LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಾಳೆ ಫೆ. 17 ರಂದು “ಕಿಲಾರಿ ಕಲರವ” ವಿಚಾರ ಸಂಕಿರಣ

 

ಚಿತ್ರದುರ್ಗ: ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗು ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ ) ಸಂಯುಕ್ತಾಶ್ರಯದಲ್ಲಿ ದಿನಾಂಕ 17-02-2025 ರಂದು ಏರುಹೊತ್ತು 10.30 ಕ್ಕೆ ಪಿ. ಜಿ. ಸಭಾಂಗಣದಲ್ಲಿ " ಕಿಲಾರಿ ಕಲರವ " ಪಶುಪಾಲಕ ಬುಡಕಟ್ಟು ಕಿಲಾರಿಗಳ ಅಸ್ಮಿತೆ : ವಿಚಾರ ಮಾತುಕತೆ ಹಾಡಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ ಮಲ್ಲಿಕಾರ್ಜುನ ಕಲಮರಹಳ್ಳಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಧ್ಯ ಕರ್ನಾಟಕದ ಪ್ರಮುಖ ಬುಡಕಟ್ಟುಗಳಾದ ಕಾಡುಗೊಲ್ಲರು ಮ್ಯಾಸಬೇಡರ ಪಾರಂಪರಿಕ ಆಚರಣಾ ವಿಧಿ ವಿಧಾನಗಳಲ್ಲಿ ಕಿಲಾರಿ ಸಂಪ್ರದಾಯವು ಪ್ರಧಾನ ಹಾಗೂ ಮಹತ್ವಪೂರ್ಣವಾಗಿದೆ. ಕಾಡುಗೊಲ್ಲ ಬುಡಕಟ್ಟಿನಲ್ಲಿ ಇತ್ತೀಚೆಗೆ ಈ ಸಂಪ್ರದಾಯ ವಿರಳವಾಗುತ್ತಿದೆ. ಮ್ಯಾಸ ಬೇಡ ಬುಡಕಟ್ಟಿನಲ್ಲಿ ಇಂದಿಗೂ ಕಟ್ಟುನಿಟ್ಟಿನ ಆಚರಣೆಯನ್ನು ಉಳಿಸಿಕೊಳ್ಳಲಾಗಿದೆ. ಗಾದ್ರಿ ಪಾಲನಾಯಕ, ಜಗಳೂರು ಪಾಪನಾಯಕ, ಯರಮಂಚಿ ನಾಯಕ ನಲಗೇತ ಎರಗಯ್ಯ ಮುಂತಾದ ಸಾಂಸ್ಕೃತಿಕ ಅಧಿ ಧೈವಗಳ ಹೆಸರಿನಲ್ಲಿ ಆಚರಣಾತ್ಮಕ ನೆಲೆಯೊಳಗೆ ಗೋವುಗಳನ್ನು ಎತ್ತುಗಳನ್ನು ಹರಕೆ ರೂಪದಲ್ಲಿ ಹಟ್ಟಿಗಳಿಗೆ ಸೇರಿಸಲಾಗುತ್ತದೆ .

ಈ ಮಾದರಿಯ ದೇವರೆತ್ತುಗಳನ್ನು ವಿಧಿ ಬದ್ಧವಾಗಿ ಪೂಜನೀಯವಾಗಿ ಪಾಲನೆ ಪೋಷಣೆ ಮಾಡುವವರನ್ನು ಕಿಲಾರಿಗಳೆಂದು ಕರೆಯಲಾಗುತ್ತಿದೆ. ಈ ಕಿಲಾರಿಗಳು ಪಶುಪಾಲನೆ ಬಗ್ಗೆ ಅಪಾರ ತಿಳುವಳಿಕೆ, ಜ್ಞಾನ ಹೊಂದಿದ್ದು ಅಗಾಧವಾದ ಮೌಖಿಕ ಸಾಹಿತ್ಯವು ಇವರಲ್ಲಿ ಪ್ರಚಲಿತದಲ್ಲಿದೆ.

ಇಂತಹ ವಿಶಿಷ್ಟ ಪರಂಪರೆಯ ಬಗ್ಗೆ ಶೈಕ್ಷಣಿಕ ಚೌಕಟ್ಟಿನಲ್ಲಿ ಕಿಲಾರಿಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಿರುವುದು ಇದೇ ಮೊದಲಬಾರಿ ಎಂಬ ಹೆಗ್ಗಳಿಕೆ ಜಾನಪದ ಅಕಾಡೆಮಿಗೆ ಇದೆ. ಕರ್ನಾಟಕ ಜಾನಪದ ಅಕಾಡೆಮಿ ವರ್ತಮಾನದ ಗುಣಾತ್ಮಕ ಹೊಸ ಹೆಜ್ಜೆಗಳಿಗೆ ಸದಾ ತೆರೆದುಕೊಂಡಿರುತ್ತದೆ.

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದ 12 ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ.!ಮೊಂಥಾ ಚಂಡಮಾರುತ: ಅ. 31ರವರೆಗೂ ಭಾರೀ ಮಳೆ- ಹವಾಮಾನ ಇಲಾಖೆ ಎಚ್ಚರಿಕೆಬೀದಿ ನಾಯಿಗಳ ಹಾವಳಿ ವಿಚಾರ: ವರದಿ ಸಲ್ಲಿಸದ ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ಸುಪ್ರೀಂ​ ತರಾಟೆಅ. 28ರಂದು ಮೊಂಥಾ ಸೈಕ್ಲೋನ್- ಆಂಧ್ರಪ್ರದೇಶ, ಒಡಿಶಾ, ತಮಿಳುನಾಡಿಗೆ ರೆಡ್ ಅಲರ್ಟ್ನ್ಯಾ. ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಹೆಸರಿಸಿದ ನ್ಯಾ. ಗವಾಯಿಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಶೇ.15ರಷ್ಟು ಬಿಪಿಎಲ್ ಕಾರ್ಡ್ ರದ್ದು – ಕೆ.ಎಚ್‌.ಮುನಿಯಪ್ಪದೆಹಲಿಗೆ ದೌಡಾಯಿಸಿದ ಡಿಸಿಎಂ ಡಿಕೆಶಿವರ್ಕ್ ಫ್ರಂ ಹೋಂ ಕೆಲಸ: 12 ಕೋಟಿಗೂ ಅಧಿಕ ಹಣ ವಂಚನೆ.!ಪಿಎಸ್ಐ ಗಾದಿಲಿಂಗಪ್ಪ ವಿರುದ್ಧ ಅತ್ಯಾಚಾರ ಮತ್ತು ಅಟ್ರಾಸಿಟಿ ಕೇಸ್ ದಾಖಲು.!ಮೊಂಥಾ ಚಂಡಮಾರುತದ ಅಬ್ಬರ: ಇಂದಿನಿಂದ 5 ದಿನಗಳ ಕಾಲ ಶಾಲೆ, ಕಾಲೇಜುಗಳಿಗೆ ರಜೆ.!