LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾದ ಮೋನಿಕಾ ಯಾದವ್

ರಾಜಸ್ಥಾನ : ಮೋನಿಕಾ ಯಾದವ್ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ವಯಸ್ಸು ಎಂದಿಗೂ ಅಡ್ಡಿಯಲ್ಲ ಎಂದು ಸಾಬೀತುಪಡಿಸಿದ್ದಾರೆ. ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್‌ ಮಾಡಿ 22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾಗುವ ಮೂಲಕ ಅವರು ತಮ್ಮ ಕುಟುಂಬಕ್ಕೆ ಕೀರ್ತಿ ತಂದರು. ಅವ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಮೋನಿಕಾ ಯಾದವ್ ರಾಜಸ್ಥಾನದ ಸಿಕಾರ್ ಜಿಲ್ಲೆಯ ಲಿಸಾದಿಯಾ ಗ್ರಾಮದವರು. ಹಿರಿಯ ಆರ್‌ಎಎಸ್ (ರಾಜಸ್ಥಾನ ಆಡಳಿತ ಸೇವೆ) ಅಧಿಕಾರಿ ಹರ್ಫೂಲ್ ಸಿಂಗ್ ಯಾದವ್ ಮತ್ತು ಗೃಹಿಣಿ ತಾಯಿ ಸುನೀತಾ ಯಾದವ್ ದಂಪತಿಗೆ ಜನಿಸಿದ ಮೋನಿಕಾ, ಮೂವರಲ್ಲಿ ಹಿರಿಯ ಮಗಳು.

ಬಾಲ್ಯದಿಂದಲೂ ತನ್ನ ಅಧ್ಯಯನದಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಿದ್ದರು. ನಾಗರಿಕ ಸೇವೆಯಲ್ಲಿನ ಅವರ ತಂದೆಯ ಆಸಕ್ತಿಯಿಂದಲೇ ಸ್ಫೂರ್ತಿ ಪಡೆದರು. 2017ರಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ತೇರ್ಗಡೆಯಾಗಿ, 403ನೇ ರ‍್ಯಾಂಕ್ ಗಳಿಸಿದರು. ಆಗ ಅವರಿಗೆ ಕೇವಲ 22 ವರ್ಷ. ಇದಲ್ಲದೆ ರಾಜಸ್ಥಾನ ನಾಗರಿಕ ಸೇವೆಗಳಲ್ಲಿ 93ನೇ ರ‍್ಯಾಂಕ್, ಎನ್‌ಇಟಿ, ಜೆಆರ್‌ಎಫ್‌, ಸಿಎ ಕಠಿಣ ಪರೀಕ್ಷೆಗಳಲ್ಲೂ ಉತ್ತೀರ್ಣರಾದರು.

ಲಕ್ನೋದ ಭಾರತೀಯ ರೈಲ್ವೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ 78 ವಾರಗಳ ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಪಡೆದರು.ಬಲೋತ್ರಾ ಡಿಎಂ ಮತ್ತು ರಾಜಸ್ಥಾನ ಕೇಡರ್ ಐಎಎಸ್ ಅಧಿಕಾರಿಯಾದ ಸುಶೀಲ್ ಕುಮಾರ್ ಅವರನ್ನು ಮೋನಿಕಾ ಮದುವೆ ಆದರು. . ಮಾರ್ಚ್ 2020ರಲ್ಲಿ ಅವರಿಗೆ ಹೆಣ್ಣು ಮಗು ಜನಿಸಿತು. ಮೋನಿಕಾ ಮಾತೃತ್ವ ರಜೆಯಲ್ಲಿದ್ದಾಗ, ಅವರ ದೇಸಿ ಲುಕ್‌ನ ಫೋಟೋಗಳು ವೈರಲ್ ಆದವು. ಇಬ್ಬರೂ ಆಡಳಿತ ಮತ್ತು ಸಾರ್ವಜನಿಕ ಸೇವೆಯಲ್ಲಿ ಬದಲಾವಣೆ ತರಲು ಕೆಲಸ ಮಾಡಿದರು. ಮೋನಿಕಾ ಅವರ ಸರಳತೆ ಮತ್ತು ಸುಶೀಲ್ ಅವರ ವಾಸ್ತವಿಕ ವಿಧಾನವು ಅವರನ್ನು ಪರಿಪೂರ್ಣ ಜೋಡಿಯನ್ನಾಗಿ ಮಾಡಿದೆ. ಮೋನಿಕಾ ಯಾದವ್ ಮತ್ತು ಸುಶೀಲ್ ಕುಮಾರ್ ಜೋಡಿಯು ನಾಗರಿಕ ಸೇವೆಗಳಲ್ಲಿನ ಯಶಸ್ಸಿನೊಂದಿಗೆ ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವುದು ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026