ಶಿವಶಂಕರ್ ಅರಳಿಮಟ್ಟಿ ನಿಧನ
ಜನ ಜೀವಾಳ ಜಾಲ ಬೆಳಗಾವಿ: ಆದರ್ಶ ಶಿಕ್ಷಕ, ಸಾಹಿತಿ, ಅಥಣಿ ಮೂಲದ ಶ್ರೀ ಶಿವಶಂಕರ್ ಅರಳಿಮಟ್ಟಿ (೯೬) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಬೆಳಗಾವಿಯ ರಾಣಿ ಚೆನ್ನಮ್ಮ ನಗರದ ಸ್ವಗೃಹದಲ್ಲಿ ನಿಧನ ಹೊಂದಿದರು. ಶ್ರೀಯುತರು ಸೆಂಟ್ ಫಾಲ್ ಮತ್ತು ಕೆಎಲ್ಇ ಸಂಸ್ಥೆಯ ಜಿ ಎ ಹೈಸ್ಕೂಲ ದಲ್ಲಿ ಶಾರೀರಿಕ ಶಿಕ್ಷಣ ಮತ್ತು ವಿಜ್ಞಾನ ಬೋಧಕರಾಗಿ ಜನಪ್ರಿಯರೆನಿಸಿದ್ದರು. ಅವರು ಕ್ರೀಡಾಂಗಣ ಮಾಸಪತ್ರಿಕೆ ಸಂಪಾದಕರಾಗಿ ಉದಯ ಪ್ರಕಾಶನ ಸಂಸ್ಥೆಯ ಪ್ರಾರಂಭಿಸಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದರು. 1960ರ ದಶಕದಲ್ಲಿ ಸಂಗೊಳ್ಳಿ ರಾಯಣ್ಣ ಕನ್ನಡ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. 95 ವರ್ಷಗಳ ತುಂಬ ಜೀವನ ಕಂಡ ಎಸ್ ಎಂ ಅರಳಿಮಟ್ಟಿ ಹಳೆ ತಲೆಮಾರಿನ ಶಿಕ್ಷಕರಾಗಿ ಅನೇಕ ಮಾನ ಸನ್ಮಾನಗಳಿಗೆ ಪಾತ್ರರಾಗಿದ್ದರು. ಅವರು ಪತ್ನಿ ಮೂವರು ಗಂಡು ಮಕ್ಕಳು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ಇಚ್ಛೆಯಂತೆ ಅವರ ಪ್ರಾರ್ಥಿವ ಶರೀರವನ್ನು ಕೆಎಲ್ಇ ಸಂಸ್ಥೆಯ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ಅರ್ಪಿಸಲಾಗಿದೆ. ಈ ಸಂದರ್ಭದಲ್ಲಿ ಬೆಳಗಾವಿ ಕಾರಂಜಿ ಮಠದ ಪರಮಪೂಜ್ಯಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು, ಹಿರಿಯ ಸಾಹಿತಿ ಪ್ರಾಚಾರ್ಯ ಬಿಎಸ್ ಗವಿಮಠ, ಡಾಕ್ಟರ್ ಬಸವರಾಜ್ ಜಗಜಂಪಿ, ಪ್ರಾಚಾರ್ಯ ಹೆಗಡೆ, ಪ್ರೊಫೆಸರ್ ಹೆಗಡೆ ಪ್ರೊಫೆಸರ್ ಮೋಜುಗಾರ ಮಾಂತೇಶ್ ಹಿರೇಮಠ್ ಶ್ರೀ ನಿರಲ್ಗಿಮಠ ಉಪಸ್ಥಿತರಿದ್ದರು. ಅವರ ಅಗಲಿಕೆ ದುಃಖವನ್ನುಂಟು ಮಾಡಿದೆ ಎಂದು ಕೆ ಎಲ್ ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ತೀವ್ರ ದುಃಖ ವ್ಯಕ್ತಪಡಿಸಿ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.