LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಸಾಮಾಜಿಕ ಚಳುವಳಿಗಳ ಹಿಂದೆ ಸಂತರಿದ್ದಾರೆ ರಹಮತ್ ತರಿಕೆರೆ.!

 

ಚಿತ್ರದುರ್ಗ : ಸಾಮಾಜಿಕ ಚಳುವಳಿಗಳ ಹಿಂದೆ ಸಂತರಿದ್ದಾರೆ. ಹೊಸ ಸಾಂಸ್ಕøತಿಕ ಪದ್ದತಿಯನ್ನು ಹುಟ್ಟು ಹಾಕುವುದು ಸಾಂಸ್ಕøತಿಯ ಚಳುವಳಿಯ ಮುಖ್ಯ ಭಾಗ ಎಂದು ರಹಮತ್ ತರಿಕೆರೆ ಹೇಳಿದರು.

ಎದ್ದೇಳು ಕರ್ನಾಟಕ, ನಾಡು ನುಡಿ ಬಳಗ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಂಬೇಡ್ಕರ್ ವಿಚಾರ ವೇದಿಕೆ ಸಹಯೋಗದೊಂದಿಗೆ ಧಮ್ಮ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿವಿನ ಚಾವಡಿಯಲ್ಲಿ ನಾಗರೀಕತೆ, ಸಂಸ್ಕøತಿ ಮತ್ತು ಸಾಂಸ್ಕøತಿಕ ಹೋರಾಟ ವಿಷಯ ಕುರಿತು ಮಾತನಾಡಿದರು.

ಪ್ರಗತಿಪರರು, ಪ್ರತಿಗಾಮಿಗಳು ಸಾಂಸ್ಕøತಿಕ ರಾಜಕಾರಣ ಮಾಡುತ್ತಾರೆ. ಧರ್ಮ, ಭಾಷೆ, ನಂಬಿಕೆ, ಪರಂಪರೆ ಇವುಗಳನ್ನೆಲ್ಲಾ ಭಾವನಾತ್ಮಕ ಸಂಬಂಧಗಳಿಗೆ ಬಳಸಿಕೊಂಡು ಜನರನ್ನು ಸಂಘಟಿಸಬಹುದು, ವಿಭಜಿಸಲೂಬಹುದು. ಓಬವ್ವ, ಟಿಪ್ಪು, ಕಿತ್ತೂರುರಾಣಿ ಚೆನ್ನಮ್ಮ, ಇವರುಗಳ ಹೆಸರುಗಳನ್ನು ಬಳಸಿಕೊಂಡು ಸಾಂಸ್ಕøತಿಕ ರಾಜಕಾರಣ ಕಟ್ಟಲಾಗುತ್ತಿದೆ. ಚುನಾವಣೆಗಳನ್ನು ಗೆಲ್ಲಲು ಸಾಂಸ್ಕøತಿಕ ರಾಜಕಾರಣ ಮಾಡುತ್ತಿರುವುದು ಹೊಸದೇನಲ್ಲ. ಸಂಸ್ಕøತಿ ಅನ್ನುವುದೇ ರಾಜಕೀಯ ಪರಿಭಾಷೆಯಾಗಿದೆ. ಸಾಂಸ್ಕøತಿಕ ರಾಜಕಾರಣ ಹಳೆ ಮತ್ತು ಹೊಸ ನಂಬಿಕೆಗಳನ್ನು ಮುಂದುವರೆಸುತ್ತಿದೆ. ಪ್ರತಿನಿತ್ಯ ಸೇವಿಸುವ ಆಹಾರದ ಮೇಲೆ ನಿರಂತರ ದಾಳಿಯಾಗುತ್ತಿರುವುದು ವಿಪರ್ಯಾಸ ಎಂದು ವಿಷಾಧಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕಲಾ ಪ್ರಕಾರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಸಾಂಸ್ಕøತಿಕ ರಾಜಕೀಯ ಹೋರಾಟಕ್ಕೆ ಶಕ್ತಿ ಕೊಡುವ ಆಕಾರಗಳಿವೆ. ಸಾಮಾಜಿಕ ಸಮಾನತೆಗಾಗಿ ಬಾಬಾ ಸಾಹೇಬರ ಹೋರಾಟವಾಗಿತ್ತು. ಕೋರೆಗಾಂವ್ ರಾಜಕೀಯಕ್ಕೆ ಸಂಬಂಧಿಸಿದ್ದು, ಪ್ರಾರ್ಥನೆ, ಉಪ್ಪು, ಚರಕ ಇವುಗಳು ಗಾಂಧಿಜಿಯವರದಾಗಿತ್ತು. ಕೋಮುವಾದ, ಮತಾಂತರ, ಹೆಸರುಗಳ ಬದಲಾವಣೆ, ಸ್ಮಾರಕಗಳ ನಾಶ, ಇಲ್ಲವಾಗಿಸುವುದು, ಸಾಂಸ್ಕøತಿಕ ತಬ್ಬಲಿತನ, ದೀರ್ಘಕಾಲದ ರಾಜಕಾರಣ ಹೊಸ ಆಚರಣೆಗಳ ಸೃಷ್ಠಿ. ಸಾಂಸ್ಕøತಿಕ ಚಳುವಳಿ ಅಭಿಯಾನ ಕರ್ನಾಟಕದ ಚಳುವಳಿಗಿದೆ ಎಂದರು.

ಡಾ.ದೊಡ್ಡಮಲ್ಲಯ್ಯ, ಡಾ.ಮಮತ ಇವರುಗಳು ರಹಮತ್ ತರಿಕೆರೆಯವರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನ-ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಅವರ ವಚನ..ಬಿಜೆಪಿ ಮುಖಂಡನ ಕೊಲೆ ಯತ್ನ ಪ್ರಕರಣ : 6 SDPI ಕಾರ್ಯಕರ್ತರಿಗೆ ಕಠಿಣ ಶಿಕ್ಷೆಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು - ಮೂರು ಬೋಗಿಗಳು ಪಥಭ್ರಷ್ಟಓಲಾ, ಊಬರ್‌ಗೆ ಸವಾಲು - ಭಾರತ್ ಟ್ಯಾಕ್ಸಿಗೆ ಅಧಿಕೃತ ಚಾಲನೆನಾಯಿ ಸಾಕುವವರ ನಿರ್ಲಕ್ಷ್ಯವೇ ಗಲಾಟೆಗೆ ಕಾರಣ: ಹೈಕೋರ್ಟ್‌ ಬೇಸರಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2273 ಹುದ್ದೆ ಖಾಲಿ : ಪದವೀಧರರಿಂದ ಅರ್ಜಿ ಆಹ್ವಾನಮುಂಬೈಯಲ್ಲಿ ಲಿಫ್ಟ್ ಒಳಗೆ ಹೈಡ್ರೋಜನ್ ಬಲೂನ್ ಸ್ಫೋಟ - ಇಬ್ಬರಿಗೆ ಗಾಯ22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾದ ಮೋನಿಕಾ ಯಾದ್‌ ಸ್ಪೂರ್ತಿದಾಯಕ ಕಥೆಕೊನೆಗೂ ಶುಕ್ರ ಕಣ್ಣು ಬಿಟ್ಟ! ಈ ರಾಶಿಗಳಿಗೆ ಅಕ್ಟೋಬರ್ ತನಕ ರಾಜಯೋಗ.. ಶುಕ್ರದೆಸೆ ಯಾರಿಗೆ?ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 05-02-2026 .!