಇರು ವುದು, ಕೆಲವೊಂದು ಕೆಟ್ಟ ದುರಾಭ್ಯಾಸಗಳು, ನಮ್ಮ ದೇಹದ ತೂಕ ಇನ್ನಿಲ್ಲದಷ್ಟು ಹೆಚ್ಚು ಮಾಡಿ ಬಿಡುತ್ತದೆ! ಹಾಗಾದ್ರೆ ದೇಹದ ತೂಕ ಇಳಿಸಬೇಕೆಂದರೆ ಏನು ಮಾಡಬೇಕು ಎಂದು, ಕೇಳುವವರಿಗೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್! ಅದೇ ಬೇಯಿಸಿದ ಮರಗೆಣಸು ಸೇವಿಸುವುದು, ಇಲ್ಲಾಂದ್ರೆ ಇದರಿಂದ ಮಾಡಿದ ಖಾದ್ಯ ಗಳನ್ನು ಮಿತವಾಗಿ ಸೇವನೆ ಮಾಡುವುದು!ಮರಗೆಣಸಿನಲ್ಲಿ ಯಥೇಚ್ಛವಾಗಿ ನಾರಿನಾಂಶ, ಕಂಡುಬರುವುದರ ಜೊತೆಗೆ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳನ್ನು ಒಳಗೊಂಡಿರುವುದರಿಂದ, ದೇಹದಲ್ಲಿ ಕಟ್ಟ ಕೊಬ್ಬಿನಾಂಶ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.ಅಷ್ಟೇ ಅಲ್ಲದೆ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣಗೊಂಡು, ಜೀರ್ಣಕ್ರಿಯೆಯ ಪ್ರಕ್ರಿಯೆ ಯನ್ನು ಕೂಡ ಸರಿಯಾಗಿ ನಡೆಯುವಂತೆ ನೋಡಿ ಕೊಳ್ಳುತ್ತದೆ. ಇದರಿಂದ ಕ್ರಮೇಣವಾಗಿ ದೇಹದ ತೂಕ ಕೂಡ, ನಿಯಂತ್ರಣಕ್ಕೆ ಬರುತ್ತದೆ.

ಮೈಗ್ರೇನ್ ತಲೆ ನೋವು

ಮೈಗ್ರೇನ್ ತಲೆ ನೋವನ್ನು ಅನುಭವಿಸಿದವರಿಗೆ ಗೊತ್ತು! ಇದರ ನೋವು ಏನೆಂಬುದು..ಒಮ್ಮೆ ಈ ತಲೆ ನೋವು ಶುರುವಾಯಿತು ಎಂದರೆ, ಆಮೇಲೆ ಒಂದೆರಡು ದಿನ, ವ್ಯಕ್ತಿಯನ್ನು ಹಿಂಡಿ ಹಿಪ್ಪೆ ಮಾಡಿ ಬಿಡು ತ್ತದೆ. ಈ ತಲೆನೋವಿನಲಕ್ಷಣಗಳು ಹೇಗಿರುತ್ತದೆ ಎಂದ್ರೆ, ಕೆಲವೊಮ್ಮೆ ಒಂದೇ ಬದಿ, ಕೆಲ ವೊಮ್ಮೆ ನಟ್ಟ ನಡುವೆ ಮಾತ್ರ ನೋವು ಕಾಡಲು ಶುರುವಾಗುತ್ತದೆ. ಹೀಗಾಗಿ ಈ ಸಮಸ್ಯೆ ಇರುವವರು, ಮಿತವಾಗಿ ಮರಗೆಣಸು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಬಹಳ ಒಳ್ಳೆಯದು.ಇಲ್ಲಾಂದ್ರೆ ಹೀಗೆ ಮಾಡಿ ಮರಗೆಣಸಿನ ಎಲೆಗಳು ಅಥವಾ ಬೇರುಗಳನ್ನು ಮೊದಲು, ಚೆನ್ನಾಗಿ ತೊಳೆದು, ಇದನ್ನು ನೀರಿನಲ್ಲಿ ಸುಮಾರು ಒಂದೆರಡು ಗಂಟೆಗಳ ಕಾಲ ನೆನೆಸಿಡಿ. ನಂತರ ಇದರಿಂದ ಜ್ಯೂಸ್ ರೆಡಿ ಮಾಡಿಕೊಂಡು, ಮಿತವಾಗಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಈ ತಲೆನೋವಿನ ಸಮಸ್ಯೆಯಿಂದ ಪಾರಾಗಬಹುದು.

ಸಡನ್ ಆಗಿ ಭೇದಿ ಸಮಸ್ಯೆ ಉಂಟಾದರೆ..

ಭೇದಿ ಶುರುವಾದ ತಕ್ಷಣ ಪ್ರತಿಯೊಬ್ಬರು ಮಾಡುವ ಕೆಲಸ, ವೈದ್ಯರ ಬಳಿಗೆ ತರೆಳಿ ಮಾತ್ರೆ ತಂದು ನುಂಗು ವುದು! ಆ ಕ್ಷಣಕ್ಕೆ ಮಾತ್ರೆ ಬಿಟ್ಟು ಬೇರೆ ಆಯ್ಕೆಯೂ ಇರುವುದಿಲ್ಲ. ಇನ್ನು ಮುಂದೆ ಸಡನ್ ಆಗಿ ಆರೋಗ್ಯ ದಲ್ಲಿ ಏರುಪೇರಾಗಿ, ಭೇದಿ, ಆಮಶಂಕೆ ಇಲ್ಲಾಂದ್ರೆ ಅತಿಸಾರದಂತಹ ಸಮಸ್ಯೆಗಳು ಕಾಡಿದರೆ, ಮರ ಗೆಣಸಿನ ಬೇರುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು, ಒಂದೆರಡು ಲೋಟ ನೀರಿನಲ್ಲಿ, ಇದರ ಬೇರನ್ನು ಕುದಿಸಿ, ದಪ್ಪಗೆ ಗಂಜಿಯ ರೀತಿಯ ದ್ರವವನ್ನು, ಕುಡಿಯುತ್ತಾ ಬರುವುದರಿಂದ ಭೇದಿಯ ಸಮಸ್ಯೆ ಕೂಡಲೇ ನಿವಾರಣೆಯಾಗುತ್ತದೆ.

ಕಣ್ಣಿನ ಸಮಸ್ಯೆಗೆ ಒಳ್ಳೆಯದು

ದೇಹದ ಪ್ರಮುಖವಾದ ಅಂಗಾಂಗಳಲ್ಲಿ ನಮ್ಮ ಎರಡೂ ಕಣ್ಣುಗಳು ಕೂಡ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಪ್ರತಿ ದಿನಾ ನಾವು ನಿದ್ದೆಯಿಂದ ಎದ್ದು, ಕಣ್ಣುಬಿಡುವುದರಿಂದ ಹಿಡಿದು, ರಾತ್ರಿ ಕಣ್ಣು ಮುಚ್ಚಿ ಮಲಗು ವವರೆಗೂ ಕಣ್ಣುಗಳ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಹೀಗಾಗಿ ಇವುಗಳ ಆರೋಗ್ಯದ ಕಾಳಜಿವಹಿಸುವುದು ತುಂಬಾ ಅಗತ್ಯ. ಇನ್ನು ಕಣ್ಣುಗಳ ಆರೋಗ್ಯ ಸರಿಯಾಗಿ ಇರಬೇಕೆಂದರೆ ವಿಟಮಿನ್ ಎ ಅಂಶ ಹೆಚ್ಚಿರುವ ಮರಗೆಣಸಿನ್ನು ಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡುತ್ತಾ ಬಂದರೆ, ಕಣ್ಣಿನ ದೃಷ್ಟಿ ಉತ್ತಮಗೊಂಡು, ಇತರ ಕಣ್ಣಿನ ಸಮಸ್ಯೆ ಗಳು ದೂರವಾಗುತ್ತವೆ.

ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಎದುರಾದರೆ

ಕೆಲವೊಮ್ಮೆ ಸೇವಿಸಿ ಆಹಾರ ಸರಿಯಾಗಿ ಜೀರ್ಣಕ್ರಿಯೆ ಆಗದೇ ಇದ್ದರೆ, ಅಜೀರ್ಣ ಹಾಗೂ ಮಲ ಬದ್ಧತೆ ಸಮಸ್ಯೆ ಎದುರಾಗಿ, ಹೊಟ್ಟೆ ಹಸಿವು ಇರುವುದಿಲ್ಲ ಅಥವಾ ಆಹಾರ ಸೇವಿಸಬೇಕು ಅನಿಸುವುದಿಲ್ಲ.

ಈ ಸಮಸ್ಯೆ ಎದುರಿಸುವವರು, ತಾವು ಸೇವಿಸುವ ದೈನಂದಿನ ಆಹಾರದಲ್ಲಿ, ಬೇಯಿಸಿದ ಮರ ಗೆಣಸಿನ ಸಣ್ಣ ಸಣ್ಣ ಚೂರುಗಳನ್ನು ಮಿಶ್ರಣ ಮಾಡಿ ಸೇವಿಸಿದರೆ, ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ನಡೆದು ಹೊಟ್ಟೆ ಹಸಿವು ವೃದ್ಧಿಯಾಗುತ್ತದೆ.

ಕೊನೆ ಮಾತು

ಮರಗೆಣಸನ್ನು ಸರಿಯಾಗಿ ಬೇಯಿಸಿಕೊಂಡು ಸೇವನೆ ಮಾಡಬೇಕು. ಯಾವುದೇ ಕಾರಣಕ್ಕೂ ಕೂಡ ಇದನ್ನು ಹಸಿಯಾಗಿ ಸೇವನೆ ಮಾಡಬಾರದು. ಇದರಲ್ಲಿ ಸೈನೈಡ್ ಅಂಶ ಹೇರಳವಾಗಿ ಕಂಡು ಬರುವುದ ರಿಂದ, ಸರಿಯಾಗಿ ಬೇಯಿಸದೆ ಹೋದಲ್ಲಿ ಸೈನೈಡ್ ಅಂಶ ಕಾರ್ಬೋಹೈಡ್ರೇಟ್ ಅಂಶದ ಜೊತೆಗೆ ಮಿಶ್ರಣ ವಾಗಿ, ಅನಾರೋಗ್ಯ ಸಮಸ್ಯೆಗಳು ಕಂಡು ಬರುವ ಅಪಾಯ ಹೆಚ್ಚಿರುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಗೆ ತೆರಳುತ್ತಿದ್ದ ವಾಹನ ಬಿಸಿಲೆ ಘಾಟ್ ತಿರುವಿನಲ್ಲಿ ಪಲ್ಟಿ: 20ಕ್ಕೂ ಅಧಿಕ ಮಂದಿಗೆ ಗಾಯನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲುಸಲ್ಮಾನ್ ಖಾನ್ ವಿರುದ್ಧದ ‘ಭಯೋತ್ಪಾದಕ’ ವದಂತಿ ಸುಳ್ಳು - ಪಾಕಿಸ್ತಾನ ಸರ್ಕಾರದ ಅಧಿಕೃತ ಸ್ಪಷ್ಟನೆ!ಆಭರಣ ಪ್ರಿಯರು ಫುಲ್​ ಖುಷ್… ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ‘ಮೊಂಥಾ’ ಚಂಡಮಾರುತ - ಆಂಧ್ರಪ್ರದೇಶದಲ್ಲಿ ಇಬ್ಬರು ಸಾವು‘ಭಾರತದಲ್ಲಿ ಸ್ವತಂತ್ರವಾಗಿ ಧೈರ್ಯದಿಂದ ಬದುಕುತ್ತಿದ್ದೇನೆ., ಬಾಂಗ್ಲಾದೇಶಕ್ಕೆ ಬರಲ್ಲ” – ಶೇಖ್ ಹಸೀನಾ7565 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಿ ಅರ್ಜಿಐಎಎಸ್‌ ತಹಸಿನ್ ಬಾನು ದವಡಿ ಸ್ಪೂರ್ತಿದಾಯಕ ಕಥನಮಾಟಮಂತ್ರದ ಅಪಾಯ ಹೆಚ್ಚು! ತಪ್ಪದೇ ಪಾಲಿಸಬೇಕಾದ 7 ನಿಯಮಗಳಿವುಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಪೊಲೀಸರ ಬಲೆಗೆ.!