
ಪಶ್ಚಿಮ ಬಂಗಾಳದ ಕಲ್ಕತ್ತಾ ನಗರದಲ್ಲಿ 145 ನೇ ಬಿಎಸ್ಎಫ್ ಬೆಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಕೆ. ರಾಮಕೃಷ್ಣ ನಗರದ ಬಂಡಿಮೋಟ್ನ ಉಜ್ಜಯನಿ ಶಾಲೆಯಲ್ಲಿ ಅಭ್ಯಾಸ ಮಾಡಿ, 2002 ರಲ್ಲಿ ಬಿಎಸ್ ಎಫ್ ಸೇನೆಯಲ್ಲಿ ಸೇವೆಗೆ ಸೇರಿದ್ದರು, ಅವರು ತಾಯಿ. ಪತ್ನಿ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಸಕಲ ಸರ್ಕಾರಿ ಗೌವರಗಳೊಂದಿಗೆ ಇಂದು ನಗರದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಈ ಸದರ್ಭದಲ್ಲಿ ಯುವಕರು ಜೈ ಜವಾನ್, ಜೈ ಜವಾನ್, ಭಾರತ್ ಮಾತಾಕಿ ಜೈ ಘೋಷಣಗಳನ್ನು ಕೂಗಿದರು.