ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆ ವೈ. ದಾದಾವಲಿ
ಸಿರುಗುಪ್ಪ: ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲೂಕಿನ ಬಿ ಎಂ ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಾಗರಹಾಳು ಗ್ರಾಮದ ನಿವಾಸಿಗಳಾಗಿರುವ ವೈ ಆಲಂಬಾಷ ಮತ್ತು ಮಾಲಮ್ಮ ಇವರು ಮೂಲತಃ ಕೃಷಿ ಕುಟುಂಬದವರಾಗಿದ್ದು ಇವರ ಹಿರಿಯ ಮಗ ವೈ ದಾದಾ ವಲಿ 33 ವರ್ಷದ ಯುವಕ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ, ವೃತ್ತಿನಿರತನಾದ ವೈ ದಾದವಲಿ ಬೆಂಗಳೂರಿನ ಅನಗೊಂಡ ಪೊಲೀಸ್ ಠಾಣೆಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಈತನು ತನ್ನ ಕರ್ತವ್ಯವನ್ನು ನಿರ್ವಹಿಸಲು ಹೋಗುವ ಸಮಯದಲ್ಲಿ ಆನ್ ಡ್ಯೂಟಿಗೆ ತನ್ನ ಸ್ವಂತ ಬೈಕ್ ಕೆಎ 53 ಹೆಚ್ ಕೆ 9158 ಎಂಬ ಟಿ ವಿ ಎಸ್ ಕಂಪನಿಯ ಟೂ ವೀಲರ್ ಮೋಟಾರ್ ಸೈಕಲ್ ಗಾಡಿಯಲ್ಲಿ ಪ್ರಯಾಣಿಸುತ್ತಿರುವಾಗ ಕೆ ಎ 53 ಎಬಿ 2046 ಎನ್ನುವ ಟಾಟಾ ಕಂಪನಿಯ ನೀರಿನ ಟ್ಯಾಂಕ್ ಉಳ್ಳ ಲಾರಿ ವಾಹನದ ಚಾಲಕನ ನಿಯಂತ್ರಣ ತಪ್ಪಿ ಕರ್ತವದಲ್ಲಿರುವ ಪೊಲೀಸ್ ವೈ ದಾದವಲಿಯ ಟೂ ವೀಲರ್ ಬೈಕ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಮ್ಮ ಕರ್ನಾಟಕ ಸರ್ಕಾರದ ಸೇವೆಯಲ್ಲಿರುವ ಹೋಲಿಸ್ ಇಲಾಖೆಯ ಒಬ್ಬ ಪೊಲೀಸ್ ನನ್ನು ಕಳೆದುಕೊಂಡಿದೆ, ಈ ಘಟನೆ ನಡೆದ ಸ್ಥಳಕ್ಕೆ ಬೆಂಗಳೂರಿನಲ್ಲಿರುವ ವೈಟ್ಫೀಲ್ಡ್ ರಸ್ತೆಯಲ್ಲಿ ನ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ, ಕೂಡಲೇ ಈ ಘಟನೆ ಕಾರಣವಾದ ಲಾರಿಯನ್ನು ಮತ್ತು ಚಾಲಕನನ್ನು ಸೆರೆಹಿಡಿದು ಪೊಲೀಸರು ತಮ್ಮ ವಶಕ್ಕೆ ಪಡೆದಿದು ಪೋಲಿಸ್ ಇಲಾಖೆ ತನಿಖೆಯನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದೆ , ಮೃತ ಪೊಲೀಸ್ ವೈ ದಾದಾ ವಲಿ ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತನು ದಯಪಾಲಿಸಲೆಂದು ನಾಗರಹಾಳು ಗ್ರಾಮಸ್ಥರು ತಮ್ಮ ಆವೇದನೆಯನ್ನು ಪತ್ರಕರ್ತರೊಂದಿಗೆ ಹಂಚಿಕೊಂಡಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.