LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಲ್ಯಾಂಡ್ ಲಾರ್ಡ್‌ ಭರವಸೆ ಮೂಡಿಸುವ ಸಿನಿಮಾ.!

 

ಬೆಂಗಳೂರು: ದುನಿಯಾ ವಿಜಯ್, ರಚಿತಾರಾಮ್ ಅಭಿನಯದ ಲ್ಯಾಂಡ್ ಲಾರ್ಡ್‌ ಸಿನಿಮಾ ಎಲ್ಲೆಡೆ ಜೋರಾಗಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಪಾಸಿಟಿವ್ ಚರ್ಚೆಗಳು ನಡೆಯುತ್ತಿವೆ. ಇದೇ ಭರವಸೆಯಲ್ಲಿ ಹೋಗಿ ಸಿನಿಮಾ ವೀಕ್ಷಿಸಿದಾಗ ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ.

ಜಮೀನ್ದಾರಿ ವ್ಯವಸ್ಥೆ, ಅದನ್ನು ಪೋಷಿಸುವ ಜಾತಿ ವ್ಯವಸ್ಥೆ, ಭೂಮಿಯ ಹಕ್ಕಿನ ಪ್ರಶ್ನೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ನೆಲೆಗೊಳಿಸಬೇಕಾದ ತುರ್ತು,ಮಹತ್ವದ ಕುರಿತು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಸಿನಿಮಾದ ಮೊದಲ ಭಾಗದಲ್ಲಿ ಊರಿನ ಸಾಮಾಜಿಕ ಸಂಬಂಧಗಳನ್ನ ಮತ್ತು  ಕೆಲವು ಸನ್ನಿವೇಶಗಳನ್ನ ಸಿನಿಮಾ ಸಹಜವಾಗಿ ಕಟ್ಟಿಕೊಡುತ್ತದೆ. ಆದರೆ, ಹಳ್ಳಿಗಾಡಿನ ಮನೆಗಳನ್ನ ಮತ್ತು ಜೀವನ ವಿಧಾನವನ್ನು ಇನ್ನೊಂದಷ್ಟು ಟ್ಯೂನ್ ಮಾಡಬಹುದಿತ್ತು.

ಸಿನಿಮಾದಲ್ಲಿ ಬರುವ ಭಾವುಕ ಸನ್ನಿವೇಶಗಳು ನೋಡುಗರ ಮನಸ್ಸನ್ನು ತಟ್ಟುತ್ತವೆ. ನಂತರದಲ್ಲಿ ಭೂಮಾಲಿಕರು, ಕೂಲಿ ಕಾರ್ಮಿಕರನ್ನು ನಡೆಸಿಕೊಳ್ಳುವ ಘಟನಾವಳಿಗಳು, ಜಾತಿ ಕ್ರೌರ್ಯದ ತೀವ್ರತೆ ಮನಸ್ಸಿಗೆ ನಾಟುತ್ತಾ ಹೋಗುತ್ತವೆ.

ದೇವದಾಸಿ, ಬಸವಿ ಬಿಡುವ ಪದ್ಧತಿ ಹೇಗೆ ಮಹಿಳಾ ಶೋಷಣೆಯೊಂದಿಗೆ ಹೆಣೆದುಕೊಂಡಿವೆ. ಅಸ್ಪೃಶ್ಯ,   ದಮನಿತ ಜಾತಿಗಳ ಹೆಣ್ಣುಮಕ್ಕಳು ಎಂತೆಂಥಾ ನೆಪದಲ್ಲಿ ಬಲಿಪಶುಗಳಾಗುತ್ತಾರೆ. ಅಂತಹ ಹೆಣ್ಣು ಮಕ್ಕಳೇ ಪ್ರತಿರೋಧಕ್ಕೆ ನಿಂತಾಗ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದನ್ನು ಸಹಾ ತೋರಿಸಲಾಗಿದೆ.

ಇಡೀ ಸಿನಿಮಾದಲ್ಲಿ ಬರುವ ಮಹಿಳಾ ಪಾತ್ರಗಳನ್ನ  ರಾಚಯ್ಯನ ಪಾತ್ರದಷ್ಟೇ ಸಶಕ್ತವಾಗಿ ಕಟ್ಟಿಕೊಡಲಾಗಿದೆ. ಅಭಿನಯದ ವಿಷಯದಲ್ಲಿ ಉಮಾಶ್ರೀ, ದುನಿಯಾ ವಿಜಯ್, ರಚಿತಾರಾಮ್ ಎಲ್ಲರೂ ತಮ್ಮ ಅನನ್ಯತೆಯನ್ನು ಸಾಬೀತು ಮಾಡಿದ್ದಾರೆ.

ಲ್ಯಾಂಡ್ ಲಾರ್ಡ್ ಸಿನಿಮಾವನ್ನು ಇನ್ನೂ ನೋಡದೇ  ಇರುವವರು ಮಿಸ್ ಮಾಡದೆ ನೋಡಿ...

-ಸಿನಿಮಾ ವಿಮರ್ಶಕಿ ಶಾಂತ ಗುಂಡಪ್ಪ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026