Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕಬ್ಬು : ರೈತರ ಕಾಮಧೇನು- ಪುಸ್ತಕ ಲೋಕಾರ್ಪಣೆ

 

ಬೆಳಗಾವಿ :
ನಗರದ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ದಿ.ವಿ.ಎಸ್.ಹಂಜಿಯವರ ಕಬ್ಬು ರೈತರ ಕಾಮಧೇನು ಪುಸ್ತಕ ಲೋಕಾರ್ಪಣೆ ಮಾಡಲಾಯಿತು.

ಡಾ.ಎ.ಪಿ ಬಿರಾದಾರ ಪಾಟೀಲ ಕೃತಿಯ ಕುರಿತು ಮಾತನಾಡಿ, ಕಬ್ಬು ಬೆಳೆಯುವ ಪ್ರತಿ ಹಂತಗಳು ಹಾಗೂ ಅದರ ಸಂಸ್ಕರಣೆ ಕುರಿತಂತೆ ಈ ಕೃತಿ ಸವಿವರ ಮಾಹಿತಿಯನ್ನು ಒಳಗೊಂಡಿದೆ ,ಇದರ ಸದುಪಯೋಗ ಕಬ್ಬು ಕೃಷಿಯಲ್ಲಿ ತೊಡಗಿಕೊಂಡ ಪ್ರತಿಯೊಬ್ಬರು ಈ ಕೃತಿಯನ್ನು ಸಂಪನ್ಮೂಲವಾಗಿ ಬಳಬಹುದಾದ ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಬಸವರಾಜ ಜಗಜಂಪಿ ಮಾತನಾಡಿ, ಪುಸ್ತಕ ಶಾಶ್ವತವಾಗಿ ಉಳಿಯುದರಿಂದ ಅವರ ಕೃಷಿ ಅನುಭವ ಕೃತಿ ರೂಪದಲ್ಲಿ ಆಸಕ್ತ ಕೃಷಿಕರಿಗೆ ದಾರಿದೀಪವಾಗಲಿದೆ ಎಂದರು.

ಡಾ.ಆರ್.ಬಿ.ಖಂಡಗಾವೆ ಮಾತನಾಡಿ, ಹಂಜಿಯವರ ಒಡನಾಟ ಹಾಗೂ ಕಬ್ಬಿನ ಬೆಳೆಯ ಕುರಿತು ಈ ಪುಸ್ತಕದಲ್ಲಿ ಸವಿವರ ನೀಡುವಲ್ಲಿ ಶ್ರಮವಹಿಸಿ ದಾಖಲಿಸಿದ್ದಾರೆ ಎಂದು ಹೇಳಿದರು.

ಡಾ.ಅಶೋಕ ಪಾಟೀಲ ಕೃತಿ ಬಿಡುಗಡೆಗೊಳಿಸಿ ಮಾತನಾಡಿ , ಕಬ್ಬು ಕೃಷಿಯಲ್ಲಿ ಅಧಿಕ ಇಳುವರಿ ಪಡೆಯಲು ಬೇಕಾಗುವ ಮಾರ್ಗಗಳನ್ನು ಲೇಖಕ ವೀರಭದ್ರಪ್ಪ ಹಂಜಿ ಅವರು ಸ್ವತಃ ಅನೇಕ ಪ್ರಯೋಗಗಳನ್ನು ಮಾಡಿ ಅದನ್ನು ಪುಸ್ತಕದಲ್ಲಿ ದಾಖಲಿಸಿದ್ದು ಸಾರ್ಥಕವಾಗಿದೆ ಎಂದು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಸಂಜಯ ಹಂಜಿ, ತಂದೆಯವರ ಆಶೆಯದಂತೆ ಈ ಪುಸ್ತಕದ ಇಂದು ಪ್ರಕಟಗೊಂಡು ಲೋಕಾರ್ಪಣೆ ಆಗುತ್ತಿರುವ ಹಿನ್ನಲೆಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು.

ಲೇಖಕರ ಪರ ಅವರ ನಂದಾ ಹಂಜಿ ಮಾತನಾಡಿ, ಪತಿಯ ಸಾಹಿತ್ಯ ಪ್ರೇಮ ಹಾಗೂ ಸೇವಾಕ್ಷೇತ್ರದ ಅನುಭವಗಳನ್ನು ಹಂಚಿಕೊಂಡರು.

ಹಂಜಿ ಅವರ ಒಡನಾಡಿ, ಆರ್. ಬಿ.ಕಲ್ಯಾಣಿ ಹಾಗೂ ರೈತ ಧುರೀಣ ಪಿ.ಎಸ್.ಬೋಗುರ ಮಾತನಾಡಿ ಅವರ ಜೊತೆ ಕೆಲಸ ಮಾಡಿದ ತೃಪ್ತಿ ಇದೆ ಎಂದು ಹೇಳಿದರು.

ಕೃತಿಗೆ ಅಕ್ಷರ ಜೋಡಣೆ ಕಾರ್ಯವನ್ನು ಮಾಡಿದ ಆರ್. ಆರ್. ಪಾಟೀಲವರನ್ನು ಕಲ್ಯಾಣಿ ಸನ್ಮಾನಿಸಿಲಾಯಿತು. ಸಿದ್ದಾರ್ಥ ಹಂಜಿ ಪ್ರಾರ್ಥಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ವಿನೋದ ಪಾಟೀಲ ವಂದಿಸಿದರು
ಹಂಜಿ ಪರಿವಾರದವರು, ಬಂಧು- ಮಿತ್ರರು ಹಾಗೂ qಅವರ ಅಭಿಮಾನಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ