LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಈ ದೇವಾಲಯದಲ್ಲಿ ಪಿಜ್ಜಾ, ಪಾನಿಪುರಿಯೇ ಹರಕೆ, ಪ್ರಸಾದ!

ತಮಿಳುನಾಡು : ಭಾರತದ ಹಲವಾರು ದೇವಾಲಯಗಳಲ್ಲಿ ಸಾಮಾನ್ಯವಾಗಿ ತೆಂಗಿನಕಾಯಿ, ಹಣ್ಣು, ಲಡ್ಡು, ಪೇಡಾ, ಪಾಯಸವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಆದರೆ ಗುಜರಾತ್ ಹಾಗೂ ತಮಿಳುನಾಡಿನ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ಹೊಸ ಮತ್ತು ವಿಚಿತ್ರ ಸಂಪ್ರದಾಯವು ದಶಕಗಳಿಂದ ರೂಢಿಯಲ್ಲವೆ. ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್, ಪಾನಿಪುರಿ ಮತ್ತು ಕೋಲ್ಡ್ ಡ್ರಿಂಕ್‌ಗಳನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಅದನ್ನು ಪ್ರಸಾದವಾಗಿ ಮಕ್ಕಳಿಗೆ ಹಂಚಲಾಗುತ್ತದೆ. ಇಂತಹ ಒಂದು ದೇಗುಲದ ಕಥನ ಇದು.

ರಾಜ್‌ಕೋಟ್‌ನ ರಪುತಾನ ಗ್ರಾಮದಲ್ಲಿರುವ ಜೀವಿಕಾ ಮಾತಾಜಿ ದೇವಾಲಯ ಸುಮಾರು 65-70 ವರ್ಷಗಳಿಂದ ಸ್ಥಾಪಿತವಾಗಿದೆ. ಈ ದೇವಲ ಮಕ್ಕಳ ಮಾತೆಯ ದೇವಸ್ಥಾನ ಎಂಬುವುದಾಗಿಯೂ ಪ್ರತೀತಿ ಇದೆ. ಮಕ್ಕಳ ಆಯುಷ್ಯ, ಆರೋಗ್ಯ ಹಾಗೂ ಸಂತೋಷಕ್ಕಾಗಿ ತಾಯಂದಿರು ಮಾಡುವ ಮಾನತಿಯ ಭಾಗವಾಗಿ ಭಕ್ತರು ಮಕ್ಕಳ ಇಷ್ಟದ ಆಹಾರಗಳನ್ನು ಪ್ರಸಾದವಾಗಿ ಅರ್ಪಿಸುತ್ತಾರೆ. ಇದು ಅಲ್ಲಿನ ನಂಬುಗೆ. ಪ್ರಾರಂಭದಲ್ಲಿ ಕೇವಲ ತೆಂಗಿನಕಾಯಿ, ಸಕ್ಕರೆ ಪ್ರಸಾದ ನೀಡಲಾಗುತ್ತಿತ್ತು, ಆದರೆ ಮಕ್ಕಳು ಪಿಜ್ಜಾ, ಬರ್ಗರ್ ಮುಂತಾದ ಆಹಾರಕ್ಕೆ ಹೆಚ್ಚು ಆಕರ್ಷಿತರಾಗಿದ್ದರಿಂದ ದೇವಾಲಯ ಸಮಿತಿಯು ಇದನ್ನು ಪ್ರಸಾದವಾಗಿ ಸ್ವೀಕರಿಸುವ ನಿರ್ಧಾರ ತೆಗೆದುಕೊಂಡಿತು ಎಂದು ಹೇಳಲಾಗಿದೆ.

ಚೆನ್ನೈ ಬಳಿಯ ಪಡಪ್ಪೈನಲ್ಲಿರುವ ಜೈ ದುರ್ಗಾ ಪೀಠಂ ದೇವಾಲಯದಲ್ಲಿಯೂ ಸಹ ಇದೇ ರೀತಿಯ ಸಂಪ್ರದಾಯವು ನಡೆಯುತ್ತಿದೆ. ಈ ದೇವಾಲಯವನ್ನು ಆಂಕೋಲಾಜಿಸ್ಟ್ ಡಾ. ಕೆ. ಶ್ರೀಧರ್ ಸ್ಥಾಪಿಸಿದ್ದರು. ಇಲ್ಲಿ ಭಕ್ತರು ತಮ್ಮ ಮಕ್ಕಳ ಜನ್ಮದಿನವನ್ನು ನೋಂದಾಯಿಸಿ, ದೇವಾಲಯದಲ್ಲಿ ಕೇಕ್ ಕಟ್ ಮಾಡಿಸುತ್ತಾರೆ ಮತ್ತು ಪ್ರಸಾದವಾಗಿ ಹಂಚುತ್ತಾರೆ. ಎಲ್ಲಾ ಆಹಾರಗಳನ್ನು ದೇವಾಲಯದ ಶುದ್ಧ ಅಡುಗೆಮನೆಯಲ್ಲಿ FSSAI ಪ್ರಮಾಣಪತ್ರದೊಂದಿಗೆ ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ.

ಈ ವಿಶಿಷ್ಟ ಪ್ರಸಾದದ ಹಿಂದಿನ ಮುಖ್ಯ ಉದ್ದೇಶ ಮಕ್ಕಳ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಂತೋಷ. ಪ್ರತಿ ಬಾರಿಗೆ ಮಕ್ಕಳ ಇಷ್ಟದ ಆಹಾರವನ್ನು ದೇವರಿಗೆ ಅರ್ಪಿಸುವ ಮೂಲಕ ತಾಯಂದಿರು ತಮ್ಮ ಹರಕೆಯನ್ನು ಪೂರ್ಣಗೊಳಿಸುತ್ತಾರೆ. ಜೊತೆಗೆ, ಭಕ್ತರಿಂದ ಪಡೆದ ದೇಣಿಗೆಗಳನ್ನು ಬಡ ಮಕ್ಕಳ ಶಿಕ್ಷಣ, ಆರೋಗ್ಯ ಸೇವೆಗೆ ಬಳಸಲಾಗುತ್ತವೆ.

ಈ ಎರಡೂ ದೇವಾಲಯಗಳ ಆಧುನಿಕ ಪ್ರಸಾದವು ಭಕ್ತಿ, ಪ್ರೀತಿ ಮತ್ತು ಸಾಮಾಜಿಕ ಸೇವೆಯ ಮಿಶ್ರಣವಾಗಿ ಭಕ್ತರ ಮನಸ್ಸು ಗೆದ್ದಿದೆ. ಮಕ್ಕಳ ಸಂತೋಷ ಮತ್ತು ಆರೋಗ್ಯವನ್ನು ಗಮನಿಸಿದ ಈ ಪ್ರಯತ್ನವು ದೇವಾಲಯ ಸಂಪ್ರದಾಯದಲ್ಲಿ ಹೊಸ ಆಯಾಮವನ್ನು ತಂದಿದ್ದು, “ದೇವರಿಗೆ ಹರಕೆ ಯಾವ ರೂಪದಲ್ಲಿದ್ದರೂ ಭಕ್ತಿ ಮುಖ್ಯ” ಎಂಬ ಸಂದೇಶವನ್ನು ನೀಡುತ್ತದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026