Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ರಾಮಾಯಣ ದರ್ಶನಂ ಮಹಾಕಾವ್ಯ ಭರತ ಖಂಡದ ಧಾರ್ಮಿಕ ಗ್ರಂಥ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಮಾಯಣ ದರ್ಶನಂ, ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಈ ದಿನದಂದು ಅವರ ಜ್ಞಾನದ ವಿಚಾರವನ್ನು ಸ್ಮರಿಸಿ ಭಕ್ತಿ ಭಾವೈಕ್ಯತೆಯಿಂದ ನಮಿಸುತ್ತೇನೆ.


ಮಹರ್ಷಿ ವಾಲ್ಮೀಕಿಯವರ ಬಗ್ಗೆ ಅನೇಕ ಕಥೆಗಳಿವೆ.  ವಾಲ್ಮೀಕಿಯವರು ಹಿಂದೆ ರತ್ನಾಕರ ಎನ್ನುವ ಕಳ್ಳರಾಗಿದ್ದರು ಎನ್ನುವ ಉಲ್ಲೇಖವಿದೆ. ಒಂದು ದಿನ ನಾರದ ಮುನಿಯ ಮಾತುಗಳನ್ನು ಕೇಳುತ್ತಾ, ಅವರು ತನ್ನ ತಪ್ಪುಗಳನ್ನು ಅರಿತುಕೊಂಡು  ಅವರ ಹೃದಯವನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಂಡು ಧರ್ಮದ ಮಾರ್ಗವನ್ನು ಅಳವಡಿಸಿಕೊಂಡರು.

ಶ್ರೀ ರಾಮನ ಹೆಸರನ್ನು ಜಪಿಸುವಂತೆ ನಾರದರು  ವಾಲ್ಮೀಕಿ ಅವರಿಗೆ ಸಲಹೆ ನೀಡಿದ್ದರು. ಈ ವಿಚಾರದ ಕುರಿತಾಗಿ ಪೌರಾಣಿಕ ಹಿನ್ನೆಲೆಯಲ್ಲಿ ನಂಬಲಾಗಿದೆ.

ಆ ಘಳಿಗೆಯಿಂದಲ್ಲೇ ವಾಲ್ಮೀಕಿ ಅವರು ರಾಮ ನಾಮದ ಜಪದಲಿ ಲೀನರಾಗುವ ಮೂಲಕ ತಪಸ್ವಿಯಾದರು. ವಾಲ್ಮೀಕಿ ಮಹರ್ಷಿಗಳ ತಪಸ್ಸಿಗೆ ಸಂತೋಷಗೊಂಡ ಬ್ರಹ್ಮ ದೇವನು ವಾಲ್ಮೀಕಿ ಅವರಿಗೆ ಜ್ಞಾನದ ಭಂಡಾರವನ್ನು ವರವಾಗಿ ಕೊಟ್ಟರು. ಜ್ಞಾನಾರ್ಜನೆಯ ವಿಚಾರಧಾರೆಯಿಂದ ಮಹರ್ಷಿಗಳು ರಾಮಾಯಣವನ್ನು ರಚಿಸಿದರು.  ಹಿಂದೂ ಧರ್ಮದಲ್ಲಿ ರಾಮಾಯಣವನ್ನು ಪೂಜಿಸಲಾಗುತ್ತದೆ. ರಾಮಾಯಣ ದರ್ಶನಂ ಮಹಾಕಾವ್ಯ ಭರತಖಂಡದ ಧಾರ್ಮಿಕ ಗ್ರಂಥವಾಗಿದೆ.

ಭರತಖಂಡದ ಐತಿಹಾಸಿಕ ಪರಂಪರೆಯಲ್ಲಿ ಎರಡು ಗ್ರಂಥಗಳಿವೆ ಒಂದು ರಾಮಾಯಣ ಮತ್ತೊಂದು ಮಹಾಭಾರತ. ರಾಮಾಯಣವನ್ನು ಶ್ರೀ ವಾಲ್ಮೀಕಿ ಮಹರ್ಷಿಗಳು ರಚಿಸಿದರೆ. ಮಹಾಭಾರತವನ್ನು ಶ್ರೀ ವ್ಯಾಸ ಮಹರ್ಷಿಗಳು ರಚಿಸಿದ್ದಾರೆ.

ಈ ಎರಡು ಮಹಾಕಾವ್ಯಗಳ ಬಗ್ಗೆ ಜ್ಞಾನ ಉಳ್ಳವರು ನ್ಯಾಯ, ನೀತಿ, ನಂಬಿಕೆ, ಸತ್ಯ, ಕರುಣೆ, ಧರ್ಮ ಕರ್ಮಗಳ ವಿಶ್ವಾಸವನ್ನು ಮೈಗೂಡಿಸಿಕೊಂಡು ನಾಗರಿಕ ಸಮಾಜದಲ್ಲಿ ಆದರ್ಶವಾಗಿ ಬದುಕು ಕಂಡಿದ್ದಾರೆ. ಲೇಖನ:ರಘು ಗೌಡ 9916101265

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ