LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಜಮೀರ್ ಅಹ್ಮದ್​ ದೇಶಪ್ರೇಮವನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ: ಸಚಿವ ಯು.ಟಿ.ಖಾದರ್

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಗೈರುಹಾಜರಾಗಿರುವ ವಿಚಾರವು ಕರಾವಳಿಯಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ನೆಹರೂ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಜಮೀರ್ ಪರ ಬ್ಯಾಟಿಂಗ್ ಮಾಡಿದರೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಪತ್ರದ ಪದಗಳನ್ನು ಹಿಡಿದು ರಾಜಕೀಯ ಮಾಡಬೇಡಿ: ಯು.ಟಿ. ಖಾದರ್

ಸಚಿವ ಜಮೀರ್ ಅಹ್ಮದ್ ಅವರ ನಿಷ್ಠೆ ಹಾಗೂ ದೇಶಪ್ರೇಮದ ಬಗ್ಗೆ ಯಾರೂ ಸಂಶಯ ಪಡುವಂತಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಖಾದರ್, "ಅನಿವಾರ್ಯ ಕಾರಣಗಳಿಂದಾಗಿ ಅವರಿಗೆ ಇಂದಿನ ಸಮಾರಂಭಕ್ಕೆ ಬರಲು ಸಾಧ್ಯವಾಗಿಲ್ಲ. ಈ ಕುರಿತು ಅವರು ಮುಂಚಿತವಾಗಿಯೇ ಅಸಹಾಯಕತೆ ವ್ಯಕ್ತಪಡಿಸಿ ಪತ್ರ ರವಾನಿಸಿದ್ದಾರೆ. ಆ ಪತ್ರದ ಹಿಂದಿರುವ ಸದುದ್ದೇಶವನ್ನು ಅರ್ಥಮಾಡಿಕೊಳ್ಳದೆ, ಕೆಲವೇ ಕೆಲವು ಪದಗಳನ್ನು ಮುಂದಿಟ್ಟುಕೊಂಡು ಅಪಾರ್ಥ ಕಲ್ಪಿಸುವುದು ಮತ್ತು ರಾಜಕೀಯ ಲಾಭ ಪಡೆಯಲು ಯತ್ನಿಸುವುದು ಸರಿಯಲ್ಲ" ಎಂದರು. ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಖಾತೆ ಹಂಚಿಕೆ ಅಸಮಾಧಾನದ ವದಂತಿಗಳನ್ನು ತಳ್ಳಿಹಾಕಿದರು.

ಅಡಿಕೆ ಬೆಳೆಗಾರರಿಗೆ ತೊಂದರೆಯಿಲ್ಲ

ಪಾನ್ ಮಸಾಲ ಹಾಗೂ ತಂಬಾಕು ನಿಷೇಧದ ಬಗ್ಗೆ ಸ್ಪಷ್ಟನೆ ನೀಡಿದ ಖಾದರ್, "ನಿಕೋಟಿನ್ ಮತ್ತು ಗುಟ್ಕಾ ಬೆರೆಸಿದ ಪಾನ್ ಮಸಾಲ ಮಾರಾಟಕ್ಕೆ ಮಾತ್ರ ತಡೆ ನೀಡಲಾಗಿದೆ. ಶುದ್ಧ ಪಾನ್ ಮಸಾಲ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಇದರಿಂದ ಅಡಿಕೆ ಬೆಳೆಗಾರರಿಗೆ ಅಥವಾ ಮಾರುಕಟ್ಟೆಗೆ ಕಿಂಚಿತ್ತೂ ತೊಂದರೆಯಾಗದು. 2014ರಲ್ಲಿ ಗುಟ್ಕಾ ಬ್ಯಾನ್ ಮಾಡಿದಾಗಲೂ ಇಂತಹ ಅಪಪ್ರಚಾರ ನಡೆದಿತ್ತು, ಆದರೆ ಅಡಿಕೆ ಧಾರಣೆ ಕುಸಿಯಲಿಲ್ಲ. ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ" ಎಂದು ನುಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾಮರಾಜನಗರ ಶೂಟೌಟ್: ಅರಣ್ಯಾಧಿಕಾರಿಗಳ ವಿರುದ್ಧ FIR ದಾಖಲು, ತನಿಖೆಯಿಂದಷ್ಟೇ ಸತ್ಯಾಂಶವೆಂದ IGPಮೋದಿ ಮಾದರಿಯಲ್ಲಿ ಸಿಎಂ ಡಿಕೆಶಿ ಭಾಷಣ: ರಾಜ್ಯದಲ್ಲಿ ಮೊದಲ ಬಾರಿಗೆ ಟೆಲಿಪ್ರಾಮ್ಟರ್ ಮೊರೆBIG NEWS: ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಪೊಲೀಸರು ಕೋರ್ಟ್ ಅನುಮತಿ ಪಡೆಯುವುದು ಕಡ್ಡಾಯವಲ್ಲ: ಹೈಕೋರ್ಟ್ ಮಹತ್ವದ ಆದೇಶಕಾವೇರಿ ವನ್ಯಧಾಮದಲ್ಲಿ ಎನ್ ಕೌಂಟರ್ ಬಗ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು ಗೊತ್ತಾ?ಸಾಗರದಲ್ಲಿ ಫಲಾನುಭವಿ ರೈತರಿಗೆ ಸಬ್ಸಿಡಿ ದರದಲ್ಲಿ ಪವರ್ ಟಿಲ್ಲರ್ ವಿತರಣೆ: ಕೃಷಿ ಯಾಂತ್ರೀಕರಣಕ್ಕೆ ಶಾಸಕ ಬೇಳೂರು ಕರೆ2028ಕ್ಕೂ ಡಿ.ಕೆ.ಶಿವಕುಮಾರ್‌ ಅವರೇ ಮುಖ್ಯಮಂತ್ರಿ: ಸಚಿವ ಶಿವರಾಜ್ ತಂಗಡಗಿ ಭವಿಷ್ಯಭ್ರಷ್ಟಾಚಾರ ಮುಕ್ತ, ಸ್ವಚ್ಛ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕೆ ಹೆಚ್.ಎಂ.ರಮೇಶ್ ಗೌಡ ಕರೆನಾಗರ ಪಂಚಮಿ ಆಚರಣೆ ಹೇಗೆ? ವಿಧಾನ ಏನು? ಇಲ್ಲಿದೆ ಮಾಹಿತಿನಾನು ಮೊದಲು ಭಾರತೀಯ, ನಂತರ ಕನ್ನಡಿಗ: ಬಿಜೆಪಿ ವಿರುದ್ಧ ಸಚಿವ ಜಮೀರ್ ಅಹ್ಮದ್ ತಿರುಗೇಟುBIG NEWS: ರಾಜ್ಯದಲ್ಲಿ 'ಸಾರಿಗೆ ಬಸ್ ದರ ಹೆಚ್ಚಳ'ಕ್ಕೆ ಸಚಿವ ಬೈರತಿ ಸುರೇಶ್ ಸಮಿತಿ ರಚನೆ: ಶೀಘ್ರವೇ 'ಟಿಕೆಟ್ ದರ ಏರಿಕೆ' ಫಿಕ್ಸ್