Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸವದತ್ತಿಯಲ್ಲಿ ಕಿಟ್ ವಿತರಣೆ

ಸವದತ್ತಿ :ರೈಟ್ಸ್ ಸಿ ಎಸ್ ಆರ್ ಲಿಮಿಟೆಡ್ ವತಿಯಿಂದ ಹಾಗೂ ಆಶ್ರಯ ಫೌಂಡೇಶನ್ ಬೆಳಗಾವಿ , ART ಕೇಂದ್ರ ತಾಲೂಕು ಸಾರ್ವಜನಿಕ ಆಸ್ಪತ್ರೆ ಸವದತ್ತಿ ಇವರ ಸಹಯೋಗದೊಂದಿಗೆ ವಿಶೇಷವಾಗಿ ಎಚ್ ಐ ವಿ ಸೋಂಕಿತ ವಿಧವೆಯರಿಗೆ ಸಂಘಟನಾತ್ಮಕ ಪರಿಹಾರಗಳ ಬಗ್ಗೆ ಹದಿಹರೆಯದ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಗುಂಪು ಸಭೆ ಹಾಗೂ ರೇಷನ್ ಕಿಟ್ ವಿತರಣಾ ಕಾರ್ಯಕ್ರಮ ಮತ್ತು ಕಾನೂನಾತ್ಮಕವಾಗಿ ಅರಿವು ಮೂಡಿಸಲು ವಕಾಲತ್ತು ಸಭೆಯನ್ನು ದಿನಾಂಕ:18/07/2023 ಸವದತ್ತಿ ಸರಕಾರಿ ಆಸ್ಪತ್ರೆಯಲ್ಲಿ ನಿಯೋಜಿಸಲಾಗಿತ್ತು.

ಉದ್ಘಾಟನೆಯನ್ನು ಡಾ. H M ಮಲ್ಲನಗೌಡರ ಮುಖ್ಯ ವೈದ್ಯಾಧಿಕಾರಿಗಳು, ಸರಕಾರಿ ಆಸ್ಪತ್ರೆ ಸವದತ್ತಿ ನೆರವೇರಿಸಿದರು.ನಾಗರತ್ನ ಎಸ್. ರಾಮಗೌಡ ಸಂಸ್ಥಾಪಕಿ, ಆಶ್ರಯ ಫೌಂಡೇಶನ್ ಬೆಳಗಾವಿ ಅಧ್ಯಕ್ಷತೆ ವಹಿಸಿದ್ದರು.

ಎಮ್.ಎನ್.ಮುತ್ತಿನಅಧ್ಯಕ್ಷರು, ನ್ಯಾಯವಾದಿಗಳ ಸಂಘ,ಸವದತ್ತಿ ಹಾಗೂಅತಿಥಿಗಳಾಗಿ ಡಾ. ಸಿದ್ಧಾರ್ಥ S.M .ಎ.ಆರ್.ಟಿ.ವೈದ್ಯಾಧಿಕಾರಿಗಳು, S.I .ಡೋಣಿ. STS ಸವದತ್ತಿ, ರೇಣುಕಾ ತೋಟಗಿ ಮತ್ತು ಸಾವಿತ್ರಿ ಶಿಬಾರಗಟ್ಟಿ
ನ್ಯಾಯವಾದಿಗಳು, ಸವದತ್ತಿ HIV ಭಾದಿತ ವಿಧವೆಯರು ಹಾಗೂ ಹದಿಹರೆಯ ಮಕ್ಕಳಿಗೆ ಶಿಕ್ಷಣ, ಮಾನಸಿಕ ಬೆಂಬಲ, ART ಚಿಕಿತ್ಸೆ ಮಹತ್ವ, HIV ಭಾದಿತರಿಗೆ ಇರುವ ಕಾನೂನಾತ್ಮಕ ರಕ್ಷಣೆ, ಕೌಟುಂಬಿಕ ಹಾಗೂ ಸಾಮಾಜಿಕ ಕಳಂಕ ತಾರತಮ್ಯ, ಸಂಘಟನಾತ್ಮಕ ಪರಿಹಾರಗಳ ಬಗ್ಗೆ ಹಾಗೂ ಇಂತಹ ತೊಡಕುಗಳಿಗೆ ಸಾಂಸ್ಥಿಕ ಇತ್ಯಾದಿ ಸೇವೆಗಳ ಅರಿವು ಮತ್ತು ಎಚ್ಐವಿ ಜನರಿಗೆ ಇರುವ ಕಾನೂನು ಸೇವೆಗಳ ಕುರಿತು ವಿವರವಾಗಿ ತಿಳಿಸಿ ಹೇಳಿದರು.ಆಶ್ರಯ ಪೌಂಡೇಶನ್, ಸಂಸ್ಥಾಪಕಿ ಶ್ರೀಮತಿ ನಾಗರತ್ನ ರಾಮಗೌಡ ಪಾಸಿಟಿವ್ ಪ್ರೆವೆನಶನ್ ಕುರಿತು ಮಾಹಿತಿ ನೀಡಿದರು. ಭಾಗವಹಿಸಿದ 49ಕ್ಕೂ ಹೆಚ್ಚು HIV ಭಾದಿತ ವಿಧವೆಯರು ಹಾಗೂ ಮಹಿಳೆಯರು ಮತ್ತು ಲೈಂಗಿಕ ಕಾರ್ಯಕರ್ತರಿಗೆ ಪೌಷ್ಟಿಕ ಆಹಾರ ಕಿಟ್ ಮತ್ತು ಪ್ರೋಟೀನ್ ಪೌಡರ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಯಶಸ್ವಿಗೆ ಸವದತ್ತಿ ತಾಲೂಕು ಆಸ್ಪತ್ರೆ ಎ ಅರ್ ಟಿ ಕೇಂದ್ರದ ಆಪ್ತಸಮಾಲೋಚಕ ಇಸ್ಮೈಲ್ ಹಾಗೂ ಎ ಆರ್ ಟಿ ವಿಭಾಗದ ಎಲ್ಲಾ ಸಿಬ್ಬಂದಿಗಳು ಎಲ್ಲ ಸಿಬ್ಬಂದಿ ವರ್ಗದವರ ಸಹಾಯದಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ