ಸಿರುಗುಪ್ಪ :ನಗರದ ಹಳೇ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಾ ಮಂಡಲ ಪೂಜೆಯ ಅಂಗವಾಗಿ ಗಣಪತಿ ಪೂಜೆ, ಕಳಸ ವರ್ಣ ಪೂಜೆ, ಸ್ಚತ್ತವಪುಣ್ಯ ವಾಚನ, ಮಹಾ ಗಣಪತಿ ಹೋಮ, ದೇವಸ್ಥಾನದಲ್ಲಿನ ವಿನಾಯಕ, ದತ್ತಾತ್ರೇಯ, ಅನ್ನಪೂರ್ಣೇಶ್ವರಿ, ಸುಬ್ರಹ್ಮಣ್ಯ ಸ್ವಾಮಿ, ಹನುಮಂತ, ಮಹಾಲಕ್ಷ್ಮಿ ದೇವಿ, ಸಾಯಿಬಾಬ, ಈಶ್ವರ, ಲಕ್ಷ್ಮೀ ವೆಂಕಟೇಶ್ವರ, ಸೀತಾರಾಮ ಹಾಗೂ ಸತ್ಯನಾರಾಯಣ, ನವಗ್ರಹಗಳಿಗೆ ಅಭಿಷೇಕ, ವಿವಿಧ ಹೂಗಳಿಂದ ಅಲಂಕಾರ ನಡೆಸಿದರು.
ಪೂರ್ಣ ಆಹುತಿ ಹೋಮ ಜರುಗಿತು..
ಮಹಾಮಂಡಲ ಪೂಜೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳಿಂದ ಒಂದು ಲಕ್ಷ ಅರ್ಚನೆ ಸಲ್ಲಿಸಿದರು.
ಅಯ್ಯಪ್ಪ ಸ್ವಾಮಿ ಮೂರ್ತಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪ ಅಲಂಕಾರ ದರ್ಶನ ಮಾಡಲಾಯಿತು.
ದೇವಸ್ಥಾನದಲ್ಲಿ ಬಾಳೆ ದಿಂಡಿನಿಂದ ಮಂಟಪ ನಿರ್ಮಿಸಿ ಅಯ್ಯಪ್ಪ ಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಿ, ತುಳಸಿ ಹಾಗೂ ವಿವಿಧ ಹೂಗಳ ಮಾಲೆ ಹಾಕಿ ಅಲಂಕರಿಸಿದ್ದರು. ವೈಭವದಿಂದ ಕಂಗೊಳಿಸಿತ್ತು. ಭಕ್ತಿಗೆ ಮುದು ನೀಡುವಂತೆ ಆಕರ್ಷಣೆಯಾಗಿತ್ತು.
ಸಂಜೆ ದೇಶನೂರು ರಸ್ತೆಯಲ್ಲಿನ ಶ್ರೀ ನಗರೇಶ್ವರ ದೇವಸ್ಥಾನದಿಂದ ಅಯ್ಯಪ್ಪ ಸ್ವಾಮಿ ಭಾವಚಿತ್ರ ಮೆರವಣಿಗೆ ಹಾಗೂ ಜ್ಯೋತಿ ಮತ್ತು ಪಡಿಪೂಜೆ, ಭಜನೆಯೊಂದಿಗೆ ದೇವಸ್ಥಾನದಲ್ಲಿ ಸಂಪನ್ನಗೊಳ್ಳುವುದು.
ಚಿತ್ರ-1

ಬಾಳೆ ದಿಂಡಿನ ಅಲಂಕಾರದಲ್ಲಿ ಕಂಗೊಳಿಸುವ ಅಯ್ಯಪ್ಪ ಸ್ವಾಮಿ ವಿಗ್ರಹ.
ಚಿತ್ರ-2

ಹೋಮದಲ್ಲಿ ಪೂರ್ಣ ಆಹುತಿ ಅರ್ಪಿಸಿದ ಭಕ್ತರು.