Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ತರಳಬಾಳು ಶ್ರೀಗಳಿಂದ ತುಪ್ಪದಹಳ್ಳಿ ಕೆರೆಗೆ ಬಾಗಿನ ಅರ್ಪಣೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮನುಷ್ಯರ ಪ್ರಯತ್ನ ದೈವಿ ಕೃಪೆಯ ಫಲವಾಗಿ ಅವಳಿ ಯೋಜನೆಯ ಜಗಳೂರು ಕ್ಷೇತ್ರದ 57 ಕೆರೆಗಳು, ಭರಮಸಾಗರದ ವ್ಯಾಪ್ತಿಯ ಕೆರೆಗಳು ನದಿಯ ರೀತಿಯಲ್ಲಿ ತುಂಬಿ ಹರಿಯುತ್ತಿವೆ. ಇದಕ್ಕೆ ತುಪ್ಪದಹಳ್ಳಿಯ ಕೆರೆಯು ಹಳ್ಳದ ರೀತಿಯಲ್ಲಿ

ಹರಿಯದೇ ನದಿಯ ನೀರಾಗಿ ಹರಿಯುತ್ತಿರುವುದೇ ಪ್ರತ್ಯಕ್ಷ ಸಾಕ್ಷಿ ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬಣ್ಣಿಸಿದರು.

ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ತುಪ್ಪದಹಳ್ಳಿ ಕೆರೆಗೆ ಶ್ರೀ ಜಗದ್ಗುರುಗಳವರು ಬಾಗಿನ ಅರ್ಪಿಸಿದ ನಂತರ ತುಪ್ಪದಹಳ್ಳಿ, ಹೆಮ್ಮನಬೇತೂರು, ಬಿಳಿಚೋಡು,ಅಸಗೋಡು ಕುರುಡಿ ಸೇರಿದಂತೆ ಸುತ್ತ-ಮುತ್ತಲಿನ ಪ್ರದೇಶದ ರೈತರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಿ ಸ್ವಾಮೀಜಿ ಮಾತನಾಡಿದರು.

ಮೊಬೈಲ್ ನೆಟ್ ವರ್ಕ್ ತರ ನೀರಿನ ನೆಟ್ವರ್ಕ್ಇದೆ. ಶಾಂತಿವನದ ಜಲಾಶಯ ಕೋಡಿ ಬಿದ್ದರೆ ಭರಮಸಾಗರ ಕೆರೆ ತುಂಬಿದರೆ, ತುಪ್ಪದಹಳ್ಳಿ ಕೆರೆ ತುಂಬಿದ ನಂತರ ಜಗಳೂರಿನಿಂದ ಹರಪನಹಳ್ಳಿ ತಾಲ್ಲೂಕಿನ ಮಾರ್ಗವಾಗಿ ಡಿ.ಬಿ.ಡ್ಯಾಂಗೆ ನೀರು ಹರಿದು ಹೋಗುತ್ತದೆ ಎಂದರು.

ದಾವಣಗೆರೆ ತಾಲ್ಲೂಕಿನ 22 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ನೀರು ತುಂಬಿಸುವ ಯೋಜನೆಗೆ ಹೊಸ ಪೈಪಲೈನ್ ಅಳವಡಿಸುವ ಯೋಜನೆಗೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕೊಡಲು ಸೂಚಿಸಿದ್ದು, ತಕ್ಷಣವೇ ಪೂರ್ಣವಾಗಿ ಹಾಳವಾಗಿರುವ ಹಲವು ಪೈಪ್ಗಳನ್ನು ತೆರುವುಗೊಳಿಸಿ ಅಲ್ಲಿ ತುರ್ತಾಗಿ ಹೊಸ ಪೈಪ್ಗಳನ್ನು ಹಾಕಿ ನೀರು ಹರಿಸಲು ತಿಳಿಸಲಾಗಿದೆ.

 ಜಗಳೂರು ಹಾಗೂ ಭರಮಸಾಗರದ ಎರಡು ಅವಳಿ ನೀರಾವರಿ ಯೋಜನೆಗಳಿಂದ ಬತ್ತಿರುವಕೆರೆಗಳಿಗೆ ಜಲಸಿರಿಯಾಗಿ ನೀರು ಬಂದಿದೆ. ನೀರಿಗಾಗಿ ಹಂಬಲಿಸಿದ ಜನರಿಗೆ ಜಲದಾರೆಯಾಗಿ ಗಂಗೆ ಬಂದಿದ್ದಾಳೆ ಎಂದರು.

ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ ಜಗಳೂರು ಕೆರೆ ನೀರು ತುಂಬಿಸವ ಯೋಜನೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳ ಸರ್ಕಾರಗಳು, ಕ್ಷೇತ್ರದ ಮೂವರು ಶಾಸಕರು ಕೆಲಸ ಮಾಡಿದರೆ ಸಿರಿಗೆರೆ ಶ್ರೀ ಒಬ್ಬರೇ ನೇತೃತ್ವ ವಹಿಸಿದ್ದರ ಫಲವಾಗಿ 57 ಕೆರೆಗಳಿಗೆ ತುಂಗೆ ಭದ್ರೆಯಿಂದ ನೀರು ಬಂದಿದ್ದು, ರೈತರಾದ ನಾವುಗಳು ಸದ್ದಳಿಕೆ ಮಾಡಿಕೊಂಡು ಬದುಕು ಬಂಗಾರ ಮಾಡಿಕೊಳ್ಳಬೇಕೆಂದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಸಿರಿಗೆರೆ ಶ್ರೀಗಳು ಆಧುನಿಕ ಜಲ ಭಗೀರಥರು. ಜಗಳೂರು ಕ್ಷೇತ್ರದ ಕೆರೆಗಳಿಗೆ ನೀರು ಬರುವಂತೆ ಮಾಡಿ ನೀರಾವರಿ ಪ್ರದೇಶ ಮಾಡಿಕೊಟ್ಟಿದ್ದಾರೆ. ಹತ್ತಿ, ಮೆಕ್ಕೇಜೋಳ, ರಾಗಿ, ಬೆಳೆಯುವ ಬಯಲು ಪ್ರದೇಶದಲ್ಲಿ ಮುಂದೆ ನೀರಾವರಿ ಪ್ರದೇಶವಾಗಿ ಮಾರ್ಪಡಲಿದೆ ಎಂದು ಹೇಳಿದರು.



ಕಾರ್ಯಕ್ರಮದಲ್ಲಿ ಹಲವು ಊರಿನ ಮುಖಂಡರು, ಶ್ರೀಮಠದ ಭಕ್ತರು ಸೇರಿದಂತೆ ಮತ್ತಿತರರು ಹಾಜರಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ